
ನಾನು ಕುಡಿದಿದ್ದೆ;ಚಚ್ಚಿ ಹಾಕಿ ಎಂದರು: ಮುಸ್ಲಿಂ ಹುಡುಗನ ಕೊಂದ ಆರೋಪಿ
Team Udayavani, Jun 24, 2017, 4:19 PM IST

ಹರಿಯಾಣ : “ಇವರು ಗೋಮಾಂಸ ತಿನ್ನುವವರು; ಇವರ ಮೇಲೆ ದಾಳಿ ಮಾಡಿ ಎಂದು ನನ್ನ ಸ್ನೇಹಿತರು ಹೇಳಿದರು; ನಾನು ಕುಡಿದಿದ್ದೆ, ಅವರಂದಂತೆ ಮಾಡಿದೆ’ ಎಂದು ನಿನ್ನೆ ಗುರುವಾರ ಸಂಜೆ ರೈಲಿನಲ್ಲಿ 16ರ ಹರೆಯದ ಮುಸ್ಲಿಂ ಹುಡುಗನನ್ನು ಚಚ್ಚಿ ಕೊಂದ ಬಂಧಿತ ಆರೋಪಿ ಪೊಲೀಸರಲ್ಲಿ ಹೇಳಿದ್ದಾನೆ.
ಸದರ್ ಬಜಾರ್ನಲ್ಲಿ ನಿನ್ನೆ ಗುರುವಾರ ಸಂಜೆ ಈದ್ ಶಾಪಿಂಗ್ ಮುಗಿಸಿ ಹರಿಯಾಣದ ವಲ್ಲಭಗಢದಲ್ಲಿನ ತಮ್ಮ ಮನೆಗೆ ಹೋಗಲು ಮಥುರೆಗೆ ಹೋಗುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಪೊಂದು ನಾಲ್ವರು ಮುಸ್ಲಿಂ ಸಹೋದರರ ಮೇಲೆ ಹಲ್ಲೆ ಮಾಡಿತ್ತು. ಅವರ ಪೈಕಿ 16ರ ಹರೆಯದ ಹುಡುಗನನ್ನು ಉದ್ರಿಕ್ತರು ಚಚ್ಚಿ ಕೊಂದಿದ್ದರು.
ಮಥುರೆಗೆ ಹೋಗುತ್ತಿದ್ದ ರೈಲು Okhla ಸ್ಟೇಶನ್ ದಾಟಿದಾಗ ಸೀಟಿಗಾಗಿ ಜಗಳ ನಡೆದಿತ್ತು. ಬೇಗನೆ ಅದು ಕೋಮು ಜಗಳವಾಗಿ ಪರಿವರ್ತಿತವಾಯಿತು. ಆಗ ಉದ್ರಿಕ್ತ ಗುಂಪು ಮುಸ್ಲಿಂ ಸಹೋದರರನ್ನು “ದೇಶ ವಿರೋಧಿಗಳು’, “ಗೋಮಾಂಸ ಭಕ್ಷಕರು’ ಎಂದು ನಿಂದಿಸುವ ಘೋಷಣೆಗಳನ್ನು ಕೂಗಿತು. ಮುಸ್ಲಿಂ ಸಹೋದರರು ತೊಟ್ಟಿದ್ದ ತಲೆ-ಟೋಪಿಯನ್ನು ನೆಲಕ್ಕೆ ಎಸೆದ ಉದ್ರಿಕ್ತರು, ಅವರನ್ನು ಮುಲ್ಲಾ ಎಂದು ಕರೆದು ಪದೇ ಪದೇ ಚೂರಿಯಿಂದ ಇರಿದರು ಎನ್ನಲಾಗಿದೆ.
ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ನಾಲ್ವರು ಮುಸ್ಲಿಂ ಸಹೋದರರ ಪೈಕಿ 16ರ ಹರೆಯದ ಬಾಲಕ ಜುನೇದ್ ಮೃತಪಟ್ಟಿದ್ದ; ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಈ ಘಟನೆಗೆ ಸಂಬಂಧಿಸಿ ತಾವು ಒಬ್ಟಾತ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕ ಜುನೇದ್ ಹತನಾದ ಸುದ್ದಿ ಕೇಳಿ ಹರಿಯಾಣದ ಫರೀದಾಬಾದ್ ಜಿಲ್ಲೆಯ ಖದ್ದಾವಲೀ ಗ್ರಾಮದಲ್ಲಿನ ಆತನ ಮನೆಯವರು ತೀವ್ರ ಆಘಾತಗೊಂಡಿದ್ದಾರೆ. ತಮ್ಮ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆಯನ್ನು ನೋಡಿಯೂ ನೋಡದಂತೆ ಮಾಡಿದ ಸಹ ಪ್ರಯಾಣಿಕರ ವರ್ತನೆ ಜುನೇದ್ ಮನೆಯವರಿಗೆ ಇನ್ನಷ್ಟು ಆಘಾತ ಉಂಟುಮಾಡಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.