ಮಹಿಳೆಯರಿಗೆ ಸಹಾಯಕವಾಗುವ ಕಾರ್ಯಕ್ರಮ ನಡೆಸುವಾಸೆ


Team Udayavani, Jul 26, 2017, 8:50 AM IST

sowjanya-hegde.jpg

ತಮ್ಮ ನಿರರ್ಗಳ ಮಾತಿನ ಶೈಲಿಯಲ್ಲಿ ಕಾರ್ಯ ಕ್ರಮ ನಿರ್ವಹಣೆ, ಟಿವಿ ಆ್ಯಂಕರಿಂಗ್‌, ಮಿಸ್‌ ಮಂಗಳೂರು, ನೃತ್ಯ, ನಾಟಕ, ಸಿನೆಮಾಗಳ ಮೂಲಕ ಚಿರಪರಿಚಿತರಾದ ಮಂಗಳೂರಿನ ಸೌಜನ್ಯಾ ಹೆಗ್ಡೆ ಇದೀಗ ಮಿಸೆಸ್‌ ಇಂಡಿಯಾ ವರ್ಲ್ಡ್ವೈಡ್‌ನ‌ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. 

ಹಾಟ್‌ ಮೊಂಡೆ  ಸಂಸ್ಥೆ ನಡೆಸುವ ಸ್ಪರ್ಧೆಯ ಅಂತಿಮ ಸುತ್ತಿಗೆ ತಲುಪಿರುವ ಸೌಜನ್ಯಾ ಹೆಗ್ಡೆ  ಮಂಗಳೂರಿನ ಏಕೈಕ ಸ್ಪರ್ಧಿ. ಸುಮಾರು 15 ವಿಭಾಗಗಳಲ್ಲಿ ಪ್ರತೀ ಸ್ಪರ್ಧಿಯೂ ಸ್ಪರ್ಧಿಸಬೇಕಿದ್ದು, ರಾಜ್ಯದಿಂದ 7 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಜು. 27ರಿಂದ ಆ. 4 ರವರೆಗೆ ವಿಯೆಟ್ನಾಂನಲ್ಲಿ ಪೂರಕ ತರಬೇತಿ ನಡೆಯಲಿದ್ದು, ಆ.5ರಂದು ಹೊಸದಿಲ್ಲಿಯಲ್ಲಿ ಫೈನಲ್‌ ಸ್ಪರ್ಧೆ ನಡೆಯಲಿದೆ. 

ಸಾಂಸ್ಕೃತಿಕ ನಂಟು
ಎಳವೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳ‌ ನಂಟು ಹೊಂದಿದ್ದ ಸೌಜನ್ಯಾ ಅದೇ ಕ್ಷೇತ್ರದಲ್ಲಿ ಇಂದು ಸಾಧನೆಯ ಹಾದಿ ಹಿಡಿದಿದ್ದಾರೆ. ನಾಟಕ, ಯಕ್ಷಗಾನ, ನೃತ್ಯಗಳ ಮೂಲಕ ಎಳವೆಯಲ್ಲಿ ಸಾಧನೆ ತೋರಿದ್ದ ಇವರು ಬಳಿಕ ಚಿತ್ರರಂಗ, ಸೌಂದರ್ಯ ಸ್ಪರ್ಧೆಗಳಿಗೆ ತನ್ನನ್ನು ತೆರೆದುಕೊಂಡರು. 

ಶೈಕ್ಷಣಿಕವಾಗಿ ಇವರು ಕೆಜಿ ಶಿಕ್ಷಣದಿಂದ ಪಿಯುಸಿವರೆಗೆ ಬೆಂದೂರ್‌ ಆ್ಯಗ್ನೇಸ್‌ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಬಳಿಕ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಲಾ ಪದವಿ ಪಡೆದರು. ಪಿಯುಸಿಯಲ್ಲಿ ಸೈನ್ಸ್‌ ಆಯ್ಕೆ ಮಾಡಿಕೊಂಡಿದ್ದ ಇವರು ಎಂಜಿನಿಯರೋ, ಡಾಕ್ಟರೋ ಆಗಬೇಕಿತ್ತು. ಕಾನೂನು ಪದವಿ ಪಡೆದ ಬಳಿಕ ನ್ಯಾಯವಾದಿಯಾಗಬೇಕಿತ್ತು. ಆದರೆ ಇಂದು ವೃತ್ತಿಯಲ್ಲಿ ಟಿವಿ ಚಾನೆಲ್‌ವೊಂದರೆ ಆ್ಯಂಕರ್‌ ಆಗಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಹಂತಕ್ಕೆ ಬೆಳೆದಿದ್ದಾರೆ. 

ಕುಟುಂಬದ ಸಹಕಾರ
ಸೌಜನ್ಯ ಹೆಗ್ಡೆ ಅವರ ಪ್ರಗತಿಯಲ್ಲಿ ತಮ್ಮ ಕುಟುಂಬ, ಸಹೋದ್ಯೋಗಿಗಳು, ಸ್ನೇಹಿತರ ಸಹಕಾರವೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಂ. ಸದಾಶಿವ ಹೆಗ್ಡೆ ಹಾಗೂ ಸುಮತಿ ಎಸ್‌. ಹೆಗ್ಡೆ ಅವರ ಪುತ್ರಿಯಾದ ಸೌಜನ್ಯಾ, ಸುಧೀರ್‌ ಹೆಗ್ಡೆ ಅವರನ್ನು ವಿವಾಹವಾದರು. 

ಸುಧೀರ್‌ ಅಬ್ರಾಡ್‌ನ‌ಲ್ಲಿ ಉದ್ಯೋಗಿಯಾಗಿದ್ದ ಕಾರಣ ಸೌಜನ್ಯಾ ಅವರು ಕೂಡ ತನ್ನ ಚಟುವಟಿಕೆ ಗಳನ್ನು ತ್ಯಜಿಸಿ ಅನಿವಾರ್ಯವಾಗಿ ಅಲ್ಲಿಗೆ ತೆರಳಿದರು. ಅಲ್ಲೂ ತನ್ನ ಮಾಲಕತ್ವದ ನೃತ್ಯ ಸಂಸ್ಥೆಯೊಂದನ್ನು ಸ್ಥಾಪಿಸಿದರು. 10 ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸೌಜನ್ಯಾ ಬಳಿಕ ಮತ್ತೆ ಮಂಗಳೂರಿಗೆ ಮರಳಿದರು. ಪ್ರಸ್ತುತ ಸೌಜನ್ಯಾ ಅವರು ಸೌರವಿ ಹಾಗೂ ಸೌರಾಗ್‌ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಬೆಳೆದಿರುವುದೇ ನನ್ನ ಹೆಮ್ಮೆ
ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಈ ಮಟ್ಟಕ್ಕೆ ಬೆಳೆದಿರುವುದೇ ನನ್ನ ಹೆಮ್ಮೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಇಲ್ಲಿ ಒಟ್ಟು 15 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಟ್ಯಾಲೆಂಟ್‌ ರೌಂಡ್‌ನ‌ಲ್ಲಿ ಮಹಿಳಾ ಶಕ್ತಿಯ ರೂಪವನ್ನು ಪ್ರದರ್ಶಿಸಲಿದ್ದೇನೆ. ಚಾರಿಟಿ ಶೋನಲ್ಲಿ ರಾಷ್ಟ್ರೀಯ ಬ್ಲೆ$çಂಡ್‌ ಸ್ಕೂಲ್‌ನ ಜತೆಗೆ ಒಪ್ಪಂದ ಮಾಡಲಾಗಿದ್ದು, ಅದರ ನೆರವಿನ ಮೂಲಕ ನಾವು ಗೆಲ್ಲಬಹುದಾಗಿದೆ. ಗೆದ್ದು ಬಂದ ಬಳಿಕ ಮಹಿಳೆಯರಿಗೆ ಸಹಕಾರವಾಗುವ ಏನಾದರೂ ಕಾರ್ಯಕ್ರಮ ನಡೆಸಬೇಕೆಂಬ ಹಂಬಲವಿದೆ. 
– ಸೌಜನ್ಯಾ ಹೆಗ್ಡೆ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.