ಕಾಶ್ಮೀರ ಕಗ್ಗಂಟು ಇತ್ಯರ್ಥಕ್ಕೆ ದೀರ್ಘಾವಧಿ ಯೋಜನೆ ಬೇಕು: ಪರ್ರೀಕರ್
Team Udayavani, Apr 15, 2017, 3:23 PM IST
ಪಣಜಿ : ಕಾಶ್ಮೀರ ಪ್ರಶ್ನೆಯನ್ನು ಸುಲಭದಲ್ಲಿ ಬಗೆ ಹರಿಸಲಾಗದು; ಅದೊಂದು ಮಹಾ ಕಗ್ಗಂಟು. ಅದನ್ನು ದೀರ್ಘಾವಧಿಯ ಯೋಜನೆಯಿಂದ ಮಾತ್ರವೇ ಬಗೆ ಹರಿಸಲು ಸಾಧ್ಯ ಎಂದು ಗೋವೆಯ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ರಕ್ಷಣಾ ಮಂತ್ರಿಯಾಗಿ ದಿಲ್ಲಿಯಲ್ಲಿ ಇದ್ದಷ್ಟು ಕಾಲವೂ ತಾನು ಕಾಶ್ಮೀರ ಸಮಸ್ಯೆಯ ಮಹಾ ಒತ್ತಡಕ್ಕೆ ಗುರಿಯಾಗಿದ್ದೆ ಎಂದು ಪರ್ರೀಕರ್ ಹೇಳಿದರು.
ಪಾಕಿಸ್ಥಾನ ಒಂದು ಖಾಲಿ ಹಡಗು
ಪಾಕಿಸ್ಥಾನ ಒಂದು ಖಾಲಿ ಹಡಗು; ಹಾಗಾಗಿ ಅದು ಸದ್ದು ಮಾಡುತ್ತಲೇ ಇರುತ್ತದೆ. ಭಾರತದೊಂದಿಗೆ ಹೇಗಾದರೂ ಮಾಡಿ ತಾನು ಮಾತುಕತೆಯ ಪ್ರಕ್ರಿಯೆಯಲ್ಲಿ ಇರುವುದಕ್ಕೆ ಅದು ಏನನ್ನಾದರೂ ಮಾಡುತ್ತಲೇ ಇರುತ್ತದೆ ಎಂದು ಪರ್ರೀಕರ್ ಅವರು ಕೊಂಕಣಿ ಮತ್ತು ಹಿಂದಿ ಭಾಷೆಯಲ್ಲಿ ಬಹುವಾಗಿ ಚಾಲ್ತಿಯಲ್ಲಿರುವ “ಖಾಲಿ ಹಡಗು ಸದಾಸದ್ದು ಮಾಡುತ್ತಲೇ ಇರುತ್ತದೆ’ ಎಂಬ ಗಾದೆಯನ್ನು ಉಲ್ಲೇಖೀಸಿ ಹೇಳಿದರು.
ಪಾಕಿಸ್ಥಾನದ ಕುನೀತಿಗೆ ವ್ಯತಿರಿಕ್ತವಾಗಿ ಭಾರತ ಯಾವತ್ತೂ ನೆರೆಕರೆಯವರೊಂದಿಗೆ ಶಾಂತಿ ಸೌಹಾರ್ದವನ್ನು ಬಯಸುತ್ತದೆ. ತನ್ನೆಲ್ಲ ಷಡ್ಯಂತ್ರಗಳನ್ನು ಕಾಣದಂತೆ ಮಾಡಲು ಅದು ಭಾರತದೊಂದಿಗೆ ಸದಾ ಮಾತುಕತೆಯಲ್ಲಿರುವುದಕ್ಕೆ ಏನನ್ನಾದರೂ ಮಾಡುವ ಅತ್ಯಂತ ಅಪಾಯಕಾರಿ ಆಟದಲ್ಲಿ ತೊಡಗಿರುತ್ತದೆ. ಭಾರತ ಈ ಬಗ್ಗೆ ಜಾಗ್ರತೆ ವಹಿಸಬೇಕು’ ಎಂದು ಪರ್ರೀಕರ್ ಅವರು ಡಿಡಿ ನ್ಯೂಸ್ಗೆ ವಿಶೇಷ ಸಂದರ್ಶನದಲ್ಲಿ ಹೇಳಿದರು.
ಪಾಕ್ ಮಿಲಿಟರಿ ಕೋರ್ಟ್ನಿಂದ ಕುಲಭೂಷಣ್ ಜಾಧವ್ಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಬಗ್ಗೆ ಮಾತನಾಡಿದ ಪರ್ರೀಕರ್, ಈ ಬಗ್ಗೆ ಪಾಕಿಸ್ಥಾನಕ್ಕೆ ವಿದೇಶ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ನಾವು ಸುಮ್ಮನಿರುವುದಿಲ್ಲ; ಪಾಕಿಸ್ಥಾನಕ್ಕೆ ಉತ್ತರವಾಗಿ ಏನನ್ನು ಮಾಡಬೇಕೋ ಅದನ್ನು ದೇಶವೇ ಮಾಡುತ್ತದೆ. ಪಾಕಿಸ್ಥಾನ ಒಂದು ವೇಳೆ ದುಬೋìಧೆಯ ಪ್ರಕಾರ ಅನಪೇಕ್ಷಿತವಾದುದನ್ನು ಮಾಡಿದಲ್ಲಿ ಆಗ ನಾವು ಅದಕ್ಕೆ ತಕ್ಕುದಾದ ಪಾಠ ಕಲಿಸುತ್ತೇವೆ’ ಎಂದು ಪರ್ರೀಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.