ನಮ್ಮಲ್ಲೇ ಬುರ್ಜ್ ಖಲೀಫಾ ಮೀರಿಸುವ ಕಟ್ಟಡ ನಿರ್ಮಾಣ
Team Udayavani, Apr 17, 2017, 10:27 AM IST
ಹೊಸದಿಲ್ಲಿ: ಎತ್ತರದಲ್ಲಿ ದುಬೈನ 163 ಅಂತಸ್ತಿನ ಬುರ್ಜ್ ಖಲೀಫಾವನ್ನೂ ಮೀರಿಸುವ ಕಟ್ಟಡ, ಅಂದ-ಚಂದದಲ್ಲಿ ಮುಂಬಯಿನ ಮರೀನ ಡ್ರೈವ್ ಕೂಡ ನಾಚುವಂತೆ ಮಾಡುವ ಮತ್ತು ಅದಕ್ಕಿಂತಲೂ 3 ಪಟ್ಟು ದೊಡ್ಡದಾದ ಹಸಿರು ಹೆದ್ದಾರಿ, ಕಣ್ಮನ ಸೆಳೆಯು ವಂಥ ಕಟ್ಟಡ, ರಸ್ತೆ ಪಾರ್ಕ್ಗಳು… ದೇಶದ ಆರ್ಥಿಕ ರಾಜಧಾನಿ ಮುಂಬಯಿ ಇಂಥ ಅದ್ಭುತಗಳ ನೆಲೆಯಾಗುವ ಕಾಲ ದೂರವಿಲ್ಲ. ಇಂಥದೊಂದು ಯೋಜನೆಯನ್ನು ಸದ್ದಿಲ್ಲದೆ ಸಿದ್ಧ ಪಡಿಸಿರುವ ನೌಕಾಯಾನ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಯೋಜನೆಗೆ ಸಂಪುಟದ ಸಮ್ಮತಿ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ.
ಹೀಗೆ ಆಕರ್ಷಣೆಯ ತಾಣವಾಗಿ ಜಗತ್ತನ್ನೇ ತನ್ನತ್ತ ಸೆಳೆಯಲು ಆಯ್ಕೆಯಾಗಿರುವುದು ಮುಂಬಯಿ ಮಹಾನಗರದ ಕಡಲ ಕಿನಾರೆ. ಈ ಎಲ್ಲ ಕಾರ್ಯಗಳಿಗೆ ಸ್ಥಳಾವಕಾಶ ಒದಗಿಸಲಿರುವುದು, ವಾಣಿಜ್ಯ ನಗರಿಯ ನಂ.1 ಸಂಸ್ಥೆ “ಮುಂಬಯಿ ಬಂದರು ಪ್ರಾಧಿಕಾರ (ಎಂಪಿಟಿ). “ತಾಜ್ ಹೋಟೆಲ್, ಬಲ್ಲಾರ್ಡ್ ಎಸ್ಟೇಟ್, ರಿಲಾಯನ್ಸ್ ಬಿಲ್ಡಿಂಗ್ ಸೇರಿದಂತೆ ಹಲವು ಪ್ರತಿಷ್ಠಿತ ಆಸ್ತಿಗಳನ್ನು ಹೊಂದಿರುವ ಎಂಬಿಪಿಟಿ, ಅತ್ಯಂತ ವಿಶಾಲವಾದ ಬಂದರು ಪ್ರದೇಶವನ್ನು ಹೊಂದಿದ್ದು, ಈ ಬಂದರನ್ನು ಅಭಿವೃದ್ಧಿಪಡಿಸುವ ಸುಂದರ ಯೋಜನೆಗಳು ನಮ್ಮ ಬಳಿ ಇವೆ. ಈ ಭೂಮಿಯನ್ನು ಬಿಲ್ಡರ್ಗಳಿಗೆ ಕೊಡದೆ, ಸರಕಾರವೇ ಖುದ್ದಾಗಿ ನಿಂತು, ನಿರ್ವಹಣೆ ಹೊಣೆ ಹೊರಲಿದ್ದು, ಮುಂಬಯಿನ ಸಮುದ್ರ ತೀರದಲ್ಲಿ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ, ಮರೀನ್ ಡ್ರೈವ್ಗಿಂತ 3 ಪಟ್ಟು ದೊಡ್ಡದಾದ ಹಸಿರು ಪಥ ನಿರ್ಮಾಣವಾಗಲಿದೆ,’ ಎನ್ನುತ್ತಾರೆ ಗಡ್ಕರಿ. ಬಂದರಿನ ಮೂಲ ಸೌಲಭ್ಯಗಳ ವಿನ್ಯಾಸ ಹಾಗೂ ಮಾಸ್ಟರ್ ಪ್ಲಾನ್ಗೆ ಸಂಬಂಧಿಸಿದಂತೆ ಮುಂಬಯಿ ಪೋರ್ಟ್ ಈಗಾಗಲೇ ಜಾಗತಿಕ ಟೆಂಡರ್ ಕರೆದಿದೆ.
ಮುಂಬಯಿ ಪೋರ್ಟ್ ಟ್ರಸ್ಟ್
1873ರಲ್ಲಿ ಸ್ಥಾಪನೆಯಾದ ಮುಂಬಯಿ ಪೋರ್ಟ್ ಟ್ರಸ್ಟ್, ದೇಶದ ಅಗ್ರ 12 ಬಂದರುಗಳ ಪೈಕಿ ಒಂದೆನಿ ಸಿದ್ದು, ಮುಂಬಯಿನ ನಂ.1 ಲ್ಯಾಂಡ್ಲಾರ್ಡ್ ಎನಿಸಿದೆ.
ಅಭಿವೃದ್ಧಿಯಾಗುವ ಪ್ರದೇಶ
ಸುಮಾರು 500 ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ ಒಳಪಡಲಿದ್ದು, ಬಂದರು ಕಾರ್ಯಾಚರಣೆ, ವ್ಯವಹಾರ, ಕಚೇರಿ, ವಾಣಿಜ್ಯ, ರೀಟೇಲ್, ಮನೋರಂಜನೆ, ಸಮುದಾಯ ಯೋಜನೆಗಳು ಮತ್ತು ಸಮುದಾಯ ಭವನಗಳು ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇಲ್ಲಿ ತಲೆಯೆತ್ತಲಿವೆ.
ಬೃಹತ್ ಮರೀನ್ ಡ್ರೈವ್
ಮಡ್ಗಾಂವ್ ಡಾಕ್ಸ್ ಮತ್ತು ವಡಾಲ ನಡುವೆ ಸುಮಾರು 7 ಕಿ.ಮೀ ಉದ್ದದ ಮರೀನ್ ಡ್ರೈವ್ ನಿರ್ಮಿಸುವುದು ಈ ಯೋಜನೆಯ ಪ್ರಮುಖ ಭಾಗ. ಇದು ಹಾಲಿ ಇರುವ ಮರೀನ್ ಡ್ರೈವ್ಗಿಂತಲೂ ಮೂರು ಪಟ್ಟು ದೊಡ್ಡದಿರಲಿದೆ.
ಖಲೀಫಾ ಮೀರಿಸುವ ಕಟ್ಟಡ
ಇದೇ ಬಂದರು ಪ್ರದೇಶದಲ್ಲಿ ದುಬೈನ್ ಬುರ್ಜ್ ಖಲೀಫಾಗಿಂತಲೂ ಎತ್ತರವಾಗಿರುವ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಬೃಹತ್ ಮರೀಗೆ ಹೊಂದಿಕೊಂಡಂತೆಯೇ ಈ ಗಗನಚುಂಬಿ ಕಟ್ಟಡ ನಿರ್ಮಾಣವಾಗಲಿದ್ದು, ಜಗತ್ತಿನ ಆಕರ್ಷಣೆಯ ಕೇಂದ್ರವಾಗಲಿದೆ.
ಮುಂದಿನ ಯೋಜನೆ
ಮುಂಬಯಿ ಬಂದರು ಅಭಿವೃದ್ಧಿಗೊಂಢ ಅನಂತರ ಕೋಲ್ಕತಾ ಬಂದರನ್ನು ಸುಂದರವಾಗಿಸುವ ಕಾರ್ಯ ನಡೆಯಲಿದೆ. ಇದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಖಂಡಾಲ ಬಂದರನ್ನು ಸ್ಮಾರ್ಟ್ ಆಗಿಸುವ ಆಲೋಚನೆ ಕೂಡ ಕೇಂದ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.