ಹೈದ್ರಾಬಾದ ಕರ್ನಾಟಕಕ್ಕೆ ಕ್ಯಾನ್ಸರ್ ಆಸ್ಪತ್ರೆ, ಧರ್ಮಶಾಲೆ ಭಾಗ್ಯ
Team Udayavani, May 27, 2017, 3:22 PM IST
ಕಲಬುರಗಿ: ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮಾದರಿಯಲ್ಲಿ ಕಲಬುರಗಿಯಲ್ಲೂ ಅಂತಹದ್ದೇ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ರಾಜ್ಯ ಸರಕಾರ ಕಟ್ಟುವ ಮುಖಾಂತರ ಹೈಕ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಮುಂದಾಗಿದೆ.
ಅಲ್ಲದೆ, ಸುಧಾಮೂರ್ತಿ ಅವರ ಇನ್ಫೋಸಿಸ್ ನೆರವಿನಿಂದ ಧರ್ಮಶಾಲೆ ಕಟ್ಟುವ ಮೂಲಕ ಸಂಪೂರ್ಣ ಆರೋಗ್ಯ ಭಾಗ್ಯ ಕರುಣಿಸಿದೆ. ಬೆಂಗಳೂರಿನಲ್ಲಿ 1973ರಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಆರಂಭವಾದರೆ, ಕಲಬುರಗಿಯಲ್ಲಿ 1990ರಲ್ಲಿ ಆರಂಭಿಸಲಾಯಿತು.
ಅಂದು ಕಿದ್ವಾಯಿ ನಿರ್ದೇಶಕರಾಗಿದ್ದ ಡಾ| ಕೃಷ್ಣಾ ಭಾರ್ಗವ ಎಚ್ಕೆಇ ಸಂಸ್ಥೆಯ ಅನುದಾನ ಮತ್ತು ಸ್ಥಳೀಯ ಉದ್ಯಮಿಗಳ ಅನುದಾನದಿಂದ ಕಿದ್ವಾಯಿಯ ಅಂಗಸಂಸ್ಥೆಯಾಗಿಯೇ ವಿಟಿಎಸ್ಎಂ ಫೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಆರಂಭಿಸಿದರು.
ಇಲ್ಲಿ ಹೊರರೋಗಿಗಳಿಗೆ ಪ್ರಪ್ರಥಮ ವಿಕಿರಣ ಚಿಕಿತ್ಸಾ ಕೇಂದ್ರ ಪ್ರಾರಂಭ ಮಾಡಲಾಯಿತು. 1997ರ ಡಿಸೆಂಬರ್ನಲ್ಲಿ 50 ಹಾಸಿಗೆಯುಳ್ಳ ಒಳರೋಗಿಗಳ ಸೇವೆ ಆರಂಭಿಸಲಾಯಿತು. ಆಸ್ಪತ್ರೆಗೆ ಪ್ರತಿ ರ್ಷ 500-600 ಹೊರ ರೋಗಿಗಳು 4ಸಾವಿರದಷ್ಟು ಅನುಸರಣೆ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ.
2014ರಲ್ಲಿ ಮೇಲ್ದರ್ಜೆಗೆ: ಯಾವಾಗ ಡಾ| ಶರಣಪ್ರಕಾಶ ಪಾಟೀಲರು ವೈದ್ಯಕೀಯ ಶಿಕ್ಷಣ ಸಚಿವರಾದರೋ ಆಗ ನಿರಂತರ ಪ್ರಯತ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಫೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಎರಡು ಹಂತದಲ್ಲಿ ಮೇಲ್ದರ್ಜೆಗೆ ಏರಿಸಲಾಯಿತು. ಇದಕ್ಕೆ ಸರಕಾರದ ತಾಂತ್ರಿಕ ಅನುಮೋದನೆಯೂ ದೊರೆಯಿತು.
ಸಿಬ್ಬಂದಿ ನೇಮಕಾತಿಗೂ ಅನುಮತಿ ಸಿಕ್ಕಿತು. ಈಗ ಮೇಲ್ದರ್ಜೆಗೇರಿಸಿ ಆಂಕಾಲಾಜಿಸ್ಟ್, ಕಿಮೋಥೆರμ ಚಿಕಿತ್ಸೆಹಾಗೂ ಸರ್ಜಿಕಲ್ ಆಂಕಾಲಾಜಿಸ್ಟ್ ನೇಮಕ ಮಾಡಿ ಶಸ್ತ್ರ ಚಿಕಿತ್ಸಾ ಘಟಕವನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಅತ್ಯಂತ ಆಧುನಿಕ ವ್ಯವಸ್ಥೆಯಾಗಿದೆ. ಇದಾದ ಬಳಿಕ 120 ರೋಗಿಗಳು ಬೆಂಗಳೂರನ್ನು ಹೊರತು ಪಡಿಸಿ ಚಿಕಿತ್ಸೆಯನ್ನು ಕಲಬುರಗಿಯಲ್ಲಿ ಪಡೆಯಲು ಸಾಧ್ಯವಾಗಿದೆ.
ಧರ್ಮಶಾಲೆ ಭಾಗ್ಯ: ಈ ಮೊದಲು ಬೆಂಗಳೂರಿಗೆ ಹೋಗುವ ಹೈಕ ಭಾಗದ ಜನರು ಊಟಕ್ಕಾಗಿ ಭಾರಿ ಸಂಕಷ್ಟ ಎದುರಿಸುತ್ತಿದ್ದರು. ಅದನ್ನು ಅರ್ಥ ಮಾಡಿಕೊಂಡಿದ್ದ ಇನ್ಫೋಸಿಸ್ ಬೆಂಗಳೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಧರ್ಮಶಾಲೆ ಆರಂಭಿಸಿ, ಅಲ್ಲಿ ಉತ್ತರ ಕರ್ನಾಟಕದ ಊಟ ದೊರೆಯುವ ವ್ಯವಸ್ಥೆ ಮಾಡಲು ಹೊರಟಿದ್ದಾರೆ. ಅದೇ ಮಾದರಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲೂ ಅಂತಹದೇ ಧರ್ಮಶಾಲೆಯನ್ನು ನಿರ್ಮಾಣ ಮಾಡಲು ಸುಧಾಮೂರ್ತಿ ಒಪ್ಪಿಗೆ ಸೂಚಿಸಿದ್ದಾರೆ.
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.