ಪುಣೆ – ಕೋಲ್ಕತಾ: ದೊಡ್ಡ ಕಾದಾಟ?


Team Udayavani, Apr 26, 2017, 2:34 PM IST

Todays-Match-25-4.jpg

ಪುಣೆ: ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮತ್ತು ಕೋಲ್ಕತಾ ನೈಟ್‌ರೈಡರ್ಸ್ ತಂಡಗಳು 10ನೇ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖೀಯಾಗಲಿವೆ. ಇತ್ತಂಡಗಳೂ ಚೇತೋಹಾರಿ ಪ್ರದರ್ಶನದೊಂದಿಗೆ ಟಾಪ್‌- 4 ಸ್ಥಾನದಲ್ಲಿರುವುದರಿಂದ ಇದನ್ನೊಂದು ಬಿಗ್‌ ಫೈಟ್‌ ಎಂದೇ ತೀರ್ಮಾನಿಸಬೇಕಾಗುತ್ತದೆ. ಬುಧವಾರದ ಈ ಪಂದ್ಯ ಪುಣೆಯಲ್ಲಿ ನಡೆಯಲಿರುವುದರಿಂದ ಸ್ಟೀವನ್‌ ಸ್ಮಿತ್‌ ಬಳಗವನ್ನು ಫೇವರಿಟ್‌ ಎಂದು ತೀರ್ಮಾನಿಸಲಡ್ಡಿಯಿಲ್ಲ.

ಪುಣೆ ಪಾಲಿನ ಹೆಗ್ಗಳಿಕೆಯೆಂದರೆ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಒಂದೊಂದೇ ಮೆಟ್ಟಿಲನ್ನು ಏರುತ್ತ ಹೋದದ್ದು. ಅದರಲ್ಲೂ ಹಿಂದಿನೆರಡು ಜಯವನ್ನು ಅಮೋಘವೆಂದೇ ಬಣ್ಣಿಸಬೇಕಾಗುತ್ತದೆ. ಶನಿವಾರ ಚಾಂಪಿಯನ್‌ ಹೈದರಾಬಾದ್‌ ವಿರುದ್ಧ ಧೋನಿ ಸಾಹಸದಿಂದ ಗೆದ್ದ  ಬಳಿಕ ಸೋಮವಾರ ರಾತ್ರಿ ಮುಂಬೈಯನ್ನು ಅವರದೇ ವಾಂಖೇಡೆ ಸ್ಟೇಡಿಯಂನಲ್ಲಿ 3 ರನ್ನಿನಿಂದ ರೋಮಾಂಚಕಾರಿಯಾಗಿ ಬಗ್ಗುಬಡಿದ ಪುಣೆ ಈಗ ಭರಪೂರ ಆತ್ಮವಿಶ್ವಾಸದಲ್ಲಿದೆ. ಯಾವುದೇ ತಂಡದ ಸವಾಲನ್ನು ಎದುರಿಸುವ ಛಲದಲ್ಲಿದೆ.

ಇನ್ನೊಂದೆಡೆ ಕೋಲ್ಕತಾ ತನ್ನದೇ ಅಂಗಳದಲ್ಲಿ ಗುಜರಾತ್‌ ಲಯನ್ಸ್‌ಗೆ ಶರಣಾದ ಬಳಿಕ ರವಿವಾರ ರಾತ್ರಿ ಆರ್‌ಸಿಬಿ ವಿರುದ್ಧ ಬೊಂಬಾಟ್‌ ಪ್ರದರ್ಶನ ನೀಡಿದೆ. ಕೊಹ್ಲಿ ಪಡೆಯನ್ನು ಐಪಿಎಲ್‌ನಲ್ಲೇ ಕನಿಷ್ಠವೆನಿಸಿದ 49 ರನ್ನಿಗೆ ಉಡಾಯಿಸಿ ಮೆರೆದಿದೆ. ಇದು ಗಂಭೀರ್‌ ಪಡೆಗೊಂದು ಪ್ಲಸ್‌ ಪಾಯಿಂಟ್‌.

ಪುಣೆ ಗೆಲುವಿನ ಹ್ಯಾಟ್ರಿಕ್‌
ಮುಂಬೈ ಎದುರಿನ ಆರಂಭಿಕ ಪಂದ್ಯವನ್ನು ಗೆದ್ದ ಬಳಿಕ ಪುಣೆ ಸತತ 3 ಪಂದ್ಯಗಳಲ್ಲಿ ಸೋಲುತ್ತ ಹೋಯಿತು. ಆದರೆ ಇಲ್ಲಿಂದ ಮುಂದೆ ಗೆಲುವಿನ ಲಯ ಕಂಡುಕೊಂಡು ಹ್ಯಾಟ್ರಿಕ್‌ ಸಾಧಿಸಿತು. ಆದರೆ ತವರಿನ ಅಂಗಳದಲ್ಲಿ ಪುಣೆ ಅಜೇಯ ತಂಡವೇನಲ್ಲ. ಆಡಿದ ಮೂರರಲ್ಲಿ ಎರಡನ್ನು ಜಯಿಸಿದೆ. ಉಳಿದೊಂದು ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದೆ. ಇದು ಕೆಕೆಆರ್‌ ಆತ್ಮವಿಶ್ವಾಸವನ್ನು ಹೆಚ್ಚಿಸಲೂಬಹುದು.

ಮುಂಬೈಯನ್ನು ಮಣಿಸುವ ಮೂಲಕ ತವರಿನಾಚೆಯೂ ಗೆಲ್ಲುವ ತಾಕತ್ತಿದೆ ಎಂಬುದನ್ನು ಸಾಬೀತುಪಡಿಸಿದ್ದು ಪುಣೆ ಪಾಲಿನ ಹೆಚ್ಚುಗಾರಿಕೆ. ಈ ರೋಚಕ ಗೆಲುವನ್ನು ಸಾಧಿಸಿ ಕೆಲವೇ ಗಂಟೆಗಳಾಗಿವೆ. ಪುಣೆ ಗೆಲುವಿನ ಹಸಿವಿನಲ್ಲಿದೆ! ಅಜಿಂಕ್ಯ ರಹಾನೆ ಮುಂಬೈ ವಿರುದ್ಧ 38 ರನ್‌ ಬಾರಿಸುವ ಮೂಲಕ ಫಾರ್ಮ್ ಹೊರಟು ಹೋಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಜತೆಗಾರ ರಾಹುಲ್‌ ತ್ರಿಪಾಠಿ ಅವರದಂತೂ ಪ್ರಚಂಡ ಪ್ರದರ್ಶನ. ಮಹಾರಾಷ್ಟ್ರದವರೇ ಆದ ತ್ರಿಪಾಠಿ ಕಳೆದ 3 ಪಂದ್ಯಗಳಲ್ಲಿ ಕ್ರಮವಾಗಿ 31, 59 ಹಾಗೂ 45 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ. ಸ್ಮಿತ್‌, ಧೋನಿ, ಸ್ಟೋಕ್ಸ್‌ ಯಾವುದೇ ಹೊತ್ತಿನಲ್ಲಿ ಸಿಡಿಯಬಲ್ಲರು. ಬೌಲಿಂಗ್‌ ವಿಭಾಗದಲ್ಲಿ ಇಮ್ರಾನ್‌ ತಾಹಿರ್‌, ಉನಾದ್ಕತ್‌, ಸುಂದರ್‌, ಕ್ರಿಸ್ಟಿಯನ್‌ ಭರವಸೆ ಮೂಡಿಸಿದ್ದಾರೆ.

ಕೋಲ್ಕತಾ ಸ್ಥಿರ ಪ್ರದರ್ಶನ
ಈ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ತಂಡವೆಂದರೆ ಕೆಕೆಆರ್‌. ಏಳರಲ್ಲಿ 5 ಗೆಲುವು ಸಾಧಿಸಿದ ಹೆಗ್ಗಳಿಕೆ ಕೋಲ್ಕತಾ ತಂಡದ್ದು. ನಾಯಕ ಗಂಭೀರ್‌ ಸ್ವತಃ ಮುಂಚೂಣಿಯಲ್ಲಿ ನಿಂತು ತಂಡಕ್ಕೆ ಸ್ಫೂರ್ತಿ ತುಂಬುತ್ತಿದ್ದಾರೆ. ಸುನೀಲ್‌ ನಾರಾಯಣ್‌ ಅವರ ಬ್ಯಾಟಿಂಗ್‌ ಕೆಕೆಆರ್‌ ಪಾಲಿಗೊಂದು ಬೋನಸ್‌. ಉತ್ತಪ್ಪ, ಪಾಂಡೆ, ಪಠಾಣ್‌ ತಂಡದ ಗೆಲುವಿನಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಕೋಲ್ಕತಾದ ಬೌಲಿಂಗ್‌ ಎಷ್ಟು ಘಾತಕ ಎಂಬುದು ರವಿವಾರ ರಾತ್ರಿ ಆರ್‌ಸಿಬಿ ವಿರುದ್ಧ ಸಾಬೀತಾಗಿದೆ. ಕೋಲ್ಟರ್‌ ನೈಲ್‌, ವೋಕ್ಸ್‌, ಗ್ರ್ಯಾಂಡ್‌ಹೋಮ್‌, ಉಮೇಶ್‌ ಯಾದವ್‌ ಅವರೆಲ್ಲ ಗಂಭೀರ್‌ ಬತ್ತಳಿಕೆಯ ಅಪಾಯಕಾರಿ ಬೌಲಿಂಗ್‌ ಅಸ್ತ್ರಗಳು.

ಟಾಪ್ ನ್ಯೂಸ್

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

army

Kashmir;ಕುಲ್ಗಾಮ್‌ನಲ್ಲಿ ಎನ್ಕೌಂಟರ್: ಉಗ್ರರಿಬ್ಬರ ಹ*ತ್ಯೆ

puttige

Udupi; ಗೀತಾರ್ಥ ಚಿಂತನೆ-49: ಕೊನೆಯಲ್ಲೂ ಧೃತರಾಷ್ಟ್ರನ ಲಾಭದ ದೃಷ್ಟಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.