![Railway-Rush](https://www.udayavani.com/wp-content/uploads/2025/02/Railway-Rush-415x249.jpg)
![Railway-Rush](https://www.udayavani.com/wp-content/uploads/2025/02/Railway-Rush-415x249.jpg)
Team Udayavani, Aug 2, 2017, 8:25 AM IST
ಚೆನ್ನೈ: ಮಹತ್ವಾಕಾಂಕ್ಷಿ ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿಮಿತ್ತ ಉಡ್ಡಯನ ಮಾಡಿದ್ದ ಐಆರ್ಎನ್ಎಸ್ಎಸ್-1 ಎ ಉಪಗ್ರಹ ತಾಂತ್ರಿಕ ಸಮಸ್ಯೆಗೆ ಈಡಾಗಿದ್ದರಿಂದ ಪರ್ಯಾಯ ಉಪಗ್ರಹವನ್ನು ನಭಕ್ಕೆ ಹಾರಿಬಿಡಲು ಇಸ್ರೋ ಉದ್ದೇಶಿಸಿದೆ. ಇದೇ ತಿಂಗಳ ಕೊನೆಗೆ ಉಪಗ್ರಹವನ್ನು ಪಿಎಸ್ಎಲ್ವಿ-ಸಿ-39 ರಾಕೆಟ್ ಮೂಲಕ ಉಡ್ಡಯನ ನಡೆಸಲು ನಿರ್ಧರಿಸಲಾಗಿದೆ.
2013 ಜು.1ರಂದು ಹಾರಿಬಿಡಲಾಗಿದ್ದ ಉಪಗ್ರಹದಲ್ಲಿನ ಮೂರು ಪರಮಾಣು ಗಡಿಯಾರಗಳು ಇತ್ತೀಚೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಉಪಗ್ರಹವನ್ನು ಅದರ ಸ್ಥಾನಕ್ಕೆ ನೇಮಿಸಲು ಇಸ್ರೋ ಚಿಂತಿಸಿತ್ತು. ಹೊಸ ಉಪಗ್ರಹ ಉಡ್ಡಯನ ದಿನಾಂಕ ಶೀಘ್ರ ನಿಗದಿಯಾಗಲಿದೆ. ಸ್ವದೇಶಿ ದಿಕ್ಸೂಚಿ ವ್ಯವಸ್ಥೆ ಸ್ಥಾಪಿಸಲು ಒಟ್ಟು 7 ಉಪಗ್ರಹಗಳನ್ನು 1420 ಕೋಟಿ ರೂ. ವೆಚ್ಚದಲ್ಲಿ ಹಾರಿಬಿಡಲಾಗಿತ್ತು.
Mahakumbha Mela: ದೇಶದ ಬಹುತೇಕ ರೈಲು ನಿಲ್ದಾಣಗಳು ರಶ್
Dharwad: 145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ
Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ
Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್ ಭವಿಷ್ಯ
BJP is Set: ಇಂದು ದಿಲ್ಲಿ ಸಿಎಂ ಆಯ್ಕೆ ಸಾಧ್ಯತೆ: ನಾಳೆಯೇ ಪ್ರಮಾಣ ಸ್ವೀಕಾರ ಸಂಭವ
You seem to have an Ad Blocker on.
To continue reading, please turn it off or whitelist Udayavani.