ಫಿಲಿಪ್ಪೀನ್ಸ್ ಕರಾವಳಿಯಲ್ಲಿ ಪ್ರಬಲ ಭೂಕಂಪ: ಅನೇಕ ಕಟ್ಟಡಗಳಿಗೆ ಹಾನಿ
Team Udayavani, Apr 29, 2017, 11:40 AM IST
ಮನಿಲಾ : ಫಿಲಿಪ್ಪೀನ್ಸ್ನಲ್ಲಿ ಇಂದು ಶನಿವಾರ ನಸುಕಿನ ವೇಳೆ 6.8 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ತೀವ್ರತೆಗೆ ಅನೇಕ ಕಟ್ಟಡಗಳು ಹಾನಿಗೊಂಡಿವೆ. ಇಬ್ಬರು ಗಾಯಗೊಂಡಿದ್ದಾರೆ. ಸುನಾಮಿ ಹೆದ್ದೆರೆಗಳು ಏಳುವ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿರುವುದರಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿ ಕರಾವಳಿ ಪ್ರದೇಶದಿಂದ ಕಾಲ್ಕಿತ್ತಿದ್ದಾರೆ.
ಇಂದು ಶನಿವಾರ ನಸುಕಿನ 4.23ರ ಹೊತ್ತಿಗೆ (ಜಿಎಂಟಿ ಕಾಲಮಾನ ಶುಕ್ರವಾರ 20.23) ದಕ್ಷಿಣ ಪ್ರಾಂತ್ಯವಾಗಿರುವ ಮಿಂದನಾವೋ ಮತ್ತು ಇಂಡೋನೇಶ್ಯದಲ್ಲಿ ತೀವ್ರ ಭೂಕಂಪ (6.8 ಅಂಕಗಳ ತೀವ್ರತೆ) ಸಂಭವಿಸಿತೆಂದು ಅಮೆರಿಕದ ಭೂಗರ್ಭ ಸರ್ವೇಕ್ಷಣ ಇಲಾಖಾಧಿಕಾರಿಗಳು ಹೇಳಿದ್ದು ಈ ಭೂಕಂಪದ ಪರಿಣಾಮವಾಗಿ ಅತ್ಯಂತ ವಿನಾಶಕಾರಿ ಸುನಾಮಿ ಹೆದ್ದೆರೆಗಳು ಏಳುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ನೀಡಿದ್ದರು.
ಭೂಕಂಪ ಸಂಭವಿಸಿದ ನಸುಕಿನ ವೇಳೆ ಸಿಹಿ ನಿದ್ದೆಯಲ್ಲಿದ್ದ ಜನರು ಇದ್ದಕ್ಕಿದ್ದಂತೆಯೇ ಒಮ್ಮೆಲೇ ತಮ್ಮ ಹಾಸಿಗೆಯಿಂದ ಎಸೆಯಲ್ಪಟ್ಟರು. ಭಯಭೀತರಾದ ಜನರು ಮನೆ, ಕಟ್ಟಡಗಳಿಂದ ಹೊರಗೋಡಿ ರಸ್ತೆಯಲ್ಲಿ ಜಮಾಯಿಸಿದರು. ಅನೇಕ ಕಟ್ಟಡಗಳಿಗೆ ಹಾನಿ ಉಂಟಾಯಿತು. ಆಸ್ಪತ್ರೆ ಮತ್ತು ಇತರ ಎರಡು ಸರಕಾರಿ ಕಟ್ಟಡಗಳಲ್ಲಿ ತೀವ್ರವಾದ ಬಿರುಕು ಕಾಣಿಸಿಕೊಂಡಿತು. ಮನೆಗಳು ಉರುಳಿ ಬಿದ್ದು ನಾಶವಾದವು. ವಿದ್ಯುತ್ ಪೂರೈಕೆ ನಿಂತು ಹೋಯಿತು.
ಭೂಕಂಪವು ಮಿಂದನಾವೋ ದ್ವೀಪದಿಂದ 41 ಕಿ.ಮೀ. ಭೂಗರ್ಭದಾಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಅಮರಿಕದ ಭೂಗರ್ಭ ಸೇವಾ ಕೇಂದ್ರ ಹೇಳಿದೆ.
ಫಿಲಿಪ್ಪೀನ್ಸ್ನ ಜ್ವಾಲಾಮುಖೀ ಮತ್ತು ಭೂಕಂಪ ಅಧ್ಯಯನ ಕೇಂದ್ರವು ಇಂದು ಸಂಭವಿಸಿರುವ ಭೂಕಂಪದ ತೀವ್ರತೆಯು 7.2 ಅಂಕಗಳಲ್ಲಿ ದಾಖಲಾಗಿರುವುದಾಗಿ ಹೇಳಿದೆ. ಇದರ ಕೇಂದ್ರ ಬಿಂದು ಮಿಂದನಾವೋ ದಕ್ಷಿಣ ಕರಾವಳಿಯಿಂದ 53 ಕಿ.ಮೀ. ದೂರ ಸಮುದ್ರದಾಳದಲ್ಲಿ ಇದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.