![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, Aug 3, 2017, 8:25 AM IST
ತಿರುವನಂತಪುರ: ಬೆಂಗಳೂರು ಸರಣಿ ಸ್ಫೋಟ ಸಂಬಂಧ ಜೈಲು ಪಾಲಾಗಿರುವ ಪೀಪಲ್ಸ್ ಡೆಮೆಕ್ರೊಟಿಕ್ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಕೇರಳ ಪ್ರವಾಸದ ಭದ್ರತಾ ವೆಚ್ಚ ಭರಿಸುವುದಾಗಿ ಕೇರಳ ಸರಕಾರ ಕರ್ನಾಟಕ ಸರಕಾರಕ್ಕೆ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಆ. 9ರಂದು ಮದನಿಯ ಪುತ್ರನ ವಿವಾಹ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಅನುಮತಿ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ಪುರಸ್ಕರಿದೆ. ಮದನಿ ಪ್ರವಾಸದ ಭದ್ರತಾ ವೆಚ್ಚವಾಗಿ 14.79 ಲಕ್ಷ ರೂ. ನೀಡಬೇಕೆಂದು ಕರ್ನಾಟಕದ ಪೊಲೀಸ್ ಇಲಾಖೆ ಕೇಳಿದೆ. ಈ ಬಗ್ಗೆ ಪಿಡಿಪಿ ಕೇರಳ ಘಟಕವು ಸಿಎಂ ಪಿಣರಾಯಿ ವಿಜಯನ್ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ವಿಜಯನ್ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಮದನಿ ಪ್ರವಾಸದ ಭದ್ರತಾ ವೆಚ್ಚವನ್ನು ಕೇರಳ ಪೊಲೀಸರೇ ನೀಡುತ್ತಾರೆ. ಆದರೆ ಭದ್ರತಾ ವೆಚ್ಚದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಕೇರಳ ಸಿಎಂರಿಂದ ಕರ್ನಾಟಕ ಸಿಎಂಗೆ ಪತ್ರ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.