ನಾಲವಾರ ಮಠದಲ್ಲಿ ಭಕ್ತಿಯ ತನಾರತಿ ಉತ್ಸವ
Team Udayavani, Apr 30, 2017, 3:40 PM IST
ವಾಡಿ: ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ತನಾರತಿ ಉತ್ಸವ ಸಂಭ್ರಮದಿಂದ ನೆರವೇರಿತು. ಶ್ರೀ ಮಠದ ಆವರಣದಲ್ಲಿ ಸೇರಿದ್ದ ಸಾವಿರಾರು ಜನ ಭಕ್ತರು ಭಕ್ತಿಯ ತನಾರತಿ ಹೊತ್ತು ಪುನೀತರಾದರು.
ಮಠದ ಪೀಠಾಧಿಪತಿ ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಕೋರಿಸಿದ್ದೇಶ್ವರರ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳು ಮಠದ ಸಾಂಪ್ರದಾಯಿಕ ಉಡುಗೆಯೊಂದಿಗೆ ತನಾರತಿ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರೊಟ್ಟಿಗೆ ಹೆಜ್ಜೆ ಹಾಕಿದರು.
ನಾದಸ್ವರ, ಪುರವಂತರ ಕುಣಿತ ಹಾಗೂ ಜಯಘೋಷಗಳೊಂದಿಗೆ ಶ್ರೀಗಳು ಗದ್ದುಗೆಗೆ ಪ್ರದಕ್ಷಿಣೆ ಹಾಕಿದರು. ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದ ತೋಟೇಂದ್ರ ಸ್ವಾಮೀಜಿ, ಸಮಾಜದ ಸ್ವಾಸ್ಥ ಕಾಪಾಡಲು ಜನರು ಆರೋಗ್ಯವಂತರಾಗಿರುವುದು ಮುಖ್ಯ.
ಕಲ್ಮಶ ವಾತಾವರಣದಿಂದ ರೋಗಪೀಡಿತ ಸಮಾಜ ಹುಟ್ಟುತ್ತದೆ. ಮನಸ್ಸಿನ ಭಾವನೆಗಳು ಕಲ್ಮಶಗೊಂಡರೆ ದೇಹ ರೋಗದಿಂದ ತತ್ತರಿಸುತ್ತದೆ. ಮನಸ್ಸಿನ ಆರೋಗ್ಯಕ್ಕೆ ಧರ್ಮದ ಚಿಕಿತ್ಸೆ ಜತೆಗೆ ಭಕ್ತಿಯ ಪಾಠದ ಅಗತ್ಯವಿದೆ ಎಂದು ನುಡಿದರು.
ತನಾರತಿ ಉತ್ಸವ ಆರಂಭಕ್ಕೂ ಮುಂಚೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ದಂತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ರಾಯಚೂರು ಕೃಷಿ ವಿವಿ ನಿಧೇìಶಕ ವೀರಣ್ಣಗೌಡ ಪರಸರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.
ಭೀಮರೆಡ್ಡಿಗೌಡ ಕುರಾಳ, ಡಾ.ಪ್ರಕಾಶ ಹಿರೇಮಠ ಗಂವಾರ, ಶಾಂತಪ್ಪ ಸಾಹು, ಕಲಬುರಗಿ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ವೈದ್ಯರಾದ ಡಾ| ಅಂಬಿಕಾ ನಾಲವಾರ, ಡಾ| ಗಿರೀಜಾ, ಡಾ| ಪ್ರೇರಣಾ, ಡಾ| ಕಾಂಚನಾ ಹಿರೇಮಠ, ಡಾ| ಭಾರತಿ, ಡಾ| ಪೂಜಾ, ಡಾ| ಸಂಕೀರ್ತನಾ, ಡಾ| ಭಾರ್ಗವಿ, ಡಾ| ಜಿವ್ಹೇಶ, ಡಾ| ಅಭಿಷೇಕ, ಡಾ| ಮೀರಜ, ಡಾ| ಆದ್ಯ ಪಾಲ್ಗೊಂಡಿದ್ದರು. ಶ್ರೀಮಠದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಠದ ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!
Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!
State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್ಲೈನ್ ಕಣ್ಣು !
Mahalaya Shraddha: ಋಣಮುಕ್ತಗೊಳಿಸಿ, ವಂಶವನ್ನು ಬೆಳಗಿಸುವ ಮಹಾಲಯ ಕಾರ್ಯ
Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.