ಸೌಲಭ್ಯ ವಂಚಿತ ಗಡಿಭಾಗ
Team Udayavani, Aug 15, 2017, 11:31 AM IST
ಚಿಂಚೋಳಿ: ತಾಲೂಕಿನ ಗಡಿಭಾಗ ತೆಲಗಾಂಣಕ್ಕೆ ಹೊಂದಿಕೊಂಡಿರುವ ತಾಲೂಕಿನ ಕುಂಚಾವರಂ ವ್ಯಾಪ್ತಿಯಲ್ಲಿ ಬರುವ ಗಡಿ ಗ್ರಾಮಗಳಲ್ಲಿ ವಾಸಿಸುವ ದಲಿತ ಮತ್ತು ಬುಡಕಟ್ಟು ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿವೆ. ತಾಲೂಕು ಕೇಂದ್ರ ಸ್ಥಾನದಿಂದ 40ಕಿಮೀ ದೂರದಲ್ಲಿ ಕುಂಚಾವರಂ, ವೆಂಕಟಾಪುರ, ಶಾದೀಪುರ ಗ್ರಾಮ ಪಂಚಾಯತ ಕೇಂದ್ರ ಸ್ಥಾನಗಳಿವೆ. ಕುಂಚಾವರಂ ಗಡಿಭಾಗದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಇರುವ ಮರಾಠಿಗರು, ಮಾದಿಗರು, ಕ್ರಿಶ್ಚಿಯನ್ರು, ದಾಸರು, ಬುಡಗ ಜಂಗಮರು ಹಾಗೂ ಬುಡಕಟ್ಟು ಜನಾಂಗದವರು ಈ ಭಾಗದಲ್ಲಿ ಅನೇಕ ತಲೆಮಾರಿನಿಂದ ವಾಸಿಸುತ್ತಾ ಬಂದಿದ್ದಾರೆ. ಕೆಲವರು ಕೂಲಿ ಕೆಲಸ ಮತ್ತು ಭಿಕ್ಷೆ ಭೇಡಿ ಸಂಸಾರ ನಡೆಸುವಂತಹ ಬಡ ಕುಟುಂಬಗಳು ಇಲ್ಲಿವೆ. 1993-94ರಲ್ಲಿ ಅ ಧಿಕಾರ ವಿಕೇಂದ್ರಿಕರಣ
ಆದ ನಂತರ ಗ್ರಾಮೀಣ ಜನರಿಗೆ ಸಿಗಬೇಕಾಗಿರುವ ಸೌಲಭ್ಯಗಳಾದ ಗೃಹ ನಿರ್ಮಾಣ, ಸಾಲ-ಸೌಲಭ್ಯ, ಹೈನುಗಾರಿಕೆ, ಪಶುಭಾಗ್ಯ, ಕೃಷಿಹೊಂಡ, ವಿಧವಾ ವೇತನ,ಅಂಗವಿಕಲ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಮೂಲ ಸೌಕರ್ಯ ಒದಗಿಸಬೇಕಾಗಿರುವುದು ಸರಕಾರ ಮತ್ತು ಜನಪ್ರತಿನಿಧಿ ಗಳ ಕರ್ತವ್ಯವಾಗಿದೆ. ಇಲ್ಲಿ ಕೆಳವರ್ಗದ ಜನರಿಗೆ ವಾಸಿಸುವುದಕ್ಕೆ ಪಕ್ಕಾ ಮನೆಗಳಿಲ್ಲ. ಇನ್ನು ಕೆಲವು ಕಡೆ ಗುಡಿಸಲು ಮನೆಗಳಲ್ಲಿಯೇ ಜನರು ವಾಸವಾಗಿದ್ದಾರೆ. ಗಡಿಭಾಗದ ತೆಲಗು ಭಾಷೆ ಮನೆ ಮಾತಾಗಿರುವದರಿಂದ ಕೆಲವರಿಗೆ ಕರ್ನಾಟಕ ರಾಜ್ಯ ಸರಕಾರದಿಂದ ಯಾವ ಯೋಜನೆಗಳಿವೆ ಎಂಬುದೇ ಜನರಿಗೆ
ಇನ್ನು ತಿಳಿಯುತ್ತಿಲ್ಲ. ಹೀಗಾಗಿ ದಲಿತ ವರ್ಗ, ದಾಸರ ಬುಡಗ ಜಂಗಮ ಮತ್ತು ಮರಾಠಿಗರು ಸೌಲಭ್ಯ ವಂಚಿತರಾಗಿದ್ದಾರೆ.
ಕುಂಚಾವರಂ ಗಡಿ ಪ್ರದೇಶದಲ್ಲಿ 17 ತಾಂಡಾ, 11 ಗ್ರಾಮಗಳಿವೆ. 30,561ಜನಸಂಖ್ಯೆ ಇದ್ದು, ಒಟ್ಟು 6,842 ಮನೆಗಳಿವೆ. ಕುಂಚಾವರಂ, ಮಗದಂಪೂರ, ಶಿವರಾಮಪೂರ, ಶಿವರೆಡ್ಡಿಪಳ್ಳಿ, ಪೋಚಾವರಂ, ಲಚಮಾಸಾಗರ, ಶಿವರೆಡ್ಡಿಪಲ್ಲಿ, ವಂಟಿಚಿಂತಾ, ಅಂತಾವರಂ, ಲಿಂಗಾನಗರ, ಬೋನಸಪುರ, ಜಿಲವರ್ಷ, ವೆಂಕಟಾಪುರ ಗ್ರಾಮಗಳಲ್ಲಿ ದಲಿತ ವರ್ಗದವರು ಇನ್ನು ಗುಡಿಸಲಲ್ಲೇ ಜೀವನ ಸಾಗಿಸುವಂತಾಗಿದೆ. ಸರಕಾರ ಗ್ರಾಪಂ ವತಿಯಂದ ರಾಜೀವ ಗಾಂಧಿ ವಸತಿ ಯೋಜನೆ, ಬಸವ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರಿಗೊಳಿಸುವಂತೆ ಆದೇಶಿಸಿದೆ. ಆದರೆ ಇಲ್ಲಿ ಹಣ ಕೊಟ್ಟವರಿಗೆ ಮನೆ ಮಂಜೂರಾಗುತ್ತದೆ. ಹಣ ಇಲ್ಲದವರನ್ನು
ಯಾರೂ ಕೇಳುವವರೇ ಇಲ್ಲದಂತಾಗಿದೆ. ದಲಿತ, ದಾಸರ, ಬುಡಗ ಜಂಗಮ ಜೀವನಮಟ್ಟ, ಆರ್ಥಿಕ ಸುಧಾರಣೆ ಯಾವಾಗ ಆಗುತ್ತದೆಯೋ ಎಂದು ಕಾಯ್ದು ನೋಡಬೇಕಿದೆ.
ಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ
ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.