ಪೊಲೀಸ್‌ ಇಲಾಖೆಗೆ  ಜನರ ಸಹಕಾರ ಅಗತ್ಯ: ಕೆ.ಟಿ. ಬಾಲಕೃಷ್ಣ


Team Udayavani, Jul 20, 2017, 6:00 AM IST

kt-balakrishna.jpg

ಕಾರ್ಕಳ: ಜನರ ಸಹಕಾರವಿಲ್ಲದೇ ಪೊಲೀಸ್‌ ಇಲಾಖೆ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಪೊಲೀಸ್‌ ಬೀಟ್‌ ವ್ಯವಸ್ಥೆ ಜನರ ಸಹಕಾರದಿಂದಲೇ ಸತತವಾಗಿ ಮುನ್ನಡೆ ಯುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಟಿ. ಬಾಲಕೃಷ್ಣ ಹೇಳಿದ್ದಾರೆ.

ಅವರು ಬುಧವಾರ ಗ್ಯಾಲಕ್ಸಿ ಸಭಾಭವನದಲ್ಲಿ ಜರಗಿದ ಕಾರ್ಕಳ ವೃತ್ತದ ಪೊಲೀಸ್‌ ಠಾಣೆಗಳ ಪರಿಷ್ಕೃತ ಉಪಗಸ್ತು, ನಾಗರಿಕ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವ್ಯಕ್ತಿಗತವಾಗಿ ಪೊಲೀಸ್‌ ಅಧಿಕಾರಿಯೊಬ್ಬ ವ್ಯವಸ್ಥೆಯನ್ನು ಮುನ್ನಡೆಯಲು ಸಾಧ್ಯವಿಲ್ಲ, ಪೊಲೀಸ್‌ ಸಿಬಂದಿ ಹಾಗೂ ಜನರಿಂದಲೇ ವ್ಯವಸ್ಥೆಗೆ ವೇಗ ಸಿಗುತ್ತದೆ. ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಆರಂಭಿಸಲಾಗಿದೆ.ಸಣ್ಣ ಪುಟ್ಟ ಊರುಗಳಲ್ಲಿ ಬೀಟ್‌ ಸದಸ್ಯರೇ ಸಮಸ್ಯೆಗಳನ್ನು ಪರಿಹರಿಸಿದ ಉದಾಹರಣೆ ಇದೆ. ಈ ನಿಟ್ಟಿನಲ್ಲಿ ಬೀಟ್‌ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ ಎಂದರು.

ಪೊಲೀಸ್‌ ಠಾಣೆಗಳ ಬಾಗಿಲು ಒಮ್ಮೆ ತೆರೆದುಕೊಂಡರೆ ಅದು ಮುಚ್ಚುವುದಿಲ್ಲ. ಇತರ ಸರಕಾರಿ ಕಚೇರಿಗಳ ಹಾಗೇ ಸಮಯವಾದ ಕೂಡಲೇ ಬಾಗಿಲು ಮುಚ್ಚಿ ಹೋಗುವ ಪರಿಸ್ಥಿತಿ ಠಾಣೆಗಳಿಗಿಲ್ಲ. ದಿನದ 24 ಗಂಟೆ ಸಾರ್ವಜನಿಕರ ಸೇವೆಯಾಗಿ ಠಾಣೆಗಳು ಸ್ಪಂದಿಸುತ್ತದೆ ಎಂದವರು ಹೇಳಿದರು.

ತಾಲೂಕು ಗ್ರಾಮಾಂತರ ಠಾಣೆಯ, ನಗರ ಠಾಣೆಯ ಅಧಿಕಾರಿಗಳು ಸಿಬಂದಿ ಉಪಸ್ಥಿತರಿದ್ದರು. ಡಿವೈಎಸ್ಪಿ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶುಭದ್‌ ರಾವ್‌, ಶೋಧನ್‌ ಶೆಟ್ಟಿ, ಪುಟ್ಟಣ್ಣ ಭಟ್‌ ಅನ್ನಿಸಿಕೆ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಬೀಟ್‌ ಸದಸ್ಯ ರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ,ನಾಗರಿಕ ಸಮಿತಿ ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು.

ನಗರ ಠಾಣೆಯಲ್ಲಿ ಸಿಬಂದಿಯ ಕೊರತೆ ಇರುವುದು ಕಂಡುಬರುತ್ತಿದೆ. ಜಾತ್ರಾ ಸಮಯ ದಲ್ಲಿ ಇದರಿಂದ ಸಾರ್ವಜನಿಕ ಭದ್ರತೆಗೆ ತ್ರಾಸವಾಗುತ್ತದೆ.ಈ ಕುರಿತು ಕ್ರಮ ಕ್ರಮ ಗೊಳ್ಳುವಂತೆ ಗಿರಿಧರ್‌ ನಾಯಕ್‌ ಹೇಳಿದರು.

ಬಜಗೋಳಿಯಲ್ಲಿ ಠಾಣೆಗೆ ಮನವಿ
ಮುಡಾರು, ಮಾಳ, ಹೊಸ್ಮಾರು ಪ್ರದೇಶ ವನ್ನು ಸಂದಿಸುವ ಮುಖ್ಯ ಪೇಟೆಯಾದ ಬಜಗೋಳಿಯಲ್ಲಿ ಪೊಲೀಸ್‌ ಠಾಣೆಯನ್ನು ಆರಂಭಿಸುವಂತೆ ಮುಡಾರು ಗ್ರಾ.ಪಂ. ಹಾಗೂ ಸಾರ್ವಜನಿಕರ ಪರವಾಗಿ ಅಧೀಕ್ಷಕರಾದ ಕೆ.ಟಿ. ಬಾಲಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಸಲ್ಲಿಸಿದರು.
ಕೃಷ್ಣಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.ಕಾರ್ಕಳ ನಗರ ಠಾಣಾಧಿಕಾರಿ ರವಿ ವಂದಿಸಿದರು. 

ನಕಲಿ ಗೋರಕ್ಷಕರನ್ನು ಹಿಡಿಯುವ ಕಾರ್ಯ ಪೊಲೀಸರೇ ಮಾಡಲಿ
ಗ್ರಾಮಂತರ ಪ್ರದೇಶದಲ್ಲಿ  ನಕಲಿ ಗೋರಕ್ಷರನ್ನು ಹಿಡಿಯುವ ಕೆಲಸವನ್ನು ಪೊಲೀಸರೇ ಮಾಡಬೇಕು. ಇದಕ್ಕೋಸ್ಕರ ರಾತ್ರಿ ಗಸ್ತು ಹಾಗೂ ನಾಕಾಬಂಧಿ ನಡೆಸಬೇಕು. ಈ ಜವಾಬ್ದಾರಿಯನ್ನು ನಾಗರಿಕ ಸದಸ್ಯರಿಗೆ ಕೊಡುವುದು ಬೇಡ ನಾಗರಿಕ ಚೀಟಿಯನ್ನು ತೋರಿಸಿ ಕೆಲವು ಸದಸ್ಯರು ತಾವೂ ಪೊಲೀಸ್‌ ಇಲಾಖೆಗೆ ಸೇರಿದವರು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ಸಾರ್ವಜನಿಕ ಸಂವಾದದಲ್ಲಿ ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಟಿ. ಬಾಲಕೃಷ್ಣ ಅವರು, ಗುರುತಿನ ಚೀಟಿ ಅಜೀವ ಸದಸ್ಯತ್ವ ಹೊಂದಿಲ್ಲ. ಗುರುತಿನ ಚೀಟಿ ಲೈಸೆನ್ಸ್‌ ತರ ಕೆಲಸ ಮಾಡುವುದಿಲ್ಲ. ಇದೊಂದು ತಾತ್ಕಾಲಿಕ ಹಕ್ಕು ಹೊರತು ಅಧಿಕಾರ ದುರ್ಬಳಕೆಗೆ ಕೊಡುವ ಸೌಲಭ್ಯವಲ್ಲ. ಆ ರೀತಿ ಮಾಡಿದರೆ ಗುರುತಿನ ಚೀಟಿಯನ್ನು ರದ್ದುಗೊಳಿಸುವ ಹಕ್ಕು ಇಲಾಖೆಗಿದೆ ಎಂದರು.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

11

Udupi: ಸರಣಿ ಕಳ್ಳತನ; 3 ಮಂದಿಯ ಕೃತ್ಯ! ಸಿಸಿಟಿವಿಯಲ್ಲಿ ದಾಖಲು 

fraudd

Udupi: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ: ಮುಂಜಾಗ್ರತೆಗೆ ಸೂಚನೆ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

1

Manipal: ಹೊಟೇಲ್‌ ಮ್ಯಾನೇಜರ್‌ಗೆ ವಂಚಿಸಿದ ವೈಟರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.