ಕೆಂಗೇರಿಯಲ್ಲಿ ವಿಜೃಂಭಣೆಯ ಯಲ್ಲಮ್ಮ ದೇವಿ ಕರಗ
Team Udayavani, Apr 17, 2017, 12:22 PM IST
ಕೆಂಗೇರಿ: ಇಲ್ಲಿನ ಶ್ರೀ ಯಲ್ಲಮ್ಮ ದೇವಿ ಕರಗ ಮಹೋತ್ಸವವು ಸಹಸ್ತ್ರಾರು ಭಕ್ತರ ಸಮ್ಮುಖದಲ್ಲಿ, ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ವಿಶೇಷ ಪೂಜಾ ಕಾರ್ಯಗಳ ನಂತರ ಕರಗ ಹೊತ್ತ ಆನಂದ್, ಕೆಂಗೇರಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಹಿಂದಿನಿಂದ ನಡೆದುಬಂದಿರುವ ಸಂಪ್ರದಾಯದಂತೆ ಮನೆಗಳ ಮುಂದೆ ರಂಗೋಲಿ ಹಾಕಿ ಕರಗವನ್ನ ಸ್ವಾಗತಿಸಲಾಯಿತು.
ಕರಗದ ಮೇಲೆ ಮಲ್ಲಿಗೆ ಹೂವು ಸಮರ್ಪಿಸುವ ಮೂಲಕ ಸಾರ್ವಜನಿಕರು ಭಕ್ತಿ ಪ್ರದರ್ಶಿಸಿದರು. ರಾತ್ರಿ ಆರಂಭವಾಗಿ ಬೆಳಗಾಗುವವರೆಗೂ ನಡೆದ ಕರಗ ಮಹೋತ್ಸವದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರೆ, ವೀರಕುಮಾರರು ಕೈಯಲ್ಲಿ ಖಡ್ಗ ಹಿಡಿದು, ಗೋವಿಂದ ನಾಮ ಸ್ಮರಣೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಕರಗ ಮಹೋತ್ಸವದ ಮುನ್ನ ದಿನ ನೂರಾರು ಮಹಿಳೆಯರು ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಸಹಿತ ಪೂಜೆ ಸಲ್ಲಿಸಿದರು. ಕರಗದ ದಿನ ಸುತ್ತಮುತ್ತಲ ಅನೇಕ ಗ್ರಾಮಗಳಿಂದ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು.
ಇದರೊಂದಿಗೆ, ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಚಂಡೆವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಆಕಷìಕ ಪ್ರದರ್ಶನ ಕರಗಕ್ಕೆ ಮೆರುಗು ತಂದಿತು. ಶಾಸಕ ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಸದಸ್ಯರಾದ ಶಾರದಾ ಮುನಿರಾಜು, ವಿ.ವಿ.ಸತ್ಯನಾರಾಯಣ, ಆರ್ಯ ಶ್ರೀನಿವಾಸ್, ಧರ್ಮದರ್ಶಿ ಜೆ.ರಮೇಶ್ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.