ಶೂದ್ರತ್ವದ ಮುಕ್ತಿಗೆ ಬುದ್ಧತ್ವದ ಬೆಳಕು


Team Udayavani, May 20, 2017, 4:40 PM IST

gul4.jpg

ವಾಡಿ: ಮನುಷ್ಯರನ್ನು ಪಶುಗಳಂತೆ ಕಾಣುವ ಶೂದ್ರತ್ವದಿಂದ ಮುಕ್ತಿ ಪಡೆಯಲು ಬುದ್ಧತ್ವದ ಬೆಳಕು ಹರಿಯಬೇಕು ಎಂದು ಬೌದ್ಧ ಭಿಕ್ಷು ಧಮ್ಮಾನಂದ ಅಣದೂರ ಹೇಳಿದರು. ಇಂಗಳಗಿ ಗ್ರಾಮದ ಕರುಣಾ ಬುದ್ಧವಿಹಾರದಲ್ಲಿ ಆರು ಅಡಿ ಎತ್ತರದ ಬುದ್ಧನ ಪಂಚಲೋಹದ ಪ್ರತಿಮೆ ಪ್ರತಿಷ್ಠಾಪಿಸಿ ಅವರು ಧಮ್ಮ ಪ್ರವಚನ ನೀಡಿದರು. 

ಮೌಡ್ಯ ತುಂಬಿದ ಹಳ್ಳಿಗಳಲ್ಲಿ ಈಗ ಬುದ್ಧವಿಹಾರಗಳು ನಿರ್ಮಾಣವಾಗುತ್ತಿರುವುದು ದಲಿತರ ಪ್ರಗತಿಯ ಲಕ್ಷಣವಾಗಿದೆ. ಸನಾತನ ಧರ್ಮದ ಸಂಕೋಲೆಯಿಂದ ಬಿಡುಗಡೆಯಾಗಲು ಬುದ್ಧನ ಪಂಚಶೀಲ ಮಾರ್ಗ ಅನುಸರಿಸಬೇಕು. ಬುದ್ಧನ ಸಂದೇಶಗಳ ಗುಣಗಾನ ಮಾಡಿದರೆ ಸಾಲದು. ಅವುಗಳನ್ನು ಆಚರಣೆಗೆ ತರಲು ಮುಂದಾಗಬೇಕು.

ಶತ್ರುಗಳ ವಿರುದ್ಧ ಜ್ಞಾನದ ಯುದ್ಧಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು. ಧಮ್ಮ ಪ್ರವಚನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಸಾಹಿತಿ ರಾಜಶೇಖರ ಮಾಂಗ್‌, ಮನೆಯಂಗಳದಲ್ಲಿ ಎಸೆಯಲಾದ ಕುಂಕುಮ ಮತ್ತು ನಿಂಬೆ ಹಣ್ಣಿಗೆ ಹೆದರುವ ಜನ ನಾವಾಗಬಾರದು.

ಮೌಡ್ಯಗಳು ಕೇವಲ ಕೆಳ ಜಾತಿಯವರನ್ನೆ ಸುತ್ತಿಕೊಂಡಿದ್ದು ಯಾಕೆ ಎಂಬುದರ ಹಿಂದೆ ಮನುಧರ್ಮ ಶಾಸ್ತ್ರದ ಬಹುದೊಡ್ಡ ಷಡ್ಯಂತ್ರವಿದೆ. ಸರ್ವೋದಯದ ಕಲ್ಪನೆ ಎತ್ತಿ ಹಿಡಿದ ಬುದ್ಧನ ಧಮ್ಮ ನಮ್ಮ ಜೀವನದ ಸಿದ್ಧಾಂತವಾಗಬೇಕು. ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನವಾದಾಗ ಸಿಡಿದೆದ್ದು  ಪ್ರತಿಭಟಿಸುವ ನಾವು ಅವರ ಚಿಂತನೆಗಳನ್ನು ಆಚರಣೆಗೆ ತರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. 

ಪುರಸಭೆ ತಹಶೀಲ್ದಾರ ಕೆ.ಆನಂದಶೀಲ ಮಾತನಾಡಿ, ಒಡೆದಾಳುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಒಗ್ಗಟ್ಟು ನಮ್ಮ ಗುರಿಯಾಗಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ತೋರಿದ ಮಾರ್ಗದಡಿ ಸಾಗಬೇಕು ಎಂದು ಹೇಳಿದರು. ಜ್ಞಾನಸಾಗರ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.

ಕಾಶೀನಾಥ ಹಿಂದಿನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೌದ್ಧ ಭಿಕ್ಷುಣಿ ಸಂಘಮಿತ್ರ. ಪಿಡಬುಡಿ ಸೇಡಂ ವಿಭಾಗದ ಇಇ ವಿಜಯದಶರಥ ಸಂಗನ್‌, ಪಿಆರ್‌ಇ ಕಲಬುರಗಿ ವಿಭಾಗದ ಇಇ ಸುರೇಶ ಶರ್ಮಾ, ಸುಭಾಷ ಯಾಮೇರ ಇಂಗಳಗಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಪುರಸಭೆ ಸದಸ್ಯ ಶರಣು ನಾಟೀಕಾರ, ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇನ ಮೇನಗಾರ,

ನ್ಯಾಯವಾದಿ ಶಿವಣ್ಣ ಸಾತನೂರ, ಪುರಸಭೆ ಮುಖ್ಯಾಧಿಕಾರಿ ಶಂಕರ ಡಿ. ಕಾಳೆ, ದಲಿತ ಮುಖಂಡರಾದ ಇಂದ್ರಜೀತ ಸಿಂಗೆ, ಬಸವಂತ ಹೊನಗುಂಟಿಕರ, ಜಗನ್ನಾಥ  ಮದ್ರಕಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ನಾಗರಾಜ ಕೆಲ್ಲೂರ ಸ್ವಾಗತಿಸಿದರು. ಮಿಲಿಂದ ಹಿಂದಿನಕೇರಿ ನಿರೂಪಿಸಿದರು. ರಾಜು ಸಂಕಾ ವಂದಿಸಿದರು.

ಟಾಪ್ ನ್ಯೂಸ್

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಕೊಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.