ತೋಟಗಾರಿಕೆ ರೈತರಿಗೆ ನೀರಿನ ಟ್ಯಾಂಕರ್‌ ಭಾಗ್ಯ


Team Udayavani, Jul 22, 2017, 8:03 AM IST

22-STATE-1.gif

ಬೆಂಗಳೂರು: ಕೃಷಿ ಭಾಗ್ಯದ ಮೂಲಕ ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರ ನೆರವಿಗೆ ಬಂದಿದ್ದ ರಾಜ್ಯ ಸರ್ಕಾರ ಇದೀಗ ಕಳೆದ ಮೂರು ವರ್ಷಗಳ ಸತತ ಬರಗಾಲದಿಂದ ನಲುಗಿರುವ ತೋಟಗಾರಿಕೆ ಬೆಳೆಗಾರರು ತಮ್ಮ ಬೆಳೆಗಳಿಗೆ ನೀರೊದಗಿಸಲು “ನೀರಿನ ಟ್ಯಾಂಕರ್‌ ಭಾಗ್ಯ’ ಕಲ್ಪಿಸಲು ಮುಂದಾಗಿದೆ.

ಬರಪೀಡಿತ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ತೋಟಗಾರಿಕೆ ಬೆಳೆ ನಾಶವಾಗದಂತೆ ತಡೆಯುವ ಉದ್ದೇಶದಿಂದ ನೀರಿನ ಟ್ಯಾಂಕರ್‌ ಗಳನ್ನು ಖರೀದಿಸಲು ಬೆಳೆಗಾರರಿಗೆ ಶೇ.50 ಸಹಾಯಧನ ಸರ್ಕಾರ ಒದಗಿಸಲಿದೆ. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ ಸುಮಾರು 8 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಜುಲೈ ಅಂತ್ಯದೊಳಗೆ ಟ್ಯಾಂಕರ್‌ ಖರೀದಿಗೆ ಸಹಾಯಧನ ನೀಡಲು
ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಲಿದೆ. ಕಳೆದ ವರ್ಷದಲ್ಲಿ ಬರಪೀಡಿತವೆಂದು ಘೋಷಿಸಲ್ಪಟ್ಟ ರಾಜ್ಯದ 158ಕ್ಕೂ ಹೆಚ್ಚು ತಾಲೂಕಿನ 1600 ಆಯ್ದ ಬೆಳೆಗಾರರು ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ, ಕರಾವಳಿ ಭಾಗದ ನೀರಾವರಿ ಸೌಲಭ್ಯ ಹೊಂದಿರುವ 16 ತಾಲೂಕುಗಳನ್ನು “ನೀರಿನ ಟ್ಯಾಂಕರ್‌ ಭಾಗ್ಯ’ದಿಂದ ಹೊರಗಿಡಲಾಗಿದೆ.

ಸಹಾಯಧನ: ಒಂದು ನೀರಿನ ಟ್ಯಾಂಕರ್‌ ಖರೀದಿಗೆ ಅಂದಾಜು 1.25 ಲಕ್ಷದಿಂದ 1.40 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಿರುವ ತೋಟಗಾರಿಕೆ ಇಲಾಖೆ, ಟ್ಯಾಂಕರ್‌ ಖರೀದಿಗೆ ಸರ್ಕಾರ ಸಾಮಾನ್ಯ ಬೆಳೆಗಾರರಿಗೆ 50 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ತಲಾ 90 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ ವೆಚ್ಚವನ್ನು ಬೆಳೆಗಾರರೇ
ಭರಿಸಬೇಕು. ಒಂದು ತಾಲೂಕಿನಲ್ಲಿ 10 ಬೆಳೆಗಾರರಿಗೆ ಸಹಾಯಧನ ಸಿಗಲಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಮೇರೆಗೆ ಸಹಾಯಧನ ಲಭ್ಯವಾಗಲಿದೆ.

ಸಹಾಯಧನ ಪಡೆಯಲು ಹಲವು ಷರತ್ತುಗಳು:
ನೀರಿನ ಟ್ಯಾಂಕರ್‌ಗೆ ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆಯು ಷರತ್ತುಗಳನ್ನು ವಿಧಿಸಿದ್ದು, ಸಾಮಾನ್ಯ ವರ್ಗದ ಬೆಳೆಗಾರ ಒಂದು ಹೆಕ್ಟೇರ್‌, ಪರಿಶಿಷ್ಟ ಜಾತಿ ಅಥವಾ ಪಂಗಡದ ಬೆಳೆಗಾರ ಒಂದು ಎಕರೆ ತೋಟ ಹೊಂದಿರಬೇಕು. ಅದು ಅವರ ಹೆಸರಿನಲ್ಲಿರಬೇಕು. ಮುಖ್ಯವಾಗಿ ಸಹಾಯಧನ ಪಡೆಯಲು ಬೆಳೆಗಾರನ ಹೆಸರಿನಲ್ಲಿ ಟ್ರ್ಯಾಕ್ಟರ್‌ ಇರಲೇಬೇಕು. ತೋಟ ಮತ್ತು
ಟ್ರ್ಯಾಕ್ಟರ್‌ ಇಲ್ಲದ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ನೀರಿನ ಟ್ಯಾಂಕರನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿ ಪಟ್ಟಿ ಮಾಡಿದ ಕಂಪನಿಗಳಲ್ಲಿ ಸಂಪೂರ್ಣವಾಗಿ ಹಣ ಪಾವತಿಸಿ, ನಂತರ ರಶೀದಿಯನ್ನು ಇಲಾಖೆಗೆ ಸಲ್ಲಿಸಬೇಕು. ಬಳಿಕ ಸಹಾಯಧನದ ಮೊತ್ತವು ಬೆಳೆಗಾರನ ಬ್ಯಾಂಕ್‌ ಖಾತೆಗೆ ಸಲ್ಲಿಕೆಯಾಗಲಿದೆ. ಷರತ್ತು ಪೂರೈಸುವ ಬೆಳೆಗಾರರು ಆಯಾ ತಾಲೂಕುಗಳ ಸಹಾಯಕ
ತೋಟಗಾರಿಕೆ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು, ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಬರದಿಂದಾಗಿ ನೀರಿನ ಕೊರತೆಯಿಂದ ಬೆಳೆ ನಾಶವಾಗಬಾರದು ಎಂದು ಸರ್ಕಾರ ನೀರಿನ ಟ್ಯಾಂಕರ್‌ಗೆ ಖರೀದಿಸುವ ಬೆಳೆಗಾರನಿಗೆ
ಸಹಾಯಧನ ನೀಡುತ್ತಿದೆ. ಆಯಾ ತಾಲೂಕು ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ
ಸೇರಿ ಹೆಚ್ಚಿನ ಮಾಹಿತಿ ಪಡೆದು ರೈತರು ಅರ್ಜಿ ಸಲ್ಲಿಸಬೇಕು. ಶೀಘ್ರವೇ ಇಲಾಖೆ ಈ ಕುರಿತು ಅರ್ಜಿ ಆಹ್ವಾನಿಸಲಿದೆ.
ಪರಶಿವಮೂರ್ತಿ, ಅಪರ ನಿರ್ದೇಶಕರು (ಹಣ್ಣುಗಳು), ತೋಟಗಾರಿಕೆ ಇಲಾಖೆ

ನೀರಿನ ಅಭಾವ ನೀಗಿಸಲು ಸರ್ಕಾರ ಕೈಗೊಂಡ ನೀರಿನ ಟ್ಯಾಂಕರ್‌ ಭಾಗ್ಯ ಸ್ವಾಗತಾರ್ಹ. ಆದರೆ, ಶೇ.75ರಷ್ಟು ಸಹಾಯಧನ ನೀಡಬೇಕಿತ್ತು. ಅದರಲ್ಲೂ ಮೊದಲು ರೈತನೇ ಹಣ ಹೂಡಿಕೆ ಮಾಡಿ ಟ್ಯಾಂಕರ್‌ ಖರೀದಿಸಿದ ಬಳಿಕ, ಸಹಾಯಧನ ಬಿಡುಗಡೆ ಮಾಡುವುದು ಸರಿಯಲ್ಲ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದರೆ ಒಳ್ಳೆಯದು.
ಸತೀಶ್‌ಗೌಡ, ಪ್ರಗತಿಪರ ರೈತ, ದೊಡ್ಡಬಳ್ಳಾಪುರ

ಸಂಪತ್‌ ತರೀಕೆರೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

congress

Maharashtra Election; ಕಾಂಗ್ರೆಸ್‌ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.