ಜಾಧವ್‌ ವಿರುದ್ಧದ ಆರೋಪಪಟ್ಟಿ ಕೊಡಿ: ಪಾಕ್‌ಗೆ ಭಾರತ ಆಗ್ರಹ


Team Udayavani, Apr 15, 2017, 3:50 AM IST

14-PTII-9.jpg

ಇಸ್ಲಾಮಾಬಾದ್‌/ನವದೆಹಲಿ: ಗೂಢಚರ್ರೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೊಳಗಾದ ವಾಯುಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿರುದ್ಧ ಹೊರಿಸಲಾದ ಆರೋಪಗಳ ಪಟ್ಟಿಯನ್ನು ಹಾಗೂ ತೀರ್ಪಿನ ಪ್ರತಿಯನ್ನು ಕೊಡಿ ಎಂದು ಪಾಕ್‌ಗೆ ಭಾರತ ಕೇಳಿದೆ. ಇದರೊಂದಿಗೆ ಜಾಧವ್‌ ಅವರನ್ನು ಭೇಟಿ ಮಾಡಲು ರಾಯಭಾರಿಗೆ ಅವಕಾಶ ಮಾಡಿಕೊಡುವಂತೆ 14ನೇ ಬಾರಿಗೆ ಕೇಳಿಕೊಂಡಿದ್ದು, ಪಾಕ್‌ ಸರ್ಕಾರ ಅದಕ್ಕೆ ಸ್ಪಷ್ಟ ನಿರಾಕರಣೆ ನೀಡಿದೆ. 

ಜಾಧವ್‌ ವಿಚಾರದಲ್ಲಿ ಪಾಕ್‌ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರನ್ನು ಶುಕ್ರವಾರ ಭೇಟಿಯಾದ ಭಾರತೀಯ ರಾಯಭಾರಿ ಗೌತಮ್‌ ಬಂಬಾÌಲೆ ಅವರು, ಜಾಧವ್‌ ಸಂಪರ್ಕಕ್ಕೆ ಅನುವು ಮಾಡಲು ಒತ್ತಡ ಹೇರಿದ್ದಾರೆ. ಜಾಧವ್‌ ವಿರುದ್ಧದ ಆರೋಪ ಪಟ್ಟಿಯ ಪ್ರಮಾಣೀಕೃತ ಪ್ರತಿ ಮತ್ತು ಜಾಧವ್‌ ವಿರುದ್ಧ ಮರಣದಂಡನೆ ವಿಧಿಸಲಾದ ಕೋರ್ಟ್‌ ತೀರ್ಪಿನ ಪ್ರತಿಯನ್ನು ನೀಡುವಂತೆ ಆಗ್ರಹಿಸಲಾಗಿದೆ ಎಂದು ಗೌತಮ್‌ ಹೇಳಿದ್ದಾರೆ. ಜೊತೆಗೆ ರಾಯಭಾರಿ ಭೇಟಿಗೆ 14ನೇ ಬಾರಿಗೆ ಕೇಳಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಗೌತಮ್‌ ಅವರ ಯತ್ನ ಫ‌ಲಕಾಣಲಿಲ್ಲ.

ಇನ್ನು ಜಾಧವ್‌ ವಿಚಾರದಲ್ಲಿ ಭಾರತ ರಾಜತಾಂತ್ರಿಕ ಯತ್ನಗಳನ್ನು ಮುಂದುವರೆಸುವುದಲ್ಲದೇ, ಗಲ್ಲು ಶಿಕ್ಷೆ ಕುರಿತ ಆದೇಶದ ವಿರುದ್ಧ ಜಾಧವ್‌ ಕುಟುಂಬದಿಂದಲೂ ಮೇಲ್ಮನವಿ ಸಲ್ಲಿಸುವ ಬಗ್ಗೆ ಭಾರತ ಆಲೋಚಿಸುತ್ತಿದೆ. 

ವಕಾಲತ್ತು ವಹಿಸದಂತೆ ಆದೇಶ: ಗಲ್ಲುಶಿಕ್ಷೆಗೊಳಗಾದ ಜಾಧವ್‌ ವಿರುದ್ಧ ವೃತ್ತಿನಿರತ ವಕೀಲರು ವಕಾಲತ್ತು ನಡೆಸದಂತೆ ಲಾಹೋರ್‌ ಹೈಕೋರ್ಟ್‌ ಬಾರ್‌ ಅಸೋಸಿಯೇಷನ್‌ ಆದೇಶಿಸಿದೆ. ಅಲ್ಲದೇ ಒಂದು ವೇಳೆ ವಕಾಲತ್ತು ನಡೆಸಿದಲ್ಲಿ ಅವರ ಸದಸ್ಯತ್ವ ರದ್ದುಗೊಳಿಸಲು ಅದು ಒಮ್ಮತದ ತೀರ್ಮಾನ ಕೈಗೊಂಡಿದೆ. ಜೊತೆಗೆ ಜಾಧವ್‌ ವಿಚಾರದಲ್ಲಿ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯಬಾರದು ಎಂದು ಅದು ಸರ್ಕಾರಕ್ಕೆ ಹೇಳಿದೆ.

ಜಾಧವ್‌ ಬದುಕಿದ್ದಾರೆಯೇ ಎಂದು ಪಾಕ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ: ಜಾಧವ್‌ ಅವರು ಬದುಕಿರುವ ಬಗ್ಗೆ ಖಚಿತ ಪಡಿಸಲು ಪಾಕ್‌ ಕೋರ್ಟ್‌ ಮೆಟ್ಟಿಲೇರುವಂತೆ ನಿವೃತ್ತ ಮೇ.ಜ.ಜಿ.ಡಿ.ಭಕ್ಷಿ ಅವರು ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಸರ್ಕಾರ ಜಾಧವ್‌ ಪರವಾಗಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಸಲ್ಲಿಸಬೇಕು. ಜಾಧವ್‌ ಅವರನ್ನು ಪಾಕ್‌ ವಿಪರೀತ ಚಿತ್ರಹಿಂಸೆ ಕೊಟ್ಟು ಮೊದಲೇ ಕೊಂದಿರಬಹುದು. ಈಗ ಅದು ಗಲ್ಲುಶಿಕ್ಷೆಯ ನಾಟಕವಾಡುತ್ತಿರಬಹುದು ಎಂದು ಶಂಕಿಸಿದ್ದಾರೆ.

ಅಮೆರಿಕದಲ್ಲಿ ಪ್ರತಿಭಟನೆ: ಜಾಧವ್‌ ಅವರಿಗೆ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಈಗ ಅಮೆರಿದಲ್ಲೂ ಪ್ರತಿಭಟನೆ ನಡೆದಿದೆ. ಅಮೆರಿಕನ್‌ ಫ್ರೆಂಡ್ಸ್‌ ಆಫ್ ಬಲೂಚಿಸ್ತಾನ್‌ (ಎಎಫ್ಬಿ) ಹೆಸರಿನ ಬಲೂಚಿಸ್ತಾನ ಪರ ಸಂಘಟನೆ ಮೋಂಬತ್ತಿ ಬೆಳಕಿನ ಪ್ರತಿಭಟನೆಯನ್ನು ವಾಷಿಂಗ್ಟನ್‌ನಲ್ಲಿ ನಡೆಸಿದೆ. ಈ ಪ್ರತಿಭಟನೆಯಲ್ಲಿ ಬಲೂಚಿಗಳು, ಭಾರತೀಯರು, ಆಫ‌^ನ್ನರು ಮತ್ತು ಯಹೂದಿ ಸಮುದಾಯದವರು ಭಾಗಿಯಾಗಿದ್ದರು. ಅಲ್ಲದೇ ಪಾಕ್‌ ಜಾಧವ್‌ ಅವರನ್ನು ಗಲ್ಲಿಗೇರಿಸುವುದನ್ನು ಅಂತಾರಾಷ್ಟ್ರೀಯ ಸಮುದಾಯ ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಪಾಕಿಸ್ತಾನ ಮಾಡಿರುವ ಆರೋಪಗಳೇನು? 
ಗಲ್ಲುಶಿಕ್ಷೆಗೊಳಗಾದ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿರುದ್ಧ ಪಾಕಿಸ್ತಾನ ಅಧಿಕೃತ 
ಆರೋಪ ಪಟ್ಟಿಯನ್ನು ಭಾರತಕ್ಕೆ ನೀಡದಿದ್ದರೂ, ಕೆಲವೊಂದು ಆರೋಪ ಗಳನ್ನು ಅದು ಹೇಳಿದೆ. ಈ ಸಂಬಂಧ ಶುಕ್ರವಾರ ಪಾಕ್‌ ವಿದೇಶಾಂಗ ನೀತಿ ಮುಖ್ಯಸ್ಥ ಸರ್ತಾಜ್‌ ಅಜೀಜ್‌ ಅವರು, ಪತ್ರಿಕಾಗೋಷ್ಠಿಯಲ್ಲಿ ಜಾಧವ್‌ ವಿರುದ್ಧದ ಆರೋಪಗಳನ್ನು ಹೇಳಿದ್ದಾರೆ. ಆದರೆ ಜಾಧವ್‌ ಅವರ ಭಾಗೀದಾರಿಕೆ ಯನ್ನು ಹೇಳುವ ಕುರಿತ ಸಾಕ್ಷ್ಯಗಳನ್ನು ಅವರು ನೀಡಲಿಲ್ಲ. 

ಬಲೂಚಿಸ್ತಾನ ಪ್ರಾಂತ್ಯದ ಗÌದಾರ್‌ ಮತ್ತು ತುರ್ಬಾತ್‌ನಲ್ಲಿ ಸುಧಾರಿತ ಸ್ಫೋಟಕ ಮತ್ತು ಗ್ರೆನೇಡ್‌ ದಾಳಿಯ ನಿರ್ದೇಶನ ಮತ್ತು ಪ್ರಾಯೋಜಕತ್ವ.
ಧಿl    ಜಿವಾನಿ ಬಂದರಿನಲ್ಲಿ ನಾಗರಿಕ ದೋಣಿಗಳು ಮತ್ತು ರಾಡಾರ್‌ ಸ್ಟೇಷನ್‌ ಮೇಲೆ ದಾಳಿಗೆ ನಿರ್ದೇಶನ. 
ಧಿl    ಹವಾಲಾ/ಹುಂಡಿಗಳ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಸಂಘಟನೆಗಳಿಗೆ ಹಣ. ವಿಶೇಷವಾಗಿ ಬಲೂಚಿಸ್ತಾನದಲ್ಲಿ  ದೇಶದ ವಿರುದ್ಧ ಚಟುವಟಿಕೆ ನಡೆಸಲು ಯುವಕರಿಗೆ ಪ್ರೇರಣೆ. 

ಬಲೂಚಿಸ್ತಾನದ ಸಿಬಿ ಮತ್ತು ಸುಯಿ ಪ್ರದೇಶದಲ್ಲಿ ಗ್ಯಾಸ್‌ ಪೈಪ್‌ಲೈನ್‌, ಎಲೆಕ್ಟ್ರಿಕ್‌ ಮಾರ್ಗ ನ್ಪೋಟಕ್ಕೆ ಸ್ಫೋಟಕಗಳ ಪ್ರಾಯೋಜಕತ್ವ 

2015ರಲ್ಲಿ ಕ್ವೆಟ್ಟಾದಲ್ಲಿ ನಡೆದ ದಾಳಿಗೆ ಸುಧಾರಿತ ಸ್ಫೋಟಕದ ಪ್ರಾಯೋಜಕತ್ವ. ಇದರಲ್ಲಿ ಅಪಾರ ಜನ ಮೃತಪಟ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು. 

ಕ್ವೆಟ್ಟಾದ ಹಜರಾಸ್‌ ಮತ್ತು ಶಿಯಾ ಝೈರಿನ್‌ ಯಾತ್ರಾ ಸ್ಥಳದಲ್ಲಿ ದಾಳಿಗೆ ಪ್ರಾಯೋಜಕತ್ವ. 

ಪಾಕ್‌ನ ಗ್ವಾದಾರ್‌, ತುರ್ಬಾತ್‌, ಪುಂಜ್‌ಗುರ್‌, ಪಾಸ್ನಿ, ಜಿವಾನಿಯಲ್ಲಿ 2014-15ರ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಡೆಗಳು, ನಿರ್ಮಾಣ ಕಾಮಗಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸಲು ದೇಶ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು. ಇಲ್ಲಿ ನಡೆದ ದಾಳಿಗಳಲ್ಲಿ ಹಲವಾರು ನಾಗರಿಕರು ಮತ್ತು ಸೈನಿಕರು ಮೃತಪಟ್ಟಿದ್ದಾರೆ. 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.