ಜೈವಿಕ ಗೊಬ್ಬರ ತಯಾರಿಕಾ ಘಟಕದ ಆರಂಭ
Team Udayavani, May 21, 2017, 4:45 PM IST
ಕಲಬುರಗಿ: ನಗರದ ಹೊರವಲಯದ ಮಾಧವ ಗೋಶಾಲೆಯಲ್ಲಿ ದೇಶಿ ಗೋವಿನ ಸೆಗಣಿಯಿಂದ ತಯಾರಿಸಲಾಗುವ ಜೈವಿಕ ಗೊಬ್ಬರ ಮತ್ತು ಪಂಚಗವ್ಯ ಔಷಧಿ ತಯಾರಿಕಾ ಘಟಕಕ್ಕೆ ವಿಶ್ವ ಹಿಂದು ಪರಿಷತ್ನ ಗೌರವಾಧ್ಯಕ್ಷ ಲಿಂಗರಾಜ ಅಪ್ಪಾ ಚಾಲನೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ರಮೇಶ ಸ್ವಾಮಿ ಮಾತನಾಡಿ, ಈಗಾಗಲೇ ಈ ಗೋಶಾಲೆಯಿಂದ 19 ಗೋವಂಶವನ್ನು ರೈತರಿಗೆ ಉಚಿತವಾಗಿ ಒಪ್ಪಂದದ ಮೂಲಕ ನೀಡಲಾಗಿದೆ. ಅದಲ್ಲದೆ, ಶಾಲೆಯಲ್ಲಿ ಇರುವ ಅಂಗವಿಕಲ 22 ಗೋವುಗಳಿಗೆ ಸೇವೆ ಮಾಡಲಾಗುತ್ತಿದೆ.
ಶಾಲೆಯಲ್ಲಿ ಸಿಗುವ ಗೋಮೂತ್ರ ಮತ್ತು ಗೋಮಯದಿಂದ ತಯಾರು ಮಾಡಿರುವ ಗೊಬ್ಬರ, ಕೀಟನಾಶಕ ಮತ್ತು ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವುದರ ಮೂಲಕ ಆರ್ಥಿಕ ವೆಚ್ಚ ನಿರ್ವಹಿಸುವ ಯೋಜನೆ ಮಾಡಲಾಗಿದೆ. ಮಾಧವ ಗೋಶಾಲೆಯಲ್ಲಿ ಶುದ್ಧ ವಿಭೂತಿಯೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.
ಅದಲ್ಲದೆ, ಘನ ಜೀವಾಮೃತ, ನಡೆಫ್ ಕಾಂಪೋಸ್ಟ್ ಮತ್ತು ಎರೆ ಹುಳು ಗೊಬ್ಬರವನ್ನು ಮೊದಲ ಹಂತದಲ್ಲಿ ತಯಾರಿಸುವುದು ಎಂದು ಹೇಳಿದರು. ಗೋವು ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿ ರಾಯಚೂರು ಕೃಷಿ ವಿವಿ ಡೀನ್ ಜಿ.ಆರ್. ಪಾಟೀಲ, ಜೈವಿಕ ಗೊಬ್ಬರದ ಬಳಕೆ ಮತ್ತು ಈ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಸವಿವರವಾಗಿ ವಿವರಿಸಿದರು.
ಹಿರಿಯ ಕೃಷಿ ತಜ್ಞ ಗುಂಡಪ್ಪಗೊಳ, ಗೋವಿಜ್ಞಾನಿ ಸುಧೀಂದ್ರ ದೇಶಪಾಂಡೆ, ಗುರುಶಾಂತ ಟೆಂಗಳಿ, ಶಾಂತಕುಮಾರ ಬಿರಾದಾರ, ಶಾಂತಕುಮಾರ ಖೇಮಜಿ, ಹಣಮಂತರಾವ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.