ಬಾಹುಬಲಿಗೆ ಬಂದಿತ್ತು 6 ಸಾವಿರ ಮದುವೆ ಪ್ರಸ್ತಾವ
Team Udayavani, May 5, 2017, 1:54 PM IST
ಮುಂಬಯಿ/ಹೈದರಾಬಾದ್: ‘ಬಾಹುಬಲಿ’ ಸಿನೆಮಾದಲ್ಲಿನ ಅಭಿನಯದ ಬಳಿಕ ತೆಲುಗು ನಟ ಪ್ರಭಾಸ್ ದಕ್ಷಿಣ ಭಾರತಕ್ಕೆ ಮಾತ್ರ ಅಲ್ಲ. ವಿಶ್ವಕ್ಕೇ ಸೂಪರ್ಸ್ಟಾರ್. ಅಂದ ಹಾಗೆ ಈ ಸ್ಟಾರ್ ಸಿನಿಮಾಕ್ಕಾಗಿಯೇ ಮದುವೆಯನ್ನು ಮುಂದೂಡಿಕೊಂಡು ಬಂದಿದ್ದಾರಂತೆ. ಇದೀಗ ಬಾಹುಬಲಿಯ ಮೊದಲ ಮತ್ತು ಎರಡನೇ ಭಾಗ ಕೂಡ ತೆರೆ ಕಂಡಿದೆ. ಇಂಥ ಎಲಿಜಿಬಲ್ ಬ್ಯಾಚಲರ್ನನ್ನು ಅಳಿಯನನ್ನಾಗಿ ಪಡೆಯಬೇಕು ಎಂಬ ಹಂಬಲ ಯಾವ ಹುಡುಗಿಯ ಹೆತ್ತವರಿಗೆ ಇರುವುದಿಲ್ಲ ಹೇಳಿ. ಅವರು ದೇಶ – ವಿದೇಶಗಳ ಸಾವಿರಾರು ಹೆಣ್ಣು ಮಕ್ಕಳ, ಕನ್ಯಾಪಿತೃಗಳ ಹೃದಯ ಕದ್ದ ಚೋರ ಪ್ರಭಾಸ್ ಎನ್ನುವುದು ಜನಜನಿತ. ಏನಾದರೂ ಆಗಲಿ ಅವರನ್ನೇ ಮದುವೆಯಾಗಬೇಕೆಂದು ನಿರೀಕ್ಷಿಸಿ ಬರೋಬ್ಬರಿ 6 ಸಾವಿರ ಯುವತಿಯರು, ಅವರ ಕುಟುಂಬ ವರ್ಗದವರು ಮನವಿ ಮಾಡಿಕೊಂಡಿದ್ದಾರಂತೆ. ಅವುಗಳನ್ನೆಲ್ಲ ಕಣ್ಣೆತ್ತಿಯೂ ನೋಡದ 37ರ ಹರೆಯದ ನಟ ಅವುಗಳನ್ನೆಲ್ಲ ಒಂದೇ ಮಾತಿನಲ್ಲಿ ತಿರಸ್ಕರಿಸಿದ್ದಾರಂತೆ. ಸಿನಿಮಾಕ್ಕಾಗಿ ಬೇಕಾದ ಸಿದ್ಧತೆ ನಡೆಸಬೇಕಾಗಿತ್ತು. ಹೀಗಾಗಿಯೇ ಇಂಥ ನಿರ್ಧಾರ ಮಾಡಬೇಕಾಗಿತ್ತು ಎಂದು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಇಂಥ ನಿರ್ಧಾರ ಪ್ರಕಟಿಸುವ ಮೂಲಕ ತಾನೊಬ್ಬ ವೃತ್ತಿಪರ ನಟ ಎಂಬ ಅಂಶವನ್ನು ಸಾಬೀತು ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿನಿಮಾ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಕಾರಣಕ್ಕಾಗಿಯೇ 5 ವರ್ಷಗಳ ಕಾಲ ಮದುವೆ ಪ್ರಸ್ತಾಪವೇ ಬೇಡ ಎಂದಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡ ಅವರು ಒಂದು ವೇಳೆ ತಾನು ಮದುವೆಯಾಗಬೇಕೆಂದಿದ್ದರೆ ಎರಡು ತಿಂಗಳ ಕಾಲ ಚಿತ್ರೀಕರಣ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಬಳಿಯಲ್ಲಿಯೇ ಇದ್ದ ನಟ ರಾಣಾ ದುಗ್ಗುಬಾಟಿ ಅವರು ಓಹೋ ಹೌದಾ? ಅಂಥ ನಿರ್ಧಾರ ಮಾಡಿದ್ದಿಯಾ ಎಂದು ಕಿಚಾಯಿಸಿದ್ದಾರೆ. ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಪ್ರಭಾಸ್ ಬಾಹುಬಲಿ 1 ಮತ್ತು 2ನೇ ಆವೃತ್ತಿಯ ಶೂಟಿಂಗಾಗಿ ತಮ್ಮ ವೃತ್ತಿ ಜೀವನದ 600 ದಿನಗಳನ್ನು ವ್ಯಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್
ESI Hospital: ಬೆಳ್ಳಂಬೆಳಗ್ಗೆ ಇಎಸ್ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Explainer: FBI ವಾಂಟೆಡ್ ಲಿಸ್ಟ್ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್ ಯಾದವ್?
Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.