![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jun 17, 2017, 12:27 PM IST
ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರ ಆರೋಗ್ಯ ಸಚಿವ, ತೇಜ್ ಪ್ರತಾಪ್ ಯಾದವ್ ಅವರು ತಪ್ಪು ಮಾಹಿತಿ ನೀಡಿ ಪಡೆದುಕೊಂಡಿದ್ದ ಪೆಟ್ರೋಲ್ ಪಂಪ್ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ರದ್ದು ಮಾಡಿದೆ.
ಲೈಸನ್ಸ್ ಪಡೆಯಲು ತಪ್ಪು ಮಾಹಿತಿ ನೀಡಿರುವುದಕ್ಕೆ ವಿವರಣೆ ಕೋರಿ ಕಳೆದ ಮೇ 31ರಂದು ಜಾರಿಗೊಳಿಸಲಾಗಿದ್ದ ನೊಟೀಸ್ಗೆ ತೃಪ್ತಿಕರ ಉತ್ತರವನ್ನು ನೀಡುವಲ್ಲಿ ತೇಜ್ ಪ್ರತಾಪ್ ವಿಫಲರಾಗಿರುವುದರಿಂದ ಅವರಿಗೆ ನೀಡಲಾಗಿದ್ದ ಪೆಟ್ರೋಲ್ ಪಂಪ್ ಗುತ್ತಿಗೆಯನ್ನು ರದ್ದು ಮಾಡಲಾಗಿದೆ ಎಂದು ಬಿಪಿಸಿಎಲ್ ಹೇಳಿದೆ.
“ನೀವು ಈ ಪೆಟ್ರೋಲ್ ಪಂಪ್ ಲೈಸನ್ಸ್ ಪಡೆದುಕೊಂಡದ್ದು ಹೇಗೆ ಎಂಬುದನ್ನು 15 ದಿನಗಳ ಒಳಗಾಗಿ ತಿಳಿಸಿ’ ಎಂದು ಬಿಪಿಸಿಎಲ್ ತೇಜ್ ಪ್ರತಾಪ್ಗೆ ಬಿಪಿಸಿಎಲ್ ನೊಟೀಸ್ ಜಾರಿ ಮಾಡಿತ್ತು.
ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ತೇಜ್ ಪ್ರತಾಪ್ ಅವರ ಸಹೋದರರಾಗಿರುವ ತೇಜಸ್ವಿ ಯಾದವ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ನಾವು ಈ ಬಗ್ಗೆ ಸರಿಯಾದ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗಪಡಿಸಿ ಸರಿಯಾದ ವೇದಿಕೆಯಲ್ಲಿ ಸತ್ಯವನ್ನು ತಿಳಿಸುತ್ತೇವೆ’ ಎಂದು ಹೇಳಿದರು.
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.