ಬ್ಲಾಕ್‌ಮೇಲ್ ಜಮಾನ: ಆನ್‌ಲೈನ್‌ನಲ್ಲಿ ಇದ್ದಾರೆ, ಕಾಮಣ್ಣನ ಮಕ್ಕಳು!


Team Udayavani, Aug 9, 2017, 1:45 PM IST

09-AVALU-4.jpg

ಕಾಮಣ್ಣರು ಈಗ ಕೇವಲ ಬೀದಿಗಳಲ್ಲಲ್ಲ, ಆನ್‌ಲೈನ್‌ನಲ್ಲೂ ಇದ್ದಾರೆ. ಹಾಗಂತ ಸ್ತ್ರೀ, ಸಾಮಾಜಿಕ ಜಾಲತಾಣ ಬಳಸದೇ ಇರಲಾಗುತ್ತದೆಯೇ? ಅದು ಆಕೆಯ ಸ್ವಾತಂತ್ರ್ಯ..

ಒಂಟಿ ಹೆಣ್ಣೊಬ್ಬಳು ಸುಮ್ಮನೆ ನಡೆದು ಹೋಗುತ್ತಿದ್ದರೂ ಸಾಕು ಹತ್ತಾರು ಕಣ್ಣುಗಳು ಮುತ್ತಿಕೊಳ್ಳುತ್ತವೆ. ಮಾರ್ಕೆಟ್‌, ಬಸ್‌, ರೈಲುಗಳಲ್ಲಿ ರಶ್‌Ïನ ನೆಪದಲ್ಲಿ ಅವಳನ್ನು ಮುಟ್ಟುವ ಚಪಲ ಬಹುತೇಕರಿಗೆ. ದಿನನಿತ್ಯ ಇಂಥ ಕರ್ಮಗಳಿಂದ ಅವಳು ಕುಗ್ಗಿ ಹೋಗುತ್ತಾಳೆ. ಅವಳಿಗೆ, ಅವಳ ಒಂಟಿತನಕ್ಕೆ ಈ ಸಮಾಜ ಸೇಫ್ ಅಲ್ಲ ಎಂಬುದು ಹಲವು ಬಾರಿ ಪ್ರೂವ್‌ ಆಗುತ್ತಲೇ ಬಂದಿದೆ. ಅಂದಹಾಗೆ, ಅವಳಿಗೆ ಈಗ ಆನ್‌ಲೈನ್‌ ಜಾಲತಾಣಗಳು ಕೂಡ ಸೇಫ್ ಅಲ್ಲ ಎಂಬುದು ಸರ್ವವಿಧಿತ. 

ಜಾಲತಾಣಗಳಲ್ಲೂ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದರೆ, ನೀವು ಅದನ್ನು ನಂಬಲೇಬೇಕು. ನೀವು ಇದನ್ನು ನಂಬಲೇಬೇಕು. ಇದು ಬಹುತೇಕ ಸಾರಿ ಯಾರ ಕಣ್ಣಿಗೂ ಬೀಳದೇ ನಡೆದು ಹೋಗುವುದರಿಂದ ಸಮಾಜದ ನಡುವೆ ಅಷ್ಟಾಗಿ ಕಂಡು ಬರುವುದಿಲ್ಲ. ಹೆಣ್ಣು ಇಂಥ ವಿಷಯಗಳನ್ನು ಹೇಳಿಕೊಳ್ಳಲು ಆಗದೇ ಬಿಡಲು ಆಗದೇ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗುತ್ತಾಳೆ. ಇದು ಆಕೆಯ ಮೇಲಾಗುವ ದೈಹಿಕ ಅತ್ಯಾಚಾರದ ಪ್ರಯತ್ನದಷ್ಟೇ ಹಿಂಸೆಯನ್ನು ತಂದುಕೊಡುತ್ತದೆ. ಫೇಸ್‌ಬುಕ್‌, ವಾಟ್ಸಾéಪ್‌, ಟ್ವಿಟ್ಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಹಿಂದೆ ಬಿದ್ದು ಪದೇಪದೆ ಸಂದೇಶಗಳನ್ನು ಕಳುಹಿಸುವುದು, ಮಾತಿಗೆಳೆಯುವುದು, ಪ್ರಪೋಸ್‌ ಮಾಡುವುದು, ಅಶ್ಲೀಲ ಸಂದೇಶಗಳನ್ನು ರವಾನಿಸುವುದು, ಚಾಟ್‌ ಹಿಸ್ಟರಿಗಳನ್ನು, ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ವೆುàಲ್‌ ಮಾಡುವುದು… ಮುಂತಾದವು ನಡೆಯುತ್ತಿವೆ. ಇದರಿಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾಳೆ.

ಹಾಗಾದ್ರೆ, ಅವಳೇನು ಮಾಡ್ಬೇಕು? 
ರಸ್ತೆ, ಆಫೀಸ್‌, ಬಸ್‌ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಆಕೆಗೆ ತನ್ನನ್ನು ಸೇಫ್ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಅವಳ ನಡೆನುಡಿ, ಮಾತುಕತೆ, ದಿರಿಸಿನ ಬಗೆಗೆ ಸಾಕಷ್ಟು ಪರ ವಿರೋಧಗಳಿದ್ದರೂ ಒಂದು ಹೆಣ್ಣನ್ನು ಹೆಣ್ಣಿನಂತೆಯೇ ಕಾಣುವುದನ್ನು, ಗೌರವಿಸುವುದನ್ನು ಸಮಾಜ ಬಯಸುತ್ತದೆ. ಹೊರಗೆ ಕಾಮಣ್ಣರಿದ್ದಾರೆ ಎಂದು ಆಕೆ ಹೊರಗೆ ಬರದೇ ಇರಲು ಸಾಧ್ಯವೇ!? ಸಾಮಾಜಿಕ ಜಾಲತಾಣಗಳಲ್ಲೂ ಹೀಗೆ ನಡೆಯುತ್ತಿರುವಾಗ ಆಕೆ ಅವುಗಳನ್ನು ಬಳಸದೇ ಇರಲಾಗುತ್ತದೆಯೇ? ಅದು ಆಕೆಯ ಸ್ವಾತಂತ್ರ್ಯ. ಅದನ್ನು ನಾವು ಗೌರವಿಸಬೇಕು. ಆದರೆ, ಅವಳು ಒಂದಿಷ್ಟು ಜಾಗರೂಕತೆಗಳನ್ನು ರೂಢಿಸಿಕೊಂಡಿದ್ದೇ ಆದಲ್ಲಿ, ಆಕೆ ಅದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು.

– ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವಾಗ ಎಲ್ಲೂ ನಿಮ್ಮ ಕಾಯಂ ವಿಳಾಸ ನಮೂದಿಸಬೇಡಿ. ಕಚೇರಿ ಅಥವಾ ಇತರೆ ಯಾವುದಾದರೂ ವಿಳಾಸ ನೀಡಿ, ಖಾತೆ ತೆರೆಯಿರಿ.

– ಪಾಸ್‌ವರ್ಡ್‌ಗಳ ಬಗೆಗೆ ಎಚ್ಚರ ಇರಲಿ. ತುಂಬಾ ಸುಲಭವಾದ, ಕದಿಯಬಹುದಾದ ಪಾಸ್ವರ್ಡ್‌ಗಳು ಬೇಡ. ಯಾರೊಂದಿಗೂ ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬೇಡಿ. 

– ಅಪರಿಚಿತರಿಂದ ಬರುವ ಮೇಲ್‌, ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌, ಮಸೇಜ್‌ಗಳ ಬಗೆಗೆ ನಿಗಾ ಇರಲಿ. ನಿಮಗೆ ಗೊತ್ತಿಲ್ಲದ ಯಾವುದೇ ಮೇಲ್‌ ಹಾಗೂ ಮತ್ತೂಂದಕ್ಕೂ ಪ್ರತಿಕ್ರಿಯಿಸಲು ಹೋಗ್ಬೇಡಿ.

– ನಿಮ್ಮ ಮೊಬೈಲ್‌ ನಂಬರ್‌, ಅದು ನಿಮ್ಮ ವೈಯಕ್ತಿಕ. ಅದನ್ನು ಹಂಚುವುದು ತರವಲ್ಲ. ಅದು ಆತ್ಮೀಯ ವಲಯ ಬಿಟ್ಟು, ಗಡಿದಾಟಲು ಬಿಡಬೇಡಿ. 

– ಅಪರಿಚಿತರೊಂದಿಗೆ ಮಾತಿಗಿಳಿಯುವುದು, ಆಮಿಷಕ್ಕೆ ಒಳಗಾಗುವುದು ಒಳ್ಳೆಯದಲ್ಲ. 

– ಕಿರಿ ಕಿರಿ ಎನಿಸುವ ವ್ಯಕ್ತಿಗಳ ಸಂಪರ್ಕವನ್ನು ಬ್ಲಾಕ್‌ ಮಾಡಿ.

– ಪದೇಪದೆ ಚಾಟ್‌ಗೆ ಆಹ್ವಾನಿಸುವ, ಅಶ್ಲೀಲ ಮಾತಾಡುವ, ಸಂದೇಶಗಳನ್ನು ಕಳುಹಿಸುವವರ ಚಾಟಿಂಗ್‌ ಹಿಸ್ಟರಿ ಸಮೇತ ಸೈಬರ್‌ ವಿಭಾಗಕ್ಕೆ ದೂರು ನೀಡಿ.

– ವೈಯಕ್ತಿಕ ಮಾಹಿತಿ ಹರಿಬಿಡುವುದು, ಚಲ್ಲುಚಲ್ಲಾಗಿ ವರ್ತಿಸುವುದು, ಕೆರಳಿಸುವ ಫೋಟೋಗಳನ್ನು ಹಾಕುವುದಕ್ಕೆ ಒಂದು ಮಿತಿ ಹಾಕಿಕೊಳ್ಳಿ. 

ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.