ಗಿರಿಯಲ್ಲಿ ಅನುರಾಗ ಕಂಡ ಶೇರ್‌


Team Udayavani, Jun 30, 2017, 3:35 AM IST

29-STATE-9.jpg

ಬೀದರ್‌: ಒಂದು ಕಡೆ ಮಗನ ಸಾವಿನ ದುಃಖ, ಇನ್ನೊಂದೆಡೆ ಪುತ್ರನೇ ಸಾಕಿದ್ದ ನಾಯಿಯ ನೋವು ನೋಡಲಾರದ ಸಂಕಟ… ಇದು ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಕುಟುಂಬಸ್ಥರ ನೋವಿನ ಕಥೆ. ಕರ್ನಾಟಕದಲ್ಲಿ
ಉತ್ತಮ ಅಧಿಕಾರಿ ಎಂದೇ ಹೆಸರುಗಳಿಸಿದ್ದ ಅನುರಾಗ್‌ ತಿವಾರಿ ಅವರ ನಿಗೂಢ ಸಾವು ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ನೀಡಿತ್ತು. ಇದರ ಜತೆಗೆ ಅನುರಾಗ್‌ ತಿವಾರಿ ಅವರೇ ಸಾಕಿದ್ದ ಮುದ್ದು ನಾಯಿಯ ಮೂಕವೇದನೆಯೂ ಈ ಕುಟುಂಬಕ್ಕೆ ತೀವ್ರವಾಗಿ ಕಾಡುತ್ತಿತ್ತು. ಕಡೆಗೆ ಮತ್ತೆ ಮತ್ತೆ ಕಾಡುವ ಮಗನ ನೆನಪು ಹಾಗೂ ಶ್ವಾನದ ನೋವು
ನೋಡಲಾರದೇ ಈ ಕುಟುಂಬ ಅದನ್ನು ಬೀದರ್‌ಗೆ ಬಂದು ಬಿಟ್ಟು ಹೋಗಿದೆ. ತಿವಾರಿ ಅವರು ಬೀದರ್‌ನಲ್ಲಿ ಇದ್ದಾಗ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಗಿರಿ ರೆಡ್ಡಿಯನ್ನು ಹಚ್ಚಿಕೊಂಡಿದ್ದ ಈ ಶ್ವಾನವನ್ನು ಅನುರಾಗ್‌ ತಿವಾರಿ ಅವರ ತಂದೆ ಬಿ.ಎನ್‌. ತಿವಾರಿ ಅವರೇ ತಮ್ಮ ಕುಟುಂಬದೊಂದಿಗೆ ಬಂದು ಮನೆಗೆ ತಲುಪಿಸಿ ಹೋಗಿದ್ದಾರೆ.

ಬಡತನದಲ್ಲಿ ಬೆಳೆದಿದ್ದ ಅನುರಾಗ್‌ ತಮ್ಮ ತಂದೆ- ತಾಯಿ ಜತೆಗೆ ಹೆಚ್ಚು ಬಾಂಧವ್ಯ ಹೊಂದಿದ್ದರು. ಹಾಗಾಗಿ ಮನೆಯವರ ನೆನಪು ಮರೆಯಲು ಅವರು ಐಎಎಸ್‌ ಅಧಿಕಾರಿಯಾಗಿ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುವ ವೇಳೆ ತಮ್ಮ ನೆಚ್ಚಿನ ಶ್ವಾನ ಶೇರ್‌ನನ್ನು (ಸಿಂಹ) ಜತೆಗಿಟ್ಟುಕೊಂಡಿದ್ದರು. ಮರಿಯಾಗಿದ್ದಾಗ ಪಡೆದಿದ್ದ ಲ್ಯಾಬ್ರಡಾರ್‌ ತಳಿಯ ಈ ಶ್ವಾನಕ್ಕೆ ಈಗ 8 ವರ್ಷ ಆಗಿದೆ. ಕೊಡಗಿನಿಂದ ಬೀದರ್‌ಗೆ ವರ್ಗವಾದಾಗ ತಮ್ಮ ಜತೆ ಈ ಶ್ವಾನ ತಂದಿದ್ದರು. ಬೆಂಗಳೂರಿಗೆ ವರ್ಗವಾದ ಬಳಿಕ ತಮ್ಮೊಂದಿಗೆ ಒಯ್ದಿದ್ದರು. ಅನುರಾಗ್‌ ತಿವಾರಿ ಅವರು ಶೇರ್‌ ಎಂದಾಕ್ಷಣ ಅವರತ್ತ ಹೋಗುತ್ತಿದ್ದ ಶ್ವಾನ, ಅವರಿಗೆ ಪೆನ್ನು,ಮೊಬೈಲ್‌ ತಂದು ಕೊಡುವುದು ಹೀಗೆ ಸಣ್ಣ ಪುಟ್ಟ ಕೆಲಸವನ್ನೂ ಮಾಡುತ್ತಿತ್ತು. ಅದನ್ನು ಮಂಚದ ಮೇಲೆ ಮಲಗಿಸಿ ತಿವಾರಿ ಕೆಳಗೆ ಮಲಗುತ್ತಿದ್ದರು. ಅದಕ್ಕೆ ತುತ್ತು ಉಣಿಸುತ್ತಿದ್ದರು. ಕೆಲವೊಮ್ಮೆ ಊರಿಗೆ ಹೋದಾಗ ಶ್ವಾನದ ಜತೆಗೆ ಮಾತನಾಡಲು ಅನುಕೂಲ ವಾಗುವಂತೆ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು, ತಮ್ಮ ಆ್ಯಂಡ್ರಾಯ್ಡ ಮೊಬೈಲ್‌ಗೆ ಸಂಪರ್ಕಿಸಿ ಕೊಂಡಿದ್ದರು.

ಸಹಾಯಕನನ್ನೂ ಹಚ್ಚಿಕೊಂಡಿದ್ದ “ಶೇರ್‌’: ಅನುರಾಗ್‌ ಅವರನ್ನು ಬಿಟ್ಟರೆ ಶ್ವಾನ ಹೆಚ್ಚು ಹಚ್ಚಿಕೊಂಡಿದ್ದು ಜಿಲ್ಲಾಧಿಕಾರಿ ಮನೆಯ ಸಹಾಯಕ ಗಿರಿ ರೆಡ್ಡಿ ಅವರನ್ನು. ಅದನ್ನು ಬೆಂಗಳೂರಿಗೂ ಇವರೇ ಬಿಟ್ಟು ಬಂದಿದ್ದರು. ಅನುರಾಗ್‌ ನಿಧನ ಬಳಿಕ ಬೆಂಗಳೂರಿನಲ್ಲಿದ್ದ ಶ್ವಾನ ಅವರಿಗಾಗಿ ಕಂಬನಿ ಮಿಡಿಯುತ್ತಿತ್ತು. ಕೆಲವು ದಿನ ಊಟವನ್ನೂ ಬಿಟ್ಟಿದ್ದ ಈ ನಾಯಿಯನ್ನು ಸರಿಯಾಗಿ ನೋಡಿಕೊಳ್ಳಲೂ ಯಾರೂ ಇಲ್ಲದಂತಾಗಿತ್ತು. ತಮ್ಮೂರಿಗೆ ಒಯ್ದರೆ ಮಗನ ನೆನಪು ಕಣ್ಮುಂದೆ ಬರುತ್ತದೆ ಎಂದು ತಂದೆ ಬಿ.ಎನ್‌. ತಿವಾರಿ ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದ ನಾಯಿಯನ್ನು ವಾರದ ಹಿಂದೆ ಬೀದರಗೆ ತಂದು, ನಗರದ ಹೊರವಲಯದ ತಾದಲಾಪುರದ ಗಿರಿ ರೆಡ್ಡಿ ಮನೆಯಲ್ಲಿ ಬಿಟ್ಟಿದ್ದಾರೆ. ಗಿರಿ ಅವರ ಮನೆಯಲ್ಲೇ ಎರಡು ದಿನ ಉಳಿದಿದ್ದ ತಿವಾರಿ ದಂಪತಿ, ಅನುರಾಗ್‌ ಮತ್ತು ಶ್ವಾನದ ಬಾಂಧವ್ಯವನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.

“ಶೇರ್‌, ಸಾಬ್‌ ಆಗಯೇ’ (ಸಿಂಹ, ಸರ್‌ ಬಂದಿದ್ದಾರೆ) ಎನ್ನುತ್ತಿದ್ದಂತೆ ಎದ್ದು ನಿಲ್ಲುವ ಶ್ವಾನ ಅವರಿಗಾಗಿ 
ಹುಡುಕಾಡುತ್ತದೆ. ನಂತರ ಮತ್ತೆ ಮೌನಕ್ಕೆ ಜಾರುತ್ತಿದೆ. ಸದ್ಯ ಗಿರಿ ರೆಡ್ಡಿ ಅದರ ಪೋಷಣೆ ಮಾಡುತ್ತಿದ್ದಾರೆ. ಇದಕ್ಕೆ 
ತಗಲುವ ಖರ್ಚನ್ನು ತಾವು ಕೊಡುವುದಾಗಿ ಬಿ.ಎನ್‌. ತಿವಾರಿ ಹೇಳಿದಾಗ, ಬೇಡ, ಸಾಹೇಬರ ನೆನಪಿಗಾಗಿ
ತಾವೇ ಪ್ರೀತಿಯಿಂದ ಸಾಕುವುದಾಗಿ ಗಿರಿ ಹೇಳಿದ್ದಾರೆ.

ಶಶಿಕಾಂತ್ ಬಂಬುಳಗೆ

ಟಾಪ್ ನ್ಯೂಸ್

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.