ತ್ರಿವಳಿ ಮಹಿಳೆಯರಿಂದಾಯ್ತು ಶೌಚಮುಕ್ತ ಮೇದಿನಿ ಗ್ರಾಮ
Team Udayavani, Jul 14, 2017, 2:45 AM IST
ಮೈಸೂರು: ಇನ್ನೇನು ಕೆಲಸ ಇಲ್ವಾ ನಿಮ್ಗೆ, ಹಳ್ಳಿಗ್ಯಾಕೆ ಕಕ್ಕಸ್ಸು ಗುಂಡಿ ಎಂದು ಅಧಿಕಾರಿಗಳನ್ನೇ ಹೀಯಾಳಿಸಿದ ಗ್ರಾಮಸ್ಥರೀಗ ಒಂದೇ ದಿನ 170 ಶೌಚಾಲಯ ನಿರ್ಮಿಸಿ, ಇದೀಗ ತಮ್ಮ ಗ್ರಾಮವನ್ನು ಶೌಚಮುಕ್ತ ಮಾಡಿ ರಾಜ್ಯಕ್ಕೆ
ಮಾದರಿಯಾಗಿ ಹೊರಹೊಮ್ಮಿದ್ದಾರೆ. ಹೀಗೆ ಗ್ರಾಮದ ವಸ್ತುಸ್ಥಿತಿಯೇ ಬದಲಾಗಲು ಕಾರಣರಾಗಿದ್ದು ಮಾತ್ರ ಆ ಮೂವರು ಮಹಿಳಾ ಅಧಿಕಾರಿಗಳು, ಆ ಗ್ರಾಮದ ಮಹಿಳೆಯರು ಶೌಚಕ್ಕೆ ಹೋಗಲು ಸೂರ್ಯ ಮೂಡುವ ಮುಂಚೆ ಅಥವಾ ಸೂರ್ಯ ಮುಳುಗಿದ ನಂತರ ಹೊಲಗಳ ಬೇಲಿ, ಪೊದೆಗಳನ್ನು ಹುಡುಕಿಕೊಂಡು ಹೋಗಿ ನಿತ್ಯಕರ್ಮ ಮುಗಿಸಿ
ಬರಬೇಕಾದ ದಯನೀಯ ಸ್ಥಿತಿ ಇತ್ತು.
ಇದ್ಯಾವುದೋ ದೂರದ ಕಾಡಂಚಿನ ಗ್ರಾಮವೊಂದರ ದುಸ್ಥಿತಿಯಲ್ಲ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಮೇದಿನಿ ಗ್ರಾಮದಲ್ಲಿ ನಿತ್ಯ ಕಂಡು ಬರುತ್ತಿದ್ದ ಚಿತ್ರಣವದು. ಒಟ್ಟು 456 ಕುಟುಂಬಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಪರಿಶಿಷ್ಟರ ಕುಟುಂಬಗಳೇ ಹೆಚ್ಚು. ಪರಿಶಿಷ್ಟ ವರ್ಗಗಳ 337, ಪರಿಶಿಷ್ಟ ಜಾತಿಯ 31 ಸೇರಿ ಒಟ್ಟಾರೆ 368 ಪರಿಶಿಷ್ಟ ಕುಟುಂಬಗಳಿವೆ.
170 ಮನೆಯಲ್ಲಿರಲಿಲ್ಲ ಶೌಚಾಲಯ:
ಗ್ರಾಮದ 456 ಕುಟುಂಬಗಳ ಪೈಕಿ ಅನುಕೂಲ ಸ್ಥರಾದ 147 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದರೆ, ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾಗಿರುವ 139 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿದ್ದವು, ಇನ್ನುಳಿದ 170 ಮನೆಗಳಲ್ಲಿ ಶೌಚಾಲಯವಿರಲಿಲ್ಲ. ಸ್ವತ್ಛಭಾರತ್ ಮಿಷನ್ ಯೋಜನೆಯಡಿ ಬಯಲು ಶೌಚಮುಕ್ತಗೊಳಿಸುವ ಜಿಪಂ ಕಾರ್ಯಕ್ರಮದಂತೆ ಗ್ರಾಮವನ್ನು ಸಂಪೂರ್ಣ ಬಯಲು ಶೌಚ ಮುಕ್ತಗೊಳಿಸಲು
ಮುಂದಾದಾಗ ಆರಂಭದಲ್ಲಿ ಗ್ರಾಮಸ್ಥರು ಮುಂದೆ ಬಂದಿರಲಿಲ್ಲ. ತಾಪಂ ಸಂಜೀವಿನಿ ಒಕ್ಕೂಟದ ಎನ್ಆರ್ಎಲ್ಎಂನಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಶಶಿಕಲಾ ಎಸ್., ಸೌಮ್ಯ ಹಾಗೂ ರೋಹಿಣಿ ಅವರಿಗೆ ತಾಪಂ ವತಿಯಿಂದ ಹೊಳೆಸಾಲು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶೌಚಾಲಯದ ಸಮೀಕ್ಷೆ ಕೆಲಸ ವಹಿಸಲಾಯಿತು.
ಸೊಪ್ಪು ಹಾಕದ ಗ್ರಾಮಸ್ಥರು: ಕಳೆದ ಆರು ತಿಂಗಳ ಹಿಂದೆ ಮೇದಿನಿ ಗ್ರಾಮದಲ್ಲಿ ಈ ಮೂವರು ಮಹಿಳೆಯರು ಸಮೀಕ್ಷೆ ಮಾಡಿದಾಗ 172 ಮನೆಗಳು ಶೌಚಾಲಯ ಹೊಂದಿಲ್ಲದಿರುವುದು ಕಂಡುಬಂತು. ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ತಿಳಿ ಹೇಳಿದರೂ ಗ್ರಾಮದ ಪುರುಷರು ಇವರ ಮಾತಿಗೆ ಸೊಪ್ಪು ಹಾಕಲಿಲ್ಲ. ಕಡೆಗೆ ಗ್ರಾಮದ ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಸಭೆಗಳಲ್ಲಿ ಶೌಚಕ್ಕೆ ಹೋಗುವಾಗ ಮಹಿಳೆಯರು ಯಾವ ರೀತಿಯ ಸಮಸ್ಯೆಗಳನ್ನು
ಎದುರಿಸಬೇಕೆಂಬ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಎರಡು ಕುಟುಂಬದವರು ಶೌಚಾಲಯ ನಿರ್ಮಿಸಿಕೊಂಡಿದ್ದರು.
ಒಂದೇ ದಿನಕ್ಕೆ ಶೌಚ ಮುಕ್ತ: ಗಾಂಧಿಜಯಂತಿ ವೇಳೆಗೆ ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಬೇಕೆಂಬ ಜಿಪಂ ಆಡಳಿತದ ಪ್ರಯತ್ನದ ಫಲವಾಗಿ ಸಣ್ಣ ಗ್ರಾಮವಾದ ಮೇದಿನಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ಫಲ ನೀಡಿದ್ದು, ಬುಧವಾರ ಒಂದೇ ದಿನದಲ್ಲಿ 170 ಶೌಚಾಲಯಗಳನ್ನು ಕಟ್ಟಿಸುವ ಮೂಲಕ ಈಗ ಮೇದಿನಿ ಗ್ರಾಮ ಸಂಪೂರ್ಣ ಬಯಲು ಶೌಚ ಮುಕ್ತವಾಗಿದೆ. ಸುಮಾರು 40 ಜನ ಗಾರೆ ಕೆಲಸಗಾರರ ಜತೆಗೆ ಗ್ರಾಮಸ್ಥರೂ ಕೈಜೋಡಿಸಿದ್ದರಿಂದ, ಒಂದೇ ದಿನದಲ್ಲಿ 170 ಶೌಚಾಲಯ ನಿರ್ಮಾಣ ಕಾರ್ಯ ಸಾಧ್ಯವಾಗಿದೆ.
– ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Tirupati Case; ಮತಾಂತರಗೊಂಡ ಜಗನ್ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Recipe: ಫಾಸ್ಟ್ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.