ಕದ್ದಾಲಿಕೆ ಸತ್ಯಶೋಧನೆಗೆ ಡಿಜಿಪಿ ದತ್ತಾ ಆದೇಶ


Team Udayavani, Jun 7, 2017, 1:32 PM IST

r-k-datta.jpg

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ನಡೆದಿದ್ದ ಕಾವೇರಿ ಗಲಭೆ ಸಂದರ್ಭದಲ್ಲಿ ತಮ್ಮ ಹಾಗೂ ಕೆಲ ಕನ್ನಡ ಪರ ಸಂಘಟನೆಗಳ ನಡುವೆ ನಡೆದಿದ್ದ ಫೋನ್‌ ಸಂಭಾಷಣೆಯನ್ನು ಡಿಸಿಪಿ ಅಜಯ್‌ ಹಿಲೋರಿ ಕದ್ದಾಲಿಸಿ ಬಹಿರಂಗ ಪಡಿಸಿದ್ದಾರೆ ಎಂದು ಕೆಎಸ್‌ಆರ್‌ಪಿ ಐಜಿಪಿ ಕೆಎಸ್‌ಆರ್‌ ಚರಣ್‌ ರೆಡ್ಡಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ರೂಪಕ್‌ ಕುಮಾರ್‌ ದತ್ತಾ ಅವರಿಗೆ ವರದಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯ ಶೋಧನಾ ವರದಿ ನೀಡುವಂತೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರಿಗೆ ಡಿಜಿ ಆರ್‌.ಕೆ.ದತ್ತಾ ಸೂಚಿಸಿದ್ದು, ಐಜಿಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ತನಿಖೆಯ ಹೊಣೆಗಾರಿಕೆ ನೀಡಲಾಗಿದೆ.

ಏನಿದು ಪ್ರಕರಣ?: 2016ರ ಸೆಪ್ಟಂಬರ್‌ 9ರಂದು ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಹೀಗಾಗಿ ಪಶ್ಚಿಮ ವಲಯ ಡಿಸಿಪಿ ಅಜಯ್‌ ಹಿಲೋರಿ ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡ ಪ್ರಕಾಶ್‌ ಸೇರಿದಂತೆ ಕೆಲ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಬಂಧಿಸಿದ್ದರು.

ಬಳಿಕ ನಗರಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಹೆಚ್ಚುವರಿ ಪೊಲೀಸ್‌ ಆಯುಕ್ತ ಚರಣ್‌ರೆಡ್ಡಿ ಅವರಿಗೆ ಕರೆ ಮಾಡಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ಪ್ರತಿಭಟನೆ ಶಾಂತಿಯುತವಾಗಿ ನಡೆದಿರುವುದರಿಂದ ಪ್ರಕಾಶ್‌ ಹಾಗೂ ಇತರರನ್ನು ಬಿಡುವಂತೆ ಮನವಿ ಮಾಡಿದ್ದರು. ಹೀಗಾಗಿ ಡಿಸಿಪಿ ಅಜಯ್‌ ಹಿಲೋರಿಗೆ ಕರೆ ಮಾಡಿದ್ದ ಚರಣ್‌ ರೆಡ್ಡಿ ಎಲ್ಲರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದರು.

ಅದರಂತೆ, ಸೆ. 11ರಂದು ಕನ್ನಡ ಪ್ರಕಾಶ್‌ ಅವರನ್ನು ಬಿಡುಗಡೆ ಮಾಡಲಾಯಿತು. ಇದಾದ ಎರಡು ದಿನಗಳ ಬಳಿಕ ಮೈಸೂರು ರಸ್ತೆಯಲ್ಲಿ ಹೋರಾಟ ಹಿಂಸೆಗೆ ತಿರುಗಿ ಕೆಲ ಸಾವು-ನೋವಿನ ಘಟನೆಗಳು ನಡೆದವು. ಇದರಿಂದ ಅಸಮಾಧಾನಗೊಂಡಿದ್ದ ಚರಣ್‌ರೆಡ್ಡಿ, ಡಿಸಿಪಿ ಅಜಯ್‌ ಹಿಲೋರಿ ಅವರಿಗೆ ಕರೆ ಮಾಡಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಸೂಚಿಸಿದ್ದರು. 

ಗೌಪ್ಯತೆ ಕಾಪಾಡದ ಅಜಯ್‌ ಹಿಲೋರಿ: ಹೋರಾಟಗಳು, ತೀವ್ರ ರೀತಿಯ ಪ್ರತಿಭಟನೆಗಳು ನಡೆಯುವಂಥ ಸಂದರ್ಭದಲ್ಲಿ ಹೋರಾಟಗಾರರು, ಮುಖಂಡರ ಫೋನ್‌ಗಳನ್ನು ಟ್ರ್ಯಾಪ್‌ ಮಾಡುವುದು ಸಾಮಾನ್ಯ. ಅದರಂತೆ ಡಿಸಿಪಿ ಅಜಯ್‌ ಹಿಲೋರಿ ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತು ಕನ್ನಡ ಪ್ರಕಾಶ್‌ ಅವರ ಫೋನ್‌ಗಳನ್ನು ಟ್ರ್ಯಾಪ್‌ ಮಾಡಿಸಿದ್ದರು. ಇದೇ ವೇಳೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಚರಣ್‌ರೆಡ್ಡಿ ಅವರ ಜತೆಗಿನ ಸಂಭಾಷಣೆಯೂ ಟ್ರ್ಯಾಪ್‌ ಆಗಿತ್ತು.

ಈ ವಿಚಾರ ಚರಣ್‌ರೆಡ್ಡಿ ಅವರಿಗೆ ಗೊತ್ತಿತ್ತು. ಆದರೂ ಪ್ರತಿಭಟನೆ ವೇಳೆ ಇಂತಹ ಪ್ರಕ್ರಿಯೆ ಸಾಮಾನ್ಯ ಎಂದು ಸುಮ್ಮನಿದ್ದರು. ಟ್ರ್ಯಾಪ್‌ ಮಾಡಲಾದ ಆಡಿಯೋವನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವಂತಿಲ್ಲ. ಆದರೆ ಡಿಸಿಪಿ ಅಜಯ್‌ ಹಿಲೋರಿ ತಮ್ಮ ಇತರೆ ಸಹೋದ್ಯೋಗಿಗಳು ಮತ್ತು ಕೆಲ ಆಪ್ತ ವ್ಯಕ್ತಿಗಳಿಗೆ ಬಹಿರಂಗ ಪಡಿಸಿದ್ದಾರೆ ಎಂದು ಚರಣ್‌ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ಕಾವೇರಿ ಗಲಾಟೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡಿಸಿಪಿ ಅಜಯ್‌ ಹಿಲೋರಿ ವಿಫ‌ಲರಾಗಿದ್ದಾರೆ ಎಂದು ಸಿಎಆರ್‌ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು ಚರಣ್‌ ರೆಡ್ಡಿ ಮತ್ತು ಕನ್ನಡ ಪರ ಸಂಘಟನೆ ಮುಖಂಡರ ನಡುವಿನ ಫೋನ್‌ ಸಂಭಾಷಣೆಯನ್ನು ಚಿಕ್ಕಪೇಟೆ, ಕೆಂಗೇರಿ ಮತ್ತು ವಿಜಯನಗರ ಉಪವಿಭಾಗದ ಎಸಿಪಿಗಳಿಗೆ ಹಾಗೂ ಕಾಟನ್‌ಪೇಟೆ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಕೆಂಗೇರಿ ಮತ್ತು ಕಾಮಾಕ್ಷಿಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್‌ಗಳ ಮೊಬೈಲ್‌ಗೆ ವಾಟ್ಸಾಪ್‌ ಮೂಲಕ ರವಾನೆ ಮಾಡಿದ್ದರು.

ವರ್ಗಾವಣೆ ಆಗಿದ್ದರೂ ಸೆ.16 ರಂದು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಗೆ ಬಂದ ಅಜಯ್‌ ಹಿಲೋರಿ, ಸಂಪೂರ್ಣ ಮಾತುಕತೆಯ ಸಂಭಾಷಣೆಯನ್ನು ಪೆನ್‌ ಡ್ರೈವ್‌ನಲ್ಲಿ ಹಾಕಿಕೊಡಲು ಠಾಣೆಯ ಫೋನ್‌ ಇನ್‌ಟೆರ್‌ಸೆಪ್ಷನ್‌ನ ಮುಖ್ಯಪೇದೆ ಜನಾರ್ದನ್‌ಗೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜನಾರ್ದನ್‌ಗೆ ಅಜಯ್‌ ಹಿಲೋರಿ ಎಚ್ಚರಿಕೆ ನೀಡಿ ಪೆನ್‌ಡ್ರೈವ್‌ನಲ್ಲಿ ಸಂಭಾಷಣೆಯನ್ನು ಹಾಕಿಸಿಕೊಂಡು ಹೋಗಿದ್ದರು. ಇದೇ ವೇಳೆ ಅಂದು ಅಧಿಕಾರ ಸ್ವೀಕರಿಸಲು ಬೆಳಗ್ಗೆ 9 ಗಂಟೆ ಸುಮಾರಿಗೆ ಎಂ.ಎನ್‌.ಅನುಚೇತ್‌ ಅವರು ಕಚೇರಿಗೆ ಬಂದಿದ್ದರು.

ಆದರೆ, ಅಜಯ್‌ ಹಿಲೋರಿ ಕಚೇರಿಯಲ್ಲಿ ಸ್ವಲ್ಪ ಕೆಲಸಗಳಿದ್ದು, ಮುಗಿಸಿಕೊಂಡು, ಬಳಿಕ ಅಧಿಕಾರ ಹಸ್ತಾಂತರಿಸುತ್ತೇನೆಂದು ಕೇಳಿಕೊಂಡಿದ್ದರು ಎನ್ನಲಾಗಿದೆ. ಈ ಮಧ್ಯೆ ಸೆ.20ರಂದು ಮಾಧ್ಯಮವೊಂದರಲ್ಲಿ ಅಜಯ್‌ ಹಿಲೋರಿ ಪೆನ್‌ಡ್ರೈವ್‌ ಮೂಲಕ ಆಡಿಯೋ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಐಜಿಪಿ ಚರಣ್‌ರೆಡ್ಡಿ ಡಿಸಿಪಿ ಅನುಚೇತ್‌ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದರು. ಆಂತರಿಕವಾಗಿ ವಿಚಾರಣೆ ನಡೆಸಿದ ಅನುಚೇತ್‌, ಅಜಯ್‌ ಹಿಲೋರಿ ಅವರು ಜನಾರ್ದನ್‌ ಅವರಿಂದ ಆಡಿಯೋ ಪಡೆದುಕೊಂಡಿರುವ ಬಗ್ಗೆ ಚರಣ್‌ರೆಡ್ಡಿ ಅವರಿಗೆ ವರದಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಡಿಜಿಪಿ ಆದೇಶ: ಫೋನ್‌ ಸಂಭಾಷಣೆ ಸೋರಿಕೆ ಬಗ್ಗೆ ಚರಣ್‌ರೆಡ್ಡಿ ಅವರು ಅಂದಿನ ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌.ಮೇಘರಿಕ್‌ ಅವರಿಗೆ ವರದಿ ನೀಡಿದ್ದು, ಕರ್ತವ್ಯಲೋಪ ಎಸಗಿರುವ ಅಜಯ್‌ ಹಿಲೋರಿ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ದೂರಿನ ಪ್ರತಿಯನ್ನು ಅಂದಿನ ಡಿಜಿ ಓಂಪ್ರಕಾಶ್‌ ಅವರಿಗೆ ವರ್ಗಾಯಿಸಲಾಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿರಲಿಲ್ಲ.

ನಂತರ ಡಿಜಿ ಆರ್‌.ಕೆ.ದತ್ತಾ ಅವರಿಗೂ ಚರಣ್‌ರೆಡ್ಡಿ ದೂರು ನೀಡಿದ್ದರು. ಈ ಸಂಬಂಧ ಡಿಜಿ ಅವರು ಮೂರು ಬಾರಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದರು. ಯಾವುದಕ್ಕೂ ಆಯುಕ್ತರು ಪ್ರತಿಕ್ರಿಯಿಸಿರಲಿಲ್ಲ. ಈಗ ಪ್ರಕರಣ ಬಹಿರಂಗವಾದ ಕೂಡಲೇ ಆಯುಕ್ತರನ್ನು ಕಚೇರಿಗೆ ಕರೆಸಿಕೊಂಡಿದ್ದ ಡಿಜಿಪಿ ಆರ್‌.ಕೆ.ದತ್ತ ಸತ್ಯ ಶೋಧನಾ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.

ಕಾವೇರಿ ಗಲಾಟೆ ಸಂಬಂಧ ಐಜಿಪಿ ಚರಣ್‌ ರೆಡ್ಡಿ ಅವರು ಡಿಸಿಪಿ ಅಜಯ್‌ ಹಿಲೋರಿ ಅವರ ನಡವಳಿಕೆ ಬಗ್ಗೆ ಡಿಜಿ ಆರ್‌.ಕೆ.ದತ್ತಾ ಅವರಿಗೆ ವರದಿ ನೀಡಿದ್ದರು. ಇದರ ಸತ್ಯ ಶೋಧನಾ ತನಿಖೆ ನಡೆಸುವಂತೆ ಡಿಜಿಪಿ ಆದೇಶಿಸಿದ್ದಾರೆ. ಅದರಂತೆ ಚರಣ್‌ರೆಡ್ಡಿ ಅವರು ದೂರಿನಲ್ಲಿ ಹೇಳಿರುವ ಅಂಶಗಳ ಬಗ್ಗೆ ತನಿಖೆ ನಡೆಸಲು ಐಜಿಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ಸೂಚಿಸಲಾಗಿದೆ. ಬಳಿಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆ ಅಧಿಕಾರಿಯ ಬಗ್ಗೆ  ಕಾನೂನು ಕ್ರಮಕೈಗೊಳ್ಳಲಿದ್ದಾರೆ.
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Bengaluru: ಅಪಾರ್ಟ್‌ಮೆಂಟ್‌ನಿಂದ ಜಾರಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು!

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

4

Bengaluru: ಮಲ್ಲೇಶ್ವರ ಮೈದಾನದಲ್ಲಿ ಮಗು ಸಾವಿಗೆ ಗೇಟ್‌ ವೆಲ್ಡಿಂಗ್‌ ದೋಷ ಕಾರಣ; ಸಮಿತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.