ಬಂಡೆ ಹತ್ತಿ, ಕಟ್ಟಡ ಏರಿ, ಸ್ಪೈಡರ್‌ಮ್ಯಾನ್‌ ಆಗಿ!


Team Udayavani, Apr 22, 2017, 4:30 PM IST

17.jpg

ಆ ಮೌಂಟ್‌ ಎವರೆಸ್ಟ್‌ ನೋಡಿದ್ರೆ ಆಸೆ ಹುಟ್ಟುತ್ತೆ. ಅಲ್ಲೆಲ್ಲೋ ಚಿತ್ರದುರ್ಗದಲ್ಲಿ ಕೋತಿರಾಮ ಅಲಿಯಾಸ್‌ ಜ್ಯೋತಿರಾಜ್‌, ಕೋಟೆ ಹತ್ತುವುದನ್ನು ಕಂಡು ಹೊಟ್ಟೆಕಿಚ್ಚಾಗುತ್ತೆ. ಟಿವಿಯಲ್ಲಿ ಬರುವ ಸ್ಪೈಡರ್‌ಮ್ಯಾನ್‌ ಅನ್ನು ನೋಡ್ತಾ ನೋಡ್ತಾ ಬರೀ ಥ್ರಿಲ್ಲಾಗೋದೇ ಆಗಿಹೋಯ್ತಾ ಲೈಫ‌ು? ಮರ ಹತ್ತುವ ಭಾಗ್ಯವಂತೂ ಈ ಬೆಂಗ್ಳೂರಲ್ಲಿ ಇಲ್ಲ. ಕಾಂಕ್ರಿಟ್‌ ಕಟ್ಟಡಗಳ ಅಕ್ಕಪಕ್ಕದಲ್ಲೆಲ್ಲೂ ಗುಡ್ಡ- ಬೆಟ್ಟಗಳು ಕಾಣಿಸುವುದಿಲ್ಲ. ಕಡೇಪಕ್ಷ ಇಲ್ಲಿ ಏರಲು ಗಟ್ಟಿ ಮರಗಳೇ ಇಲ್ಲ. ಇನ್ನು ಬೆಂಗಳೂರಿನ ಮಕ್ಕಳು ಪರ್ವತಾರೋಹಣ ಕಲಿಯೋದು ಹೇಗೆ?

ಇಂಥ ಯೋಚನೆಗಳ ಮಧ್ಯೆಯೂ ಮಕ್ಕಳನ್ನು ಎಡ್ಮಂಡ್‌ ಹಿಲರಿ ಮಾಡಿಸುವ ಕನಸು ಇಟ್ಕೊಂಡ ಪೋಷಕರಿಗೆ ಇದು ಸ್ವೀಟ್‌ ನ್ಯೂಸ್‌. ಪರ್ವತಾರೋಹಣ, ಟ್ರಕ್ಕಿಂಗ್‌ ಪಾಠ ಹೇಳಿಕೊಡಲೆಂದೇ “ಅರ್ಬನ್‌ ಕ್ಲೈಂಬರ್ಸ್‌’ ಕೆಲಸ ಮಾಡ್ತಿದೆ. ಇಲ್ಲಿ ಮಕ್ಕಳ ಸ್ಪೈಡರ್‌ ಮ್ಯಾನ್‌ ಆಗುವ ಕನಸನ್ನು ನನಸು ಮಾಡ್ತಾರೆ. ಕೆಲವೇ ದಿನಗಳ ತರಬೇತಿಯಲ್ಲಿ ಮಕ್ಕಳು ಚಕಚಕ ಅಂತ ಪರ್ವತ ಏರುವುದನ್ನು, ಗೋಡೆ ಹತ್ತುವುದನ್ನು ಕಲೀತಾರೆ!

ಏನೇನಿದೆ ಇಲ್ಲಿ?
– ಹಗ್ಗ ಹಿಡಿದು ಬಿಲ್ಡಿಂಗ್‌ ಏರುವುದನ್ನು ನೀವು ಟಿವಿ, ಜಾಹೀರಾತುಗಳಲ್ಲಿ ನೋಡಿದ್ದೀರಿ. ಇಲ್ಲೂ ಅಂಥ ಬಿಲ್ಡಿಂಗ್‌ನ ಗೋಡೆಗಳಿವೆ. ಅಲ್ಲಲ್ಲಿ ಉಕ್ಕಿನ ಕಿರು ಆಧಾರಗಳನ್ನು ಫಿಕ್ಸ್‌ ಮಾಡಿದ್ದಾರೆ. ಮೇಲೊಂದು ಹಗ್ಗ ಕಟ್ಟಿರುತ್ತಾರೆ. ಆ ಹಗ್ಗ ಹಿಡಿದು ಚಕಚಕನೆ ಕಟ್ಟಡವನ್ನು ಏರಬಹುದು. 24ರಿಂದ 48 ಅಡಿ ಎತ್ತರದ ಬಿಲ್ಡಿಂಗುಗಳನ್ನು ಹುಡುಗರು ಯಾವುದೇ ಭಯವಿಲ್ಲದೆ ಏರುವುದನ್ನು ಇಲ್ಲಿ ಕಣ್ಣಾರೆ ಕಾಣಬಹುದು. 

– ರಾಮನಗರದ ಬೆಟ್ಟದ ಮೇಲೆ ದೊಡ್ಡ ದೊಡ್ಡ ಕಲ್ಲುಬಂಡೆಗಳನ್ನು ನೋಡಿರುತ್ತೀರಿ. ಅವನ್ನು ಏರಲಾರದೆ, ಉಸ್ಸಪ್ಪ ಎಂದಿರುತ್ತೀರಿ. ಇಲ್ಲೂ 8- 12 ಅಡಿ ಎತ್ತರದ ಕಲ್ಲುಬಂಡೆ ಇಟ್ಟಿರುತ್ತಾರೆ. ತಲೆಗೆ ಹೆಲ್ಮೆಟ್‌ ಧರಿಸಿ, ಬಂಡೆ ಏರುವುದನ್ನು ಇಲ್ಲಿ ಕಲಿಸಲಾಗುತ್ತೆ.

– ಮಕ್ಕಳಿಗಾಗಿಯೇ ಇಲ್ಲೊಂದು ಗೋಡೆ ಇದೆ. ಸುರಕ್ಷಾ ಉಡುಪುಗಳನ್ನು ಧರಿಸಿ, ಚಿಕ್ಕಚಿಕ್ಕ ಮೆಟ್ಟಿಲುಗಳನ್ನು ಹತ್ತಿ ಇದನ್ನು ಏರಬಹುದು. ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಈ ಗೋಡೆ ನಿರ್ಮಿಸಲಾಗಿದೆ.

ಮನೋಸ್ಥೈರ್ಯದ ಪಾಠ
ಇಲ್ಲಿಗೆ ಬರುವ ಅನೇಕ ಮಕ್ಕಳಿಗೆ ಆಸಕ್ತಿ, ಉತ್ಸಾಹ ಏನೋ ಇರುತ್ತೆ. ಆದ್ರೆ, ಇಷ್ಟೆತ್ತರ ಹತ್ತಬೇಕಲ್ಲ ಎಂದು ಮೇಲೆ ನೋಡುತ್ತಾ ಧೈರ್ಯಗೆಡುತ್ತಾರೆ. ಇದ್ದಕ್ಕಿದ್ದಂತೆ ಕೈಕಾಲು ಕಂಪಿಸಲೂಬಹುದು. ಇಂಥ ಮಕ್ಕಳ ಆತಂಕವನ್ನೂ ಇಲ್ಲಿ ದೂರ ಮಾಡ್ತಾರೆ. ಮನೋಸ್ಥೈರ್ಯದ ಪಾಠವನ್ನು ಇಲ್ಲಿ ಹೇಳಿಕೊಡ್ತಾರೆ. ಕೇವಲ ಮಕ್ಕಳಲ್ಲ, ಈ ಆರೋಹಣಾ ತರಬೇತಿ ಶಾಲೆಯಲ್ಲಿ ಯುವತಿಯರೂ ಕಾಣಿಸುತ್ತಾರೆ. ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅನೇಕ ಹೆಣ್ಮಕ್ಕಳು ಇಲ್ಲಿ ಆರೋಹಣ ಪಾಠ ಕಲಿಯುತ್ತಾರೆ. ಎಲ್ಲ ತರಬೇತುದಾರರಿಗೂ ಸುರಕ್ಷಾ ಸಾಧನಗಳನ್ನು ಅಳವಡಿಸಿಯೇ, ತರಬೇತಿ ನೀಡಲಾಗುತ್ತೆ.

ಎಲ್ಲಿದೆ?
ಸ್ಪ್ರಿಂಗ್‌ ಫೀಲ್ಡ್‌, ಸರ್ಜಾಪುರ ರಸ್ತೆ, ಬೆಂಗಳೂರು- 560102
ಏಕೆ ಹೋಗ್ಬೇಕು ಅಂದ್ರೆ…
– ಕಟ್ಟಡ, ಬಂಡೆ ಏರುವುದನ್ನು ಕಲಿಯಲು
– ಅಪಾಯಕಾರಿ ಸನ್ನಿವೇಶದಲ್ಲಿ ಸಾಹಸ ಪ್ರದರ್ಶಿಸುವುದನ್ನು ಅಭ್ಯಸಿಸಲು
– ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು
– ಪರ್ವತಾರೋಹಣಕ್ಕೆ ಇದೊಂದು ಇಂಟರ್ನ್ಶಿಪ್‌ ಇದ್ದಹಾಗೆ

ಸಂಪರ್ಕ
ಮೊ. 096633 67391

ವೆಬ್‌ಸೈಟ್‌ http://urbanclimbers.in/

ಫೇಸ್‌ಬುಕ್‌ @Urbanclimbers.in

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.