ಶತ್ರು ಸೋಲಿಸೋ ತಾಕತ್ತಿದೆ: ಮತ್ತೆ ಭಾರತಕ್ಕೆ ಚೀನ ಎಚ್ಚರಿಕೆ


Team Udayavani, Jul 31, 2017, 6:05 AM IST

31-WORLD-1.jpg

ಬೀಜಿಂಗ್‌: ಅತಿಕ್ರಮಿಸುವ ಶತ್ರುಗಳನ್ನು ಸೋಲಿಸುವ ತಾಕತ್ತು ಚೀನದ ಸೇನೆ (ಪೀಪಲ್ಸ್‌ ಲಿಬರೇಷನ್‌ ಆರ್ಮಿ -ಪಿಎಲ್‌ಎ)ಗೆ ಇದೆ ಎಂದು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಈ ಮೂಲಕ ಚೀನ ಮತ್ತೂಮ್ಮೆ ಭಾರತವನ್ನು ಕೆಣಕುವ ಪ್ರಯತ್ನ ಮಾಡಿದೆ.

ಪಿಎಲ್‌ಎಯ 90ನೇ ಸಂಸ್ಥಾಪನಾ ದಿನದ ಅಂಗವಾಗಿ ರವಿವಾರ ನಡೆದ ಅತೀ ದೊಡ್ಡ ಸೇನಾ ಪರೇಡ್‌ ಸಂದರ್ಭದಲ್ಲಿ ಕ್ಸಿ ಭಾಷಣ ಮಾಡಿದ್ದು, ಎಂಥ ಸಂದರ್ಭದಲ್ಲೂ ಸನ್ನದ್ಧ ಸ್ಥಿತಿಯಲ್ಲಿರುವ ಸೇನೆಯನ್ನು ಪ್ರಶಂಸಿ ಸಿದ್ದಾರೆ. ಡೋಕ್ಲಾಮ್‌ ವಿವಾದದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕ್ಸಿ ಜಿನ್‌ಪಿಂಗ್‌ ಶತ್ರುಗಳನ್ನು ಹಿಮ್ಮೆಟ್ಟಿ ಸುವ ಶಕ್ತಿ ನಮ್ಮ ಸೈನ್ಯಕ್ಕೆ ಇದೆ ಎಂಬ ನಂಬಿಕೆ ನಮ್ಮದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಡೋಕ್ಲಾಮ್‌ ವಿವಾದ ಕುರಿತಂತೆ ಚೀನ ಕೆಲವು ದಿನಗಳಿಂದ ಭಾರತಕ್ಕೆ ಕಠಿನ ಕ್ರಮದ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಭೂತಾನ್‌ ಪರ ತಮ್ಮ ಗಡಿಯೊಳಕ್ಕೆ ನುಗ್ಗಿಸಿದ ಸೇನೆಯನ್ನು ಬೇಷರತ್ತಾಗಿ ಹಿಂದೆಗೆದುಕೊಳ್ಳ ಬೇಕು. ಆ ಬಳಿಕ ಏನಿದ್ದರೂ ನಮ್ಮ ಮಾತುಕತೆ ಎಂದು ಹೇಳುತ್ತಲೇ ಇದೆ. ಇದ ರೊಂದಿಗೆ ದಕ್ಷಿಣ ಚೀನ ಸಮುದ್ರ ವಿವಾದ ಕುರಿತಂತೆಯೂ ಅಮೆರಿಕದ ಮಿತ್ರ ರಾಷ್ಟ್ರ ಗಳ ವಿರುದ್ಧ ಚೀನ ಆ ಭಾಗದಲ್ಲಿ ತೋಳ್ಬಲ ತೋರಿಸಲು ಮುಂದಾಗಿದ್ದು, ಕ್ಸಿ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ಚೀನದ ಇನ್ನರ್‌ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿ ನಡೆದ ಸುಮಾರು 12 ಸಾವಿರ ಸೇನಾ ತುಕಡಿಗಳ ಪರೇಡ್‌ ಅನ್ನು ವೀಕ್ಷಿಸಿದ ಕ್ಸಿ, ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು, ಗೌರವವಂದನೆ ಸ್ವೀಕ ರಿಸಿದ್ದಾರೆ. ಅತೀ ದೊಡ್ಡ ಪರೇಡ್‌ ಎಂದು ಹೇಳಲಾದ ಈ ಕಾರ್ಯಕ್ರಮದಲ್ಲಿ 127 ಯುದ್ಧ ವಿಮಾನಗಳು, ಸುಮಾರು 571 ವಿಧದ ಯುದ್ಧ ಸಲಕರಣೆಗಳ ಪ್ರದರ್ಶನ ಮಾಡಲಾಯಿತು. ಇವುಗಳಲ್ಲಿ ಸುಮಾರು ಅರ್ಧಾಂಶಕ್ಕೂ ಹೆಚ್ಚು ಸಲಕರಣೆಗಳನ್ನು ಇದೇ ಮೊದಲ ಬಾರಿಗೆ ಚೀನ ಸೇನೆ ಸಾರ್ವ ಜನಿಕವಾಗಿ ಪ್ರದರ್ಶಿಸಿದೆ ಎನ್ನಲಾಗಿದೆ.

ಪರಮಾಣು, ಸಾಂಪ್ರದಾಯಿಕ ಕ್ಷಿಪಣಿಗಳ ಪ್ರದರ್ಶನ
ಸೇನಾ ಪರೇಡ್‌ನ‌ಲ್ಲಿ 5 ವಿಧದ ಪರ ಮಾಣು, ಸಾಂಪ್ರದಾಯಿಕ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದೆ. ಡಾಂಗ್‌ಫೆಂಗ್‌-26 ಬ್ಯಾಲಿಸ್ಟಿಕ್‌ ಕ್ಷಿಪಣಿ, ಡಾಂಗ್‌ಫೆಂಗ್‌-21ಡಿ ಯುದ್ಧ ನೌಕೆ ನಿಗ್ರಹ ಕ್ಷಿಪಣಿ ಮತ್ತು ಡಾಂಗ್‌ಫೆಂಗ್‌ 16ಜಿ ಸಾಂಪ್ರದಾಯಿಕ ಕ್ಷಿಪಣಿ ಪ್ರದರ್ಶಿಸಿದೆ. ಇದರೊಂದಿಗೆ ಎರಡು ವಿಧದ ಅಣ್ವಸ್ತ್ರ ಕ್ಷಿಪಣಿ, ಅವುಗಳ ಲಾಂಚರ್‌ಗಳನ್ನು ಪ್ರದರ್ಶಿಸಿದೆ. ಜೆ-20 ಅತ್ಯಾಧುನಿಕ ಯುದ್ಧ ವಿಮಾನ, ಚೀನದ ಅತೀ ದೊಡ್ಡ, ಹೊಸ ಸರಕು ಸಾಗಾಣಿಕೆ ವಿಮಾನ ವೈ-20 ಅನ್ನು ಪ್ರದರ್ಶಿಸಲಾಗಿದೆ.

ರಷ್ಯಾದೊಂದಿಗೆ ಭಾರತ ಮಿ-17 ಹೆಲಿಕಾಪ್ಟರ್‌ ಡೀಲ್‌
ರಷ್ಯಾದಿಂದ 48 ಮಿ-17ವಿ-5 ಯುದ್ಧ ಸರಕು ಸಾಗಣೆ ಹೆಲಿಕಾಪ್ಟರ್‌ ಅನ್ನು ಖರೀದಿಸುವ ಸಂಬಂಧ ಭಾರತ-ರಷ್ಯಾ ಮಾತುಕತೆ ನಡೆಸುತ್ತಿದೆ. ಈ ವರ್ಷಾಂತ್ಯಕ್ಕೆ ಈ ಒಪ್ಪಂದ ಅಂತಿಮಗೊಳ್ಳಲಿದೆ ಎಂಬ ವಿಶ್ವಾಸವನ್ನು ರಷ್ಯಾ ಹೊಂದಿದೆ. ಕಳೆದ ವರ್ಷವಷ್ಟೇ ಭಾರತ ಈ ಮೊದಲು ಖರೀದಿಸಿದ್ದ 151 ಮಿ-17ವಿ-5 ಹೆಲಿಕಾಪ್ಟರ್‌ಗಳ ಅಂತಿಮ ಮೂರನ್ನು ರಷ್ಯಾ ದಿಂದ ಪಡೆದಿತ್ತು. ಈಗ ಮತ್ತೆ 48 ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾ ಗಿದೆ. ಇದಕ್ಕಾಗಿ ರಷ್ಯಾದ ಸರಕಾರಿ ಸ್ವಾಮ್ಯದ ರೋಸೋಬೊರೋ ನೆಕ್ಸ್‌ಪೋರ್ಟ್‌ ಕಂಪೆನಿ ಜತೆ ಮಾತುಕತೆಯಲ್ಲಿದೆ ಎಂದು ಕಂಪೆನಿಯ ಸಿಇಒ ತಿಳಿಸಿದ್ದಾರೆ.

ಟಾಪ್ ನ್ಯೂಸ್

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Chinese Zoo: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ…

China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.