ಮಣಿಪಾಲ: ಡಾ|ಪದ್ಮಾ ರಾವ್ ಸ್ಮಾರಕ ಉಪನ್ಯಾಸ
Team Udayavani, Aug 1, 2017, 7:40 AM IST
ಉಡುಪಿ: ಮಣಿಪಾಲದ ಕೆಎಂಸಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರಜ್ಞರ ಸಮ್ಮೇಳನ ಮತ್ತು ಡಾ|ಎ. ಪದ್ಮಾ ರಾವ್ ಸ್ಮಾರಕ ಸ್ನಾತಕೋತ್ತರ ಉಪನ್ಯಾಸ ನಡೆಯಿತು. 46 ಸ್ನಾತಕೋತ್ತರ ಪದವೀಧರರು ಸಂಶೋಧನ ಪ್ರಬಂಧ ಮಂಡಿಸಿದರು, 12 ಅತಿಥಿ ಉಪಾನ್ಯಾಸಕರು ಉಪನ್ಯಾಸ ನೀಡಿದರು.
ಸಮ್ಮೇಳನದ ಸಂಘಟನ ಸಮಿತಿ ಅಧ್ಯಕ್ಷ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥ ಡಾ|ಮುರಳೀಧರ ವಿ. ಪೈಯವರು ಹಿಂದೆ ಮಣಿಪಾಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಸಮ್ಮೇಳನ ಈ ಬಾರಿ ರಾಜ್ಯದ ಇತರ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಪದವೀಧರರಿಗೆ ಅವಕಾಶ ನೀಡಿದೆ. ಮುಂದಿನ ವರ್ಷದಿಂದ ರಾಷ್ಟ್ರ ಮಟ್ಟದ ಪ್ರತಿನಿಧಿಗಳು ಪಾಲ್ಗೊಳ್ಳುವಂತಾಗಲಿ ಎಂದು ಹಾರೈಸಿದರು.
ಕೇರಳ ತಿರುವಲ್ಲ ಪುಷ್ಪಗಿರಿ ವೈದ್ಯಕೀಯ ಕಾಲೇಜಿನ ಒಬಿಜಿ ಮುಖ್ಯಸ್ಥೆ ಪ್ರೊ|ಶ್ರೀದೇವಿ ಎಸ್.ಎನ್. ಅವರು ಡಾ|ಎ. ಪದ್ಮಾ ರಾವ್ ದತ್ತಿ ಉಪನ್ಯಾಸ (ವಿಷಯ: ಅಕ್ಯೂಟ್ ಮೆಟರ್ನಲ್ ಮೊರ್ಬಿಡಿಟಿ) ನೀಡಿದರು. ಮುಖ್ಯ ಅತಿಥಿ ಕೆಎಂಸಿ ನಿಯೋಜಿತ ಡೀನ್ ಡಾ|ಪ್ರಜ್ಞಾ ರಾವ್, ಡಾ|ಎ. ಕೃಷ್ಣ ರಾವ್ ಪ್ರೊ|ಶ್ರೀದೇವಿಯವರನ್ನು ಗೌರವಿಸಿದರು.
ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣದಲ್ಲಿ ಉಡುಪಿ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಡಾ|ಎ. ಪದ್ಮಾ ರಾವ್ ಕೊಡುಗೆ ಮಹತ್ತರವಾದುದು. ಇದನ್ನು ವಿವಿಧ ಆರೋಗ್ಯ ಕೇಂದ್ರಗಳನ್ನು (ಆರ್ಎಂಸಿಎಚ್) ತೆರೆಯುವ ಮೂಲಕ ಅವರು ಸಾಧಿಸಿದರು ಎಂದು ಡಾ|ಪ್ರಜ್ಞಾ ರಾವ್ ಹೇಳಿದರು.
ಡಾ|ಪ್ರತಾಪಕುಮಾರ್, ಡಾ|ಶುಭ ಗೀತಾ ಡಾ|ಪದ್ಮಾ ರಾವ್ ಕುರಿತು ಮಾತನಾಡಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|ಕ| ದಯಾನಂದ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು. ಡಾ|ಶ್ರೀಪಾದ ಹೆಬ್ಟಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!
Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ
Arrested: ಐಪಿಎಸ್ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ
HIV vaccine; ಎಚ್ಐವಿ ತಡೆಗೆ 2 ಡೋಸ್ ಲಸಿಕೆ ಅಭಿವೃದ್ಧಿ: ಎಂಐಟಿ
Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್ ರೈಲು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.