ಪಾಕ್ ಸೇನೆ ಮೇಲೆ ಅಫ್ಘಾನ್ ಗುಂಡಿನ ದಾಳಿ: 3 ಬಲಿ, 17 ಮಂದಿಗೆ ಗಾಯ
Team Udayavani, May 5, 2017, 12:20 PM IST
ಇಸ್ಲಾಮಾಬಾದ್ : ಅಫ್ಘಾನ್ ಪಡೆಗಳು ಇಂದು ಪ್ರಕ್ಷುಬ್ಧ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪಾಕ್ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಓರ್ವ ಮಹಿಳೆ ಸಹಿತ ಕನಿಷ್ಠ ಮೂವರು ಮೃತಪಟ್ಟು, ಇತರ 17 ಮಂದಿ ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲೂಚಿಸ್ಥಾನದ ಚಮನ್ ಜಿಲ್ಲೆಯ ಕಾಲಿ ಲಕ್ಮನ್ ಮತ್ತು ಕಾಲಿ ಜಹಾಂಗೀರ್ ಪ್ರದೇಶದಲ್ಲಿ ಅಫ್ಘಾನ್ ಪಡೆಗಳು ಶೆಲ್ಲಿಂಗ್ ನಡೆಸಿದವು. ಅಫ್ಘಾನ್ ಭದ್ರತಾ ಅಧಿಕಾರಿಗಳು ಹೇಳಿರುವ ಪ್ರಕಾರ ಈ ಗುಂಡಿನ ದಾಳಿಯು ಈ ಪ್ರದೇಶದಲ್ಲಿನ ಪಾಕ್ ಚೆಕ್ ಪೋಸ್ಟ್ಗಳನ್ನು ಗುರಿ ಇರಿಸಿ ನಡೆಸಲಾಗಿದೆ.
ಅಫ್ಘಾನ್ ಪಡೆಗಳ ಈ ದಾಳಿಗೆ ಪಾಕ್ ಪಡೆಗಳು ಗುಂಡಿನ ಉತ್ತರ ನೀಡಿರುವುದಾಗಿ ತಿಳಿದುಬಂದಿದೆ.
ಅಫ್ಘಾನ್ ಕಡೆಯಿಂದ ನಡೆದಿರುವ ಗುಂಡಿನ ದಾಳಿಗೆ ಓರ್ವ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದು ಇತರ 17 ಮಂದಿ ಗಾಯಗೊಂಡಿರುವುದನ್ನು ಚಮನ್ ಸರಕಾರಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಅಖ್ತರ್ ದೃಢಪಡಿಸಿದ್ದಾರೆ.
ಚಮನ್ ನಲ್ಲಿನ ಸೆನ್ಸಸ್ ತಂಡಕ್ಕೆ ಭದ್ರತೆ ನೀಡುತಿತದ್ದ ಪಾಕ್ ಫ್ರಾಂಟಿಯರ್ ಪಡೆಯ ಸಿಬಂದಿಗಳ ಮೇಲೆ ಅಫ್ಘಾನ್ ಗಡಿ ರಕ್ಷಣಾ ಪೊಲೀಸರು ಗುಂಡಿನ ದಾಳಿ ನಡೆಸಿದರೆಂದು ಪಾಕ್ ಸೇನೆಯ ಮಾಧ್ಯಮ ವಿಭಾಗವಾಗಿರುವ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್
ESI Hospital: ಬೆಳ್ಳಂಬೆಳಗ್ಗೆ ಇಎಸ್ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Bengaluru: ಎಎಸ್ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.