ನಗರದ ಫುಟ್ಪಾತ್ನಲ್ಲಿ ನಡೆಯುವುದೇ ಡೇಂಜರ್..!
Team Udayavani, Jul 5, 2017, 3:45 AM IST
ಮಹಾನಗರ: ನಗರದಲ್ಲಿ ಸುರಿದ ಒಂದೆರಡು ಮಳೆಗೆ ಇಲ್ಲಿನ ಬಹುತೇಕ ಮುಖ್ಯ ಹಾಗೂ ಒಳ ರಸ್ತೆಗಳು ಹೊಂಡ ಗುಂಡಿ ಬಿದ್ದಿರುವುದು ಒಂದೆಡೆಯಾದರೆ, ಪಾಲಿಕೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಬಹುತೇಕ ಫುಟ್ಪಾತ್ಗಳು ಈಗ ಬಾಯ್ದೆರೆದು ಕುಳಿತಿದೆ. ಆದರೂ ಪಾಲಿಕೆ ಸೂಕ್ತ ಕ್ರಮಕೈಗೊಳ್ಳದ ಕಾರಣದಿಂದ ಪಾದಚಾರಿಗಳು ಫುಟ್ಪಾತ್ನಲ್ಲಿ ನಡೆಯುವುದೇ ಕಷ್ಟವಾಗಿದೆ.
ನಗರದ ಬಹುತೇಕ ಭಾಗಗಳಲ್ಲಿ ಫುಟ್ಪಾತ್ ಸಮಸ್ಯೆ ಬಹುದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಬಂಟ್ಸ್ಹಾಸ್ಟೆಲ್ ಸಹಿತ ಕೆಲವೆಡೆಗಳಲ್ಲಿ ರಸ್ತೆಯಲ್ಲೇ ನಡೆಯಬೇಕಾಗಿದೆ. ಇಂತಹ ಸಮಸ್ಯೆಗಳನ್ನು ಮನಗಂಡು ಮೇಯರ್ ಕವಿತಾ ಸನಿಲ್ ಅವರು ಆಯ್ದ ಸ್ಥಳಗಳಲ್ಲಿ ಹೊಸದಾಗಿ ಫುಟ್ಪಾತ್ ನಿರ್ಮಾಣ ಹಾಗೂ ಹಳೆಯ ಫುಟ್ಪಾತ್ ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಂತೆ ಲೇಡಿಹಿಲ್ನಿಂದ ಆರಂಭವಾದ ಈ ಕಾಮಗಾರಿ ಪಿವಿಎಸ್ವರೆಗೆ ನಡೆದಿದೆ.
ವಿಶೇಷವೆಂದರೆ ಈ ಬಾರಿ ಫುಟ್ಪಾತ್ಗಳನ್ನು ಕಾಂಕ್ರೀಟ್ ಮಾದರಿ ಯಲ್ಲಿ ನವೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಹಳೆಯ ಸ್ಲಾಬ್ಗಳನ್ನು ತೆಗೆದು, ನಿಗದಿತ ಅಳತೆಯಲ್ಲಿ ಕಾಂಕ್ರೀಟ್ ಸ್ಲಾಬ್ ಹಾಕಲಾಗಿದೆ. ಚರಂಡಿ ಸ್ವತ್ಛಗೊಳಿಸಲು ಅವಕಾಶ ಬೇಕಾದ ಕಾರಣದಿಂದ ಮಧ್ಯದಲ್ಲಿ ಚಿಕ್ಕ ಸ್ಲಾಬ್ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪೂರ್ಣಮಟ್ಟದಲ್ಲಿ ಕಾಂಕ್ರೀಟ್ ಹಾಕಿ, ಮಧ್ಯದಲ್ಲಿ ಖಾಲಿ ಬಿಟ್ಟ ಜಾಗವನ್ನು ಸ್ಲಾಬ್ ಹಾಕಿ ಭರ್ತಿ ಮಾಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿಲ್ಲ.
ಹೀಗಾಗಿ ಪಿವಿಎಸ್ ಸಹಿತ ಬಹುತೇಕ ಕಡೆಗಳಲ್ಲಿ ಫುಟ್ಪಾತ್ಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುತ್ತಾರೆ ಸಾರ್ವಜನಿಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ
IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್
MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್ ಖರ್ಬೀಕರ್ ನೇಮಕ
Yeah, Yes; ಕೋರ್ಟ್ನಲ್ಲಿ ಯಾ.. ಅನ್ನಬೇಡಿ, ಎಸ್ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್!
BJP Leader: ಯತ್ನಾಳ್ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.