ಮತಯಂತ್ರಗಳೇಕೆ ಖಳನಾಯಕರಾಗಬೇಕು? ವಿವಿಪ್ಯಾಟ್‌ ತಂತ್ರಜ್ಞಾನ ಅಳವಡಿಸಿ


Team Udayavani, Apr 17, 2017, 11:14 AM IST

17-ANKANA-3.jpg

2009ರಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾದಾಗ ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಿ ತೋರಿಸುವಂತೆ ಸವಾಲು ಹಾಕಿತ್ತು. ಆದರೆ ಆಗ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದಿರಲಿಲ್ಲ.  

ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ಘೋಷಣೆಯಾದ ಬಳಿಕ ಶುರುವಾದ ಮತಯಂತ್ರ ತಿರುಚುವ ವಿವಾದ ಇನ್ನೂ ತಣ್ಣಗಾಗಿಲ್ಲ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ವಿಪಕ್ಷಗಳಿಗೆ ಬಡಪಾಯಿ ಮತಯಂತ್ರಗಳು ಖಳನಾಯಕರಂತೆ ಕಾಣಿಸಲಾರಂಭಿಸಿವೆ. ಮತಯಂತ್ರಗಳ ಕುರಿತು ಮೊದಲು ಆಕ್ಷೇಪ ಎತ್ತಿದ್ದು ಬಿಎಸ್‌ಪಿ. ಅನಂತರ ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ ಇದೇ ರಾಗ ಹಾಡತೊಡಗಿವೆ. ಆಪ್‌ ಅಂತೂ ಮತಯಂತ್ರಗಳ ವಿರುದ್ಧ ಸಮರವನ್ನೇ ಸಾರಿದ್ದು, ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ  ಮತಪತ್ರಗಳನ್ನು ಬಳಸಬೇಕೆಂದು ಒತ್ತಾಯಿಸುತ್ತಿದೆ. ಬಿಎಸ್‌ಪಿಯ ಮಾಯಾವತಿ ಮತಯಂತ್ರಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಮತ ಯಂತ್ರಗಳನ್ನು ತಿರುಚುವ 10 ವಿಧಾನಗಳನ್ನು ಕಲಿಸಿಕೊಡುತ್ತೇನೆ ಎಂದು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿಕೊಂಡಿದ್ದಾರೆ. 

2004ರಿಂದೀಚೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲಿ  ಮತಯಂತ್ರಗಳನ್ನೇ ಬಳಸಲಾಗಿದೆ. ಪ್ರತಿ ಚುನಾವಣೆ ಬಳಿಕ ಸೋತ ಪಕ್ಷಗಳು  ಮತಯಂತ್ರಗಳ ಸಾಚಾತನದ ಬಗಗೆ ಅಪಸ್ವರ ಎತ್ತಿವೆ.  ಹಾಗೆಂದು ಯಾವ ಪಕ್ಷವೂ ತಂತ್ರಜ್ಞರನ್ನು ಕರೆಸಿ ಮತಯಂತ್ರಗಳನ್ನು ತಿರುಚಲು ಸಾಧ್ಯ ಎಂದು ಪರಿಶೀಲನೆ ನಡೆಸಿ ಆರೋಪಗಳನ್ನು ಮಾಡಿವೆಯೇ ಎಂದರೆ ಅದೂ ಇಲ್ಲ. ತಮ್ಮ ಸೋಲಿಗೆ ನಿಜವಾದ ಕಾರಣ ಏನು ಎಂದು ಆತ್ಮವಲೋಕನ ಮಾಡುವುದನ್ನು ಬಿಟ್ಟು ಮತಯಂತ್ರಗಳ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವ ತಂತ್ರವಿದು. 2009ರಲ್ಲಿ ಇದೇ ಮಾದರಿಯ ಪರಿಸ್ಥಿತಿ ಸೃಷ್ಟಿಯಾದಾಗ ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಿ ತೋರಿಸುವಂತೆ ಸವಾಲು ಹಾಕಿತ್ತು. ಆದರೆ ಆಗ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದಿರಲಿಲ್ಲ.  ಮತಯಂತ್ರಗಳಿಗೆ ಅಳವಡಿಸುವ ಚಿಪ್‌ನ್ನು ಹೊರಗಿನಿಂದ ನಿಯಂತ್ರಿಸುವುದು ಅಸಾಧ್ಯ. ಅಲ್ಲದೆ ಅವು ಯಾವುದೇ ಅನ್ಯ ಉಪಕರಣಗಳ ಜತೆಗೆ ತಂತಿಯಿಂದ ಅಥವ ತಂತಿ ರಹಿತವಾಗಿ ಸಂಪರ್ಕ ಹೊಂದಿರುವುದಿಲ್ಲ. ಇದರ ತರಂಗಾಂತರ ಬಹಳ ಕಡಿಮೆಯಿರುವುದರಿಂದ ಬ್ಲೂಟೂತ್‌, ಶೇರ್‌ಇಟ್‌ನಂತಹ ಅತ್ಯಾಧುನಿಕ ಆ್ಯಪ್‌ಗ್ಳಿಂದಲೂ ಸಂಪರ್ಕ ಸಾಧ್ಯವಿಲ್ಲ. ಒನ್‌ ಟೈಮ್‌ ಪ್ರೊಗ್ರಾಮೇಬಲ್‌ ಚಿಪ್‌ ಅನ್ನು ಕೋಡ್‌ ಮಾಡಿ ತಯಾರಿಸಿದ ಸಾಫ್ಟ್ ವೇರ್‌ನ್ನು ಮತಯಂತ್ರಗಳಿಗೆ ಅಳವಡಿಸುತ್ತಾರೆ. ಹೀಗಾಗಿ ಸಾಫ್ಟ್ ವೇರ್‌ ಬದಲಿಸುವುದು ಕೂಡ ಅಸಾಧ್ಯ. ಮತದಾನ ಶುರುವಾಗುವುದಕ್ಕಿಂತ ಮೊದಲು ಎಲ್ಲ ಪಕ್ಷಗಳ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಕನಿಷ್ಠ 100 ಡಮ್ಮಿ ಮತಗಳನ್ನು ಚಲಾಯಿಸಿ ಅವುಗಳ‌ ಸಾಚಾತನ -ಕಾರ್ಯನಿರ್ವಹಣೆಯನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಅಮೆರಿಕ ಸೇರಿದಂತೆ ಕೆಲವು ಮುಂದುವರಿದ ದೇಶಗಳು ಮತದಾನಕ್ಕೆ ಈಗಲೂ ಮತಪತ್ರಗಳನ್ನು ಬಳಸುತ್ತಿವೆ ಎನ್ನುವ ವಾದ ಸರಿಯಿದ್ದರೂ ಅನೇಕ ದೇಶಗಳು ಭಾರತದ ಮತಯಂತ್ರಗಳ ಕಾರ್ಯಕ್ಷಮತೆಯನ್ನು ಕಂಡು ಬೆರಗಾಗಿವೆ ಎನ್ನುವುದನ್ನು ಕೂಡ ಮರೆಯಬಾರದು.   ಮತಯಂತ್ರಗಳಗಳ ಬಳಕೆ ಶುರುವಾದ ಬಳಿಕ ಚುನಾವಣೆ ಪ್ರಕ್ರಿಯೆ ಸರಳ, ಕ್ಷಿಪ್ರ ಮತ್ತು ಪಾರದರ್ಶಕವಾಗಿದೆ. ಮತಗಟ್ಟೆ ವಶೀಕರಣ, ಮತ ಪೆಟ್ಟಿಗೆಗಳ ಅಪಹರಣದಂತಹ ಅಪರಾಧಗಳು ಸಂಪೂರ್ಣವಾಗಿ ನಿಂತಿವೆ. ಅಂತೆಯೇ ಸಾಗಾಟ, ದಾಸ್ತಾನು, ಖರ್ಚು, ನಿರ್ವಹಣೆ ಹೀಗೆ ಎಲ್ಲ ವಿಚಾರದಲ್ಲೂ ಮತಯಂತ್ರಗಳು ಹೆಚ್ಚು ಪ್ರಯೋಜನಕಾರಿ. ಮತಯಂತ್ರಗಳಿಂದಾಗಿ ಕುಲಗೆಡುವ ಮತಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಮತಯಂತ್ರಗಳು ಬರುವ ಮೊದಲು ವಿಧಾನಸಭೆ/ ಲೋಕಸಭೆ ಚುನಾವಣೆ ಫ‌ಲಿತಾಂಶ ಬರಲು  ಮೂರು ದಿನ ಹಿಡಿದ ಉದಾಹರಣೆಯೂ ಇದೆ. ಈಗ ಮಧ್ಯಾಹ್ನದೊಳಗೆ ಬಹುತೇಕ ಫ‌ಲಿತಾಂಶ ಪ್ರಕಟವಾಗಲು ಮತಯಂತ್ರಗಳು ಕಾರಣ. ಚುನಾವಣೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿರುವ ಮತಯಂತ್ರಗಳನ್ನು ಕೈಬಿಟ್ಟು ಮತಪತ್ರಗಳನ್ನೇ ಬಳಸಬೇಕೆಂದು ರಚ್ಚೆ ಹಿಡಿಯುವುದು ಅವಿವೇಕತನದ ನಡೆ. ಇದರ ಬದಲು ಮತಯಂತ್ರಗಳನ್ನು ಇನ್ನಷ್ಟು ಸುಧಾರಿಸುವತ್ತ ಗಮನ ಹರಿಸಬೇಕು. ಮತದಾನದ ವೇಳೆ ಗುಂಡಿ ಒತ್ತಿದ ಕೂಡಲೇ ಯಾರಿಗೆ ಮತ ಬಿದ್ದಿದೆ ಎಂಬುದನ್ನು ತಿಳಿಸುವ ವಿವಿಪ್ಯಾಟ್‌ ವ್ಯವಸ್ಥೆಯನ್ನು ಜಾರಿಗೆ ತಂದರೆ ಮತಯಂತ್ರಗಳ ಸಾಚಾತನದ ಕುರಿತು ಎದ್ದಿರುವ ಅನುಮಾನಗಳು ಪರಿಹಾರವಾಗಬಹುದು. ಚುನಾವಣಾ ಆಯೋಗ ಈ ವಿಧಾನವನ್ನು ತ್ವರಿತವಾಗಿ ಜಾರಿಗೊಳಿಸುವ ಅಗತ್ಯವಿದೆ. ಇಲ್ಲದಿದ್ದರೆ ಪ್ರತಿ ಚುನಾವಣೆಯಲ್ಲಿ ಸೋತವರು ಮತಯಂತ್ರವನ್ನು ಖಳನಾಯಕ ಮಾಡುವ ಚಾಳಿ ಮುಂದುವರಿಯುತ್ತದೆ. 

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health-insure

GST Revise: ಆರೋಗ್ಯ ವಿಮೆ ಪ್ರಯೋಜನ ಜನಸಾಮಾನ್ಯರಿಗೂ ಕೈಗೆಟುಕಲಿ

Raichuru-Manvi

Raichuru Accident: ಶಾಲಾ ಬಸ್‌: ಬೇಜವಾಬ್ದಾರಿ ಚಾಲನೆಗೆ ಕಠಿನ ಕ್ರಮ ಅಗತ್ಯ

ಬಂಡುಕೋರರೊಂದಿಗೆ ಸಂಧಾನ ಫ‌ಲಿಸಿದ ಕೇಂದ್ರದ ಪ್ರಯತ್ನ

ಬಂಡುಕೋರರೊಂದಿಗೆ ಸಂಧಾನ ಫ‌ಲಿಸಿದ ಕೇಂದ್ರದ ಪ್ರಯತ್ನ

CBi

Investigation Agency: ಸಿಬಿಐ ಪ್ರಕರಣಗಳು ತ್ವರಿತ ವಿಲೇವಾರಿಯಾಗಲಿ

Film

South India Film Industry: ಸಿನೆಮಾ ರಂಗ ಕಳಂಕ ಮುಕ್ತವಾಗಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.