“ಸಾರ್ವಜನಿಕ ಸೇವೆಯಲ್ಲಿ ಸಿಗುವ ಜನರ ಪ್ರೀತಿ ವಿಶೇಷವಾದುದು’
Team Udayavani, Jul 4, 2017, 3:45 AM IST
ಮೂಲ್ಕಿ: ಸಾರ್ವಜನಿಕ ರಂಗದ ಸರಕಾರಿ ಸೇವೆಯಲ್ಲಿ ಜನತೆಯ ಪ್ರೀತಿ ವಿಶ್ವಾಸವನ್ನು ಪಡೆದವರಿಗೆ ನಿವೃತ್ತಿಯ ಅನಂತರ ಸಿಗುವ ಗೌರವ ಅತ್ಯಂತ ಶ್ರೇಷ್ಠವಾದುದು ಎಂದು ಹಂಪನಕಟ್ಟೆ ಕೆನರಾ ಬ್ಯಾಂಕಿನ ಹಿರಿಯ ಶಾಖಾಧಿಕಾರಿ ಶ್ರೀಕರ ಪೈ ಹೇಳಿದರು.
ಕೆನರಾ ಬ್ಯಾಂಕಿನಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ಮೂಲ್ಕಿಯ ಕೆನರಾ ಬ್ಯಾಂಕಿನ ನಿವೃತ್ತರಾದ ಅಶೋಕ್ ಕಾಮತ್ ಅವರ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸರಕಾರದ ನೀತಿ ನಿಯಮಗಳನ್ನು ಗೌರವಿಸಿ ಸರಕಾರದಿಂದ ಸಿಗುವ ಸೌಕರ್ಯಗಳನ್ನು ನಗು ಮುಖದಿಂದ ಗ್ರಾಹಕರಿಗೆ ಕೊಡುವ ಜತೆಗೆ ಬ್ಯಾಂಕಿನ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಅಶೋಕ್ ಕಾಮತ್ ಅವರ ಸೇವೆ ಶ್ಲಾಘನೀಯವಾದುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಶಾಖೆಯ ಶಾಖಾಧಿಕಾರಿ ರಾಜೇಂದ್ರ ಅವರು, ಬ್ಯಾಂಕಿನ ಸೇವೆಯಲ್ಲಿ ಗ್ರಾಹಕರ ಜತೆಗೆ ಇರುವ ಉತ್ತಮ ಸಂಬಂಧ ಮತ್ತು ಸಿಬಂದಿಯ ಒಗ್ಗಟ್ಟಿನ ಶ್ರಮ ನಮ್ಮ ಮತ್ತು ಬ್ಯಾಂಕಿನ ಬೆಳವಣಿಗೆಯಲ್ಲಿ ಮಹತ್ತರದ ಪಾತ್ರ ವಹಿಸಬಲ್ಲದು ಎಂದು ಹೇಳಿದರು.
ಅಶೋಕ್ ಕಾಮತ್ ಅವರ ಪತ್ನಿ ಆಶಾ ಎ.ಕಾಮತ್ ಅವರನ್ನು ಶಾಖೆಯ ವತಿಯಿಂದ ಸಮ್ಮಾನಿಸಲಾಯಿತು. ಬಳಿಕ ಮಾತ ನಾ ಡಿದ ಅಶೋಕ್ ಕಾಮತ್ ಅವರು, ಕೆನರಾ ಬ್ಯಾಂಕಿನ ಸೇವೆಯ ಮೂಲಕ ನನ್ನ ಬದುಕಿಗೆ ಬೇಕಾದುದೆಲ್ಲವನ್ನು ಪಡೆಯು ವಂತಾಯಿತು. ಜತೆಗೆ ಸಾರ್ವಜನಿಕರ ಸೇವೆಯ ಮೂಲಕ ಮಾನವೀಯ ಸಂಬಂಧವನ್ನು ಬೆಳೆ ಸಿ ಕೊ ಳ್ಳ ಲು ಸಾಧ್ಯವಾಯಿತು ಎಂದರು.
ಅಧಿಕಾರಿಗಳಾದ ರಿಯಾನ್, ಲೋಕೇಶ್ ಮತ್ತು ಅನೇÌಶ್ ಕಾರ್ಯಕ್ರಮದಲ್ಲಿ ಅಶೋಕ್ ಅವರ ಸೇವೆಯ ಬಗ್ಗೆ ವಿವರಿಸಿದರು.
ಪ್ರತಿಮಾ ನಾಯಕ್, ರಾಮಕೃಷ್ಣ ರಾವ್ ಮತ್ತು ವಿಶ್ವನಾಥ್ ಶುಭ ಹಾರೈಸಿದರು. ಸುಮನಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Kadaba police Station: ದಾಖಲೆ ಕಾಪಿಡುವುದೇ ಇಲ್ಲಿ ಸಾಹಸದ ಕೆಲಸ
Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್ ಖೇರ್ ಫೋಟೊ!
Sirsi: ಕಸ್ತೂರಿ ರಂಗನ್ ವರದಿಯ ಸಮೀಕ್ಷೆಯೇ ಸಮರ್ಪಕವಾಗಿಲ್ಲ: ಶಾಸಕ ಭೀಮಣ್ಣ ನಾಯ್ಕ
Puttur: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಶೀಘ್ರ ಸಿದ್ಧ
Gadag: ನೀರಿನಲ್ಲಿ ಕೊಚ್ಚಿಹೋದ ಯುವಕರು; ಓರ್ವನ ಶವ ಪತ್ತೆ, ಮತ್ತೋರ್ವನಿಗೆ ಶೋಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.