ರಾಷ್ಟ್ರಾಭಿವೃದ್ಧಿ, ಸಾಮಾಜಿಕ ಬದಲಾವಣೆ: ಐಎಎಸ್ ಪಾತ್ರ ಮಹತ್ತರ
Team Udayavani, Aug 1, 2017, 3:17 PM IST
ಉಡುಪಿ: ರಾಷ್ಟ್ರದ ಸಮಗ್ರ ಅಭಿವೃದ್ಧಿ, ಸಾಮಾಜಿಕ ಬದಲಾವಣೆಯಲ್ಲಿ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಮಹತ್ತರ ಪಾತ್ರವನ್ನು ವಹಿಸಿಕೊಂಡಿದೆ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ 112ನೇ ರ್ಯಾಂಕ್ ಪಡೆದ ಮಣಿಪಾಲದ ರಂಜನ್ ಆರ್. ಶೆಣೈ ಅವರು ಹೇಳಿದರು.
ಎಂಜಿಎಂ ಕಾಲೇಜಿನ ಆರ್ಟ್ಸ್ ಮತ್ತು ಐಕ್ಯೂಎಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಜು. 31ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆದ ಐಎಎಸ್
ಪರೀಕ್ಷಾ ಸಾಧಕರ ಜೊತೆಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಜನೆಯಿಂದ ಜ್ಞಾನ, ಕೌಶಲ ವೃದ್ಧಿಯಾಗುತ್ತದೆ. ಭವಿಷ್ಯಕ್ಕಾಗಿ ಸೂಕ್ತವಾದ ದಾರಿಯಲ್ಲಿ ಮುನ್ನಡೆ ಯಬೇಕು. ನಾನು ಕೂಡ 2 ವರ್ಷ ಮುಂಬಯಿಯ ಸ್ಲಂ ನಿವಾಸಿಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು. ಪರಿಸರದ ಸ್ವತ್ಛತೆಗೆ ಆದ್ಯತೆ ಕೊಡಬೇಕು ಎಂದರು.
ಕಲಾ ವಿದ್ಯಾರ್ಥಿಗಳಿಗೆ ಐಎಎಸ್ ಸುಲಭ
ಐಎಎಸ್ ಪರೀಕ್ಷೆ ಬರೆಯಲು ಎಂಜಿನಿಯರಿಂಗ್, ಡಾಕ್ಟರ್ ಪದವಿ ಪಡೆಯಬೇಕಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಸುಲಭವಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ ಗಳೇ ಪ್ರಶ್ನೆಗಳಾಗಿ ಇಲ್ಲಿ ಹೆಚ್ಚಾಗಿ ಬರುತ್ತದೆ. ಹಾಗಾಗಿ ಆರ್ಟ್ಸ್ ಕಲಿತವರು ಐಎಎಸ್ ಪರೀಕ್ಷೆಗೆ ಒತ್ತು ಕೊಡಬಹುದು. ಇಂದಿನ ಆಗು-ಹೋಗುಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಅದಕ್ಕಾಗಿ ಪತ್ರಿಕೆಗಳನ್ನು ಹೆಚ್ಚು ಓದಬೇಕು ಎಂದರು.
ಆನ್ಲೈನ್ ತರಬೇತಿ ಉತ್ತಮ
ಐಎಎಸ್ ಪರೀಕ್ಷೆ ಬರೆಯಲು ಪರಿಣತಿ ಹೊಂದಿದ ಶಿಕ್ಷಕರೇ ಬೋಧನೆ ಮಾಡಿದಂತಹ ಕ್ಲಾಸ್ ಟೀಚಿಂಗ್ನ ವೀಡಿಯೋ ಆನ್ಲೈನ್ನಲ್ಲಿ ಲಭ್ಯವಿದೆ. ನುರಿತ ಶಿಕ್ಷಕ ರಿಂದ ಸಲಹೆ ಪಡೆದುಕೊಂಡು ಆನ್ಲೈನಿನಿಂದ ಬೋಧನೆಯ ವೀಡಿಯೋ ಪಡೆದುಕೊಂಡು ಮನೆಯಲ್ಲಿಯೇ ಕುಳಿತುಕೊಂಡು ಐಎಎಸ್ ತರಬೇತಿ ಪಡೆಯಬಹುದು ಎಂದು ರಂಜನ್ ಹೇಳಿದರು.
ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಪ್ರೊ| ಎಂ. ವಿಶ್ವನಾಥ ಪೈ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಪರಿಚಯಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿ ಜೆಸ್ಟಿನ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದಿವ್ಯಾ ಶೆಟ್ಟಿ ವಂದಿಸಿದರು.
ಹುಡುಗಿಯರಿಗೆ ಪರೀಕ್ಷೆ ಶುಲ್ಕವಿಲ್ಲ
ದೇಶದಲ್ಲಿ 23 ವಿವಿಧ ಸರಕಾರಿ ಸೇವಾ ಕ್ಷೇತ್ರಗಳಿದೆ. ಕೊಂಕಣಿ, ಕನ್ನಡ ಸಹಿತ ಸಂವಿಧಾನದಲ್ಲಿ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಐಎಎಸ್ ಪರೀಕ್ಷೆ ಬರೆಯಬಹುದು. ದಿಲ್ಲಿಯಲ್ಲಿಯೇ ಪರೀಕ್ಷೆ ಬರೆಯಬೇಕು ಎಂದೇನಿಲ್ಲ. ಕರ್ನಾಟಕದಲ್ಲಿಯೂ ಹಲವು ಯುಪಿಎಸ್ಸಿ ಪರೀಕ್ಷಾ ಕೇಂದ್ರಗಳಿದೆ. ಸ್ವಲ್ಪ ಹಣ ಖರ್ಚು ಮಾಡಿ ಕೋಚಿಂಗ್ ಪಡೆಯಬಹುದು. ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡಬಹುದು. ಐಎಎಸ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ಉಚಿತ ಶುಲ್ಕ. ಹುಡುಗರಿಗೆ 100 ರೂ. ಶುಲ್ಕ ಮಾತ್ರ ಇದೆ ಎಂದರು.
ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡಿ
ವಿದ್ಯಾರ್ಥಿಗಳಲ್ಲಿ ಫೇಸ್ಬುಕ್ ಅಕೌಂಟ್ ಇದ್ದರೆ ಮೊದಲು ಅದನ್ನು ಡಿಲೀಟ್ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಳ್ಳುವುದರಿಂದ ಸಮಯ ವ್ಯರ್ಥವಾಗುತ್ತದೆ. ಆ ಸಮಯವನ್ನು ಓದಿನಲ್ಲಿ ತೊಡಗಿಸಿಕೊಳ್ಳಿ. ಶೈಕ್ಷಣಿಕ ಗುರಿ ತಲುಪಿದ ಬಳಿಕ ಬೇಕಿದ್ದರೆ ಫೇಸ್ ಬುಕ್ ಅಕೌಂಟ್ ತೆರೆಯಿರಿ ಎಂದು ರಂಜನ್ ಶೆಣೈ ವಿದ್ಯಾರ್ಥಿಗಳಿಗೆ ಸಲಹೆ ಇತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಹೊಸ ಸೇರ್ಪಡೆ
Shimoga; ಎಲ್ಲರ ಮನ ಗೆದ್ದಿದ್ದ ಇಟ್ಟಿಗೆ ಹಳ್ಳಿಯ ʼ108 ಆಂಬುಲೆನ್ಸ್ʼ ಹೋರಿ ಇನ್ನಿಲ್ಲ…!
KS Eshwarappa: ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೋ,ಇಲ್ಲ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ
Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ, ಸುಪ್ರೀಂ ಕೋರ್ಟ್
Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ
Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.