800 ಮಂದಿಗೆ ವಸತಿ ಕಲ್ಪಿಸಲು ನಿರ್ಣಯ


Team Udayavani, Apr 19, 2017, 1:07 PM IST

dvg4.jpg

ಜಗಳೂರು: ನೀರಿನ ತೆರಿಗೆ ಶೇ.15ರಷ್ಟು ಹೆಚ್ಚಿಸುವುದು, ಅವಧಿಧಿ ಮುಗಿದ ಮಳಿಗೆಗಳನ್ನು ಖುಲ್ಲಾಪಡಿಸಿ ಮರು ಹರಾಜು ಮಾಡುವುದು, ನೂತನ ಬಡಾವಣೆಗಳಿಗೆ ಮರುನಾಮಕರಣ ಮಾಡುವುದು, 800 ಮಂದಿಗೆ ವಸತಿ ಕಲ್ಪಿಸುವುದು, ಆಸ್ಪತ್ರೆಯಲ್ಲಿ ಗಂಜಿ ಕೇಂದ್ರ ತೆರೆಯಲು ಪಟ್ಟಣ ಪಂಚಾಯತ್‌ ಮಂಗಳವಾರ ನಿರ್ಣಯ ಕೈಗೊಂಡಿತ್ತು.

ಪಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ಅನಮೋದಿಸಿದರು. ಸದಸ್ಯ ಚಂದ್ರಪ್ಪ ಮಾತನಾಡಿ, ಖಾಲಿಯಾಗಿರುವ ಮಳಿಗೆಗಳನ್ನು ಎರಡು ವರ್ಷವಾದರೂ ಮರು ಹರಾಜು ಮಾಡಲು ನಿಮ್ಮಿಂದ ಆಗುತ್ತಿಲ್ಲ ಎಂದು ಸಾರ್ವಜನಿಕರು ನಮಗೆ ಗೇಲಿ ಮಾಡುತ್ತಿದ್ದಾರೆ. 

ತರಕಾರಿ ಮಾರುಕಟ್ಟೆ ಮತ್ತು ಅವಧಿ ಮೀರಿದ ಹಾಗೂ ಖಾಲಿ ಇರುವ ಮಳಿಗೆಗಳನ್ನು ಬಹಿರಂಗ ಹರಾಜು ಹಾಕುವಂತೆ ಪಟ್ಟು ಹಿಡಿದರು. ಇದಕ್ಕೆ ಸದಸ್ಯರಾದ ತಿಪ್ಪೇಸ್ವಾಮಿ, ಬಂಗಾರಪ್ಪ ಬೆಂಬಲ ವ್ಯಕ್ತಪಡಿಸಿದರು. ಸದಸ್ಯ ಜಯ್ಯಣ್ಣ ಮಾತನಾಡಿ, ಕಚೇರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಖಾಸಗಿ ವಾಹನಕ್ಕೆ 1.83 ಲಕ್ಷ ರೂ. ವೆಚ್ಚ ಮಾಡಲಾಗಿದೆ. 

ಟೆಂಡರ್‌ ಕರೆಯದೇ ವಾಹನ ಪಡೆದಿರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು. ಪಟ್ಟಣದಲ್ಲಿ ಕುಡಿಯುವ ನೀರನ್ನು ಟ್ಯಾಂಕ್‌ರ ಮೂಲಕ ವಿತರಿಸಲಾಗುತ್ತದೆ ಎಂದು ಹೇಳುತ್ತೀರಿ, ಆದರೆ ಪೈಪ್‌ಲೈನ್‌ ಸೇರಿದಂತೆ ಇತರೇ ರಿಪೇರಿಗೆ 2.60 ಲಕ್ಷ ರೂ. ಖರ್ಚು ಮಾಡಲಾಗಿದೆ. ಪಪಂನ ಪಾಸ್‌ಶೀಟ್‌ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ನೀಡುತ್ತಿಲ್ಲ.

ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅಧಿಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾರದರ್ಶಕವಾಗಿದ್ದಾಗ ಹಿಂಜರಿಕೆ ಬೇಡ ಕೂಡಲೇ ಎಲ್ಲಾ ಸದಸ್ಯರಿಗೆ 2013ರಿಂದ ಇಲ್ಲಿಯವರೆಗೆ ಪಾವತಿಸಲಾದ ಬಿಲ್ಲಿನ ಪಾಸ್‌ ಶೀಟ್‌ ಕೊಡಿ ಅವರು ಕೇಳಿದ ದಾಖಲೆಗಳನ್ನು ಒದಗಿಸಿ ಎಂದು ಶಾಸಕ ಎಚ್‌.ಪಿ.ರಾಜೇಶ್‌ ಸೂಚನೆ ನೀಡಿದರು. 

ಮೂರು ವರ್ಷಕ್ಕೊಮ್ಮೆ ನೀರಿನ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕೆಂದು ಪೌರನಿರ್ದೇಶನಾಲಯದಿಂದ ಸುತ್ತೋಲೆ ಬಂದಿದೆ. ಪ್ರಸ್ತುತ ಮಾಸಿಕ 80 ರೂಪಾಯಿ ವಸೂಲಿ ಮಾಡಲಾಗುತ್ತದೆ. ನಿಯಮಾನುಸಾರ ನೀರಿನ ತೆರಿಗೆ ಪರಿಷ್ಕರಣೆ ಆಗಬೇಕಾಗಿದೆ. ಸದಸ್ಯರು ಸಲಹೆ ನೀಡುವಂತೆ ಮುಖ್ಯಾಧಿಕಾರಿ ಬಿ.ಕಂಪಳಮ್ಮ ಮನವಿ ಮಾಡಿದರು. 

ಬಿಜೆಪಿಯ ಎಂಎಲ್‌ಎ ತಿಪ್ಪೇಸ್ವಾಮಿ ಮಾತನಾಡಿ, ಬರವಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ತೆರಿಗೆ ಹೆಚ್ಚಿಸಿದರೆ ನಾಗರೀಕರು ಒಪ್ಪುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಶೇಕಡ 10ರಷ್ಟು ಮಾತ್ರ ಹೆಚ್ಚಿಸುವಂತೆ ಸದಸ್ಯರಾದ ಅಪ್ಸರಮಂಜು, ಮಂಜಣ್ಣ, ರುದ್ರಣ್ಣ ಒತ್ತಾಯಿಸಿದರು.  ಕೊನೆಗೆ ಶೇ.15ರಷ್ಟು ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು.

ಅಧ್ಯಕ್ಷರ ಬೇಸರ: ನನ್ನ ಅನುಮತಿ ಇಲ್ಲದೇ ಬಿಲ್‌ ಪಾಸಾಗುತ್ತವೆ. ಅಲ್ಲದೇ ನನ್ನ ಗಮನಕ್ಕೆ ತರದೇ ಖರ್ಚು ಮಾಡಲಾಗುತ್ತದೆ. ಕೇಳಿದರೆ ನಿಮ್ಮ ಅನುಮತಿ ಕೇಳುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಮಾಹಿತಿ ಕೇಳಿದರೆ ಕೊಡುತ್ತಿಲ್ಲ ಎಂದು ಪಪಂ ಅಧ್ಯಕ್ಷೆ ನೂರಜಹಾನ್‌ ಶಾಸಕ ಎಚ್‌.ಪಿ.ರಾಜೇಶ್‌ ಅವರ ಗಮನಕ್ಕೆ ತಂದರು.  

ಟಾಪ್ ನ್ಯೂಸ್

1-udaaa

Israeli ಪಡೆಗಳಿಂದ ಲೆಬನಾನ್ ಮೇಲೆ ಭಾರೀ ದಾಳಿ: 182 ಕ್ಕೂ ಹೆಚ್ಚು ಮೃ*ತ್ಯು

Kannan

ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್ 

1-dssadas

Badlapur ಪೊಲೀಸ್ ರಿವಾಲ್ವರ್ ಕಸಿದು ಗುಂಡು ಹಾರಿಸಿದ ರೇ*ಪ್ ಆರೋಪಿ!!

siddanna-2

MUDA ಹಗರಣ: ಸಿಎಂ ಸಿದ್ದರಾಮಯ್ಯ ಭವಿಷ್ಯ ಹೈಕೋರ್ಟ್ ನಲ್ಲಿ ನಾಳೆ ನಿರ್ಧಾರ

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!

RabkaviRabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ

Childhood traumas and their long-term effects on mental health

Health; ಬಾಲ್ಯದ ಆಘಾತಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-udaaa

Israeli ಪಡೆಗಳಿಂದ ಲೆಬನಾನ್ ಮೇಲೆ ಭಾರೀ ದಾಳಿ: 182 ಕ್ಕೂ ಹೆಚ್ಚು ಮೃ*ತ್ಯು

Kannan

ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್ 

1-dssadas

Badlapur ಪೊಲೀಸ್ ರಿವಾಲ್ವರ್ ಕಸಿದು ಗುಂಡು ಹಾರಿಸಿದ ರೇ*ಪ್ ಆರೋಪಿ!!

Kundapura: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

Kundapura: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

siddanna-2

MUDA ಹಗರಣ: ಸಿಎಂ ಸಿದ್ದರಾಮಯ್ಯ ಭವಿಷ್ಯ ಹೈಕೋರ್ಟ್ ನಲ್ಲಿ ನಾಳೆ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.