ಬಂಗೇರಕಟ್ಟೆ ಕೆರೆ ಅಭಿವೃದ್ಧಿ ಮರೀಚಿಕೆ; ಬೆಳ್ತಂಗಡಿಯ ಬಹುದೊಡ್ಡ ಕೆರೆ
Team Udayavani, May 31, 2017, 3:51 PM IST
ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಬಹುದೊಡ್ಡ ಕೆರೆಗಳಲ್ಲಿ ಮಡಂತ್ಯಾರು ಸಮೀಪದ ಬಂಗೇರಕಟ್ಟೆಯೂ ಒಂದು. ಕೃಷಿಗೆ ನೀರು ಒದಗಿಸುತ್ತಿದ್ದ ಈ ಕೆರೆ ಈಗ ಅಭಿವೃದ್ಧಿ ಕಾಣದೆ ಬರಿದಾಗುತ್ತಿದೆ.
ಟೆಂಡರ್ ಆಗಿತ್ತು
2009ರಲ್ಲಿ ಸರಕಾರ ಕೆರೆ ಅಭಿವೃದ್ಧಿಗೆ ಮುಂದಾಗಿತ್ತು. 30 ಲ.ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿ ಟೆಂಡರ್ ಕೂಡ ಆಗಿತ್ತು. ಆದರೆ ಕಾಮಗಾರಿ ನಡೆದಿಲ್ಲ. 30ಲ.ರೂ. ಅನುದಾನದಲ್ಲಿ ಕೆರೆಯ ಸುತ್ತ ತಂತಿ ಬೇಲಿ, ತಡೆಗೋಡೆ, ಕೆರೆ ಸುತ್ತ ಗಿಡ ನೆಡುವ ಕಾರ್ಯ, ಹೂಳೆತ್ತುವ ಕಾರ್ಯ ನಡೆಯಬೇಕಿತ್ತು. ಆದರೆ ಇದು ನಡೆದಿಲ್ಲ. 2011ರಲ್ಲಿ ಹೂಳೆತ್ತುವ ಕಾರ್ಯ ನಡೆಯಿತು. ಉಳಿದ ಕಾಮಗಾರಿ ನಡೆದಿಲ್ಲ.
ಪ್ರವಾಸಿ ತಾಣ ಮಾಡಲು ಸಾಧ್ಯ
ಪ್ರಶಾಂತವಾದ ವಾತಾವರಣದಲ್ಲಿರುವ ಈ ಕರೆ ಪರಿಸರವನ್ನು ಒಂದು ಉತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕೂಡ ಸಾಧ್ಯವಿದೆ. ಪಕ್ಷಿಗಳ ಚಿಲಿಪಿಲಿ ಇಲ್ಲಿರುತ್ತದೆ. ಮೀನು ಸಾಕಣಿಕೆಯಿಂದ ಗ್ರಾ.ಪಂ. ಆದಾಯ ಗಳಿಸಬಹುದು, ಬೋಟಿಂಗ್ ವ್ಯವಸ್ಥೆ ಮಾಡಿ ಜನರನ್ನು ಆಕರ್ಷಿಸಬಹುದಾಗಿದೆ.
ಮನವಿ ನೀಡಲಾಗಿದೆ
ಕೆರೆಯ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ಥಳೀಯರು ಮನವಿ ನೀಡಿದ್ದಾರೆ. ಈ ಕೆರೆ ಕಂದಾಯ ಇಲಾಖೆಗೆ ಒಳಪಟ್ಟಿದೆ. ಅಭಿವೃದ್ಧಿಗೆ ಪಂಚಾಯತ್ ಅನುದಾನ ಸಾಕಾಗುವುದಿಲ್ಲ . ಕೆರೆ ಅಭಿವೃದ್ಧಿಯಾದರೆ ಈ ಭಾಗದ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಬಗೆಹರಿಸಬಹುದು.
– ನಾಗೇಶ್ ಎಂ., ಮಡಂತ್ಯಾರು
ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ
– ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.