ಅಜ್ಞಾನ ಮುಕ್ತ ರಾಷ್ಟ್ರ ನಿರ್ಮಿಸೋಣ
Team Udayavani, Jun 26, 2017, 4:07 PM IST
ಕಲಬುರಗಿ: ಬಹು ಸಂಸ್ಕೃತಿಯಿಂದ ತುಂಬಿರುವ ನಮ್ಮ ನಾಡಿನಲ್ಲಿ ಏಕಸಂಸ್ಕೃತಿ ತರುವುದು ಸುಲಭವಲ್ಲ. ವೈಚಾರಿಕ, ವೈಜ್ಞಾನಿಕ ಚಿಂತನೆಯಿಂದ ಮಾತ್ರ ಅಜ್ಞಾನಮುಕ್ತವಾದ ರಾಷ್ಟ್ರನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ| ಮಲ್ಲಿಕಾ ಘಂಟಿ ತಿಳಿಸಿದರು.
ನಗರ ಹೊರವಲಯದ ತಾಜಸುಲ್ತಾನಪುರದ ಕೆಎಸ್ಆರ್ಪಿ ಕ್ಯಾಂಪ್ನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ 9 ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಕೃತಿ ಪ್ರೇಮದ ಮಾಸದ ಪಯಣದಂಗವಾಗಿ ವೈಚಾರಿಕ ಮಾರ್ಗದಲ್ಲಿ ಒಂದಿಷ್ಟು ಮಥನ ವಿಶೇಷ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಚನಗಳಲ್ಲಿನ ಬೆಳಕು ನಮ್ಮೊಳಗಿನ ಕತ್ತಲು ಎಂಬ ವಿಷಯದ ಮೇಲೆ ಮಾತನಾಡಿದ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಕತ್ತಲೆಯನ್ನು ಹಳಿಯುವ ಬದಲು ಕಡ್ಡಿ ಗೀರುವ ಕೆಲಸ ಮಾಡಬೇಕಿದೆ. ವೈಜ್ಞಾನಿಕವಾಗಿ ಮುಂದುವರೆದಂತೆ ವೈಚಾರಿಕೆ ಚಿಂತನೆ ಮರೆಯುತ್ತಿದ್ದೇವೆ.ಅಜ್ಞಾನವೇ ಭಯಕ್ಕೆ ಮೂಲ ಕಾರಣ.
ವೈಜ್ಞಾನಿಕ ಚಿಂತನೆಯಿಂದ ಮಾತ್ರ ಭಯದ ನಿವಾರಣೆ ಸಾಧ್ಯ. ಮಾನವನಿಗೆ ನೆಮ್ಮದಿ ನೀಡಬೇಕಾದ ಧರ್ಮ, ಸಮಾಜದಲ್ಲಿ ಅಶಾಂತಿ ಮೂಡಿಸಬಾರದು ಎಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೆಎಸ್ಆರ್ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ ಅಧ್ಯಕ್ಷತೆ ವಹಿಸಿದ್ದರು.
ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ತುಂಗಳ, ಕವಿಯಿತ್ರಿ ಶ್ರೀದೇವಿ ಹೂಗಾರ, ಡಾ| ಪ್ರತೀಮಾ ಕಾಮರೆಡ್ಡಿ, ಸಚೀನ ಫರಹತಾಬಾದ, ಡಾ| ಬಾಬುರಾವ ಶೇರಿಕಾರ, ಪರಮೇಶ್ವರ ಶಟಕಾರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕೆ.ಗಿರಿಮಲ್ಲ ಮಾತನಾಡಿದರು.
ಕಲ್ಯಾಣಪ್ಪ ಪಾಟೀಲ ಮಳಖೇಡ, ಶರಣಪ್ಪ ದೇಸಾಯಿ, ಪ್ರಭುಲಿಂಗ ಮೂಲಗೆ, ವಿ.ಎಂ. ಪತ್ತಾರ, ಸೋಮು ಕುಂಬಾರ, ಸತೀಶ ಸಜ್ಜನ, ರವಿ ಹರಗಿ, ಪ್ರಸನ್ನ ವಾಂಜರಖೇಡೆ, ನೀಲಾಂಬಿಕಾ ಚೌಕಿಮಠ, ಜಯಶ್ರೀ ಚೌಧರಿ, ನಾಗರಾಜ ಹೆಬ್ಟಾಳ, ಹಣಮಂತರಾಯ ಅಟ್ಟೂರ, ಯಶೋಧಾ ಕಟಕೆ, ಮಹಾದೇವ ಬಡಾ, ಎಂ.ಬಿ. ನಿಂಗಪ್ಪ, ಎಸ್.ಎಂ.ಪಟ್ಟಣಕರ, ಇನ್ಸಪೆಕ್ಟರ್ ಶರಣಬಸವ ಹಾಗೂ ಪೊಲೀಸ್ ಅಧಿಕಾರಿಗಳು, ಸಾಹಿತ್ಯಾಸಕ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!
Kalaburagi: 77 ಪರೀಕ್ಷೆ ಬರೆದ ಕನ್ನಡ ಶಿಕ್ಷಕನಿಂದ ವಿಶ್ವದಾಖಲೆ!
Chincholi: ಬಟ್ಟೆ ಒಗೆಯುವ ವೇಳೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ
Miracle: ಶಿವಲಿಂಗದ ಮೇಲಿನ ನಾಗರ ಮೂರ್ತಿ ಮೇಲೆ ಮೂಡಿದ ಕೂದಲು… ಕಡಣಿಯಲ್ಲೊಂದು ಅಚ್ಚರಿ
Aland: ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆಯಿಂದ 160 ಮಂದಿ ಅಸ್ವಸ್ಥ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.