ಆಲಮಟ್ಟಿ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಣೆ
Team Udayavani, Aug 19, 2017, 7:10 AM IST
ಬಾಗಲಕೋಟೆ: ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಾಗಿನ ಅರ್ಪಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಿದ ಈ ಬೃಹತ್ ಜಲಾಶಯದಲ್ಲಿ ಶುಕ್ರವಾರ 123 ಟಿಎಂಸಿ ಅಡಿ ನೀರು
ಸಂಗ್ರಹವಾಗಿತ್ತು. ಒಟ್ಟು 519.60 ಮೀಟರ್ (123 ಟಿಎಂಸಿ) ಸಾಮರ್ಥಯದ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು.
ಸಚಿವರಾದ ಎಂ.ಬಿ.ಪಾಟೀಲ ಹಾಗೂ ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್.ಪಾಟೀಲ, ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಜಯಪುರ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ ಮುಂತಾದವರು ಇದ್ದರು.
ಹಲವು ಶಾಸಕರ ಗೈರು: ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ, ನಾಗಠಾಣ ಶಾಸಕ ಪ್ರೊ. ರಾಜು ಆಲಗೂರ, ವಿಜಯಪುರ ನಗರ ಶಾಸಕ ಡಾ. ಮಕುಲ್ ಬಾಗವಾನ, ಮುದ್ದೇಬಿಹಾಳ ಶಾಸಕ ಹಾಗೂ ಸರ್ಕಾರದ ದೆಹಲಿ ಪ್ರತಿನಿಧಿ ಸಿ.ಎಸ್. ನಾಡಗೌಡ,ಕಾಂಗ್ರೆಸ್ ಬಂಡಾಯ ಶಾಸಕ -ದೇವರಹಿಪ್ಪರಗಿಯ ಎ.ಎಸ್. ಪಾಟೀಲ (ನಡಹಳ್ಳಿ), ಸಿಂದಗಿಯ ಬಿಜೆಪಿ ಶಾಸಕ ರಮೇಶ ಭೂಸನೂರ ಗೈರಾಗಿದ್ದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸಿದ್ದು ನ್ಯಾಮಗೌಡ, ಮುಧೋಳದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಗೈರಾಗಿದ್ದರು.
ಶಾಸಕರಿಗಾಗಿ ಕಾದರು ಸಿಎಂ!
ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ವೇಳೆ, ಶಾಸಕರ ಬರುವಿಕೆಗಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆಲ
ಸಮಯ ಕಾದು ನಿಂತ ಪ್ರಸಂಗ ನಡೆಯಿತು. ಬೆಳಗ್ಗೆ 11.40ಕ್ಕೆ ಹೆಲಿಕಾಪ್ಟರ್ ಆಲಮಟ್ಟಿಯ ಹೆಲಿಪ್ಯಾಡ್ಗೆ ಬಂದಿಳಿಯಿತು. ಅಲ್ಲಿ
ವಿಜಯಪುರ ಜಿಲ್ಲಾಡಳಿತದಿಂದ ಮುಖ್ಯಮಂತ್ರಿಗಳನ್ನು ಬರ ಮಾಡಿಕೊಳ್ಳಲಾಯಿತು. ಅಲ್ಲಿಂದ 12.15ಕ್ಕೆ ಸಿಎಂ ಆಲಮಟ್ಟಿ
ಜಲಾಶಯದ ಮೇಲೆ ಬಂದರೂ ಯಾವುದೇ ಸಚಿವರು, ಶಾಸಕರು ಬಂದಿರಲಿಲ್ಲ. ತಮ್ಮ ಕಾರಿನಲ್ಲಿದ್ದ ಜಲ ಸಂಪನ್ಮೂಲ ಸಚಿವರಿಗೆ “ಏ ಶಾಸಕರೆಲ್ಲ ಬರ್ಲಿ ಇರಪ್ಪಾ’ ಎಂದು ಸಚಿವ ಪಾಟೀಲರಿಗೆ ಹೇಳಿದ ಸಿಎಂ, ಸುಮಾರು ಮೂರು ನಿಮಿಷಗಳ ಕಾಲ ಕಾದರು. ಆಗ ಶಾಸಕರಾದ ವಿಜಯಾನಂದ ಕಾಶಪ್ಪನವರ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ,ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಸಚಿವೆ ಉಮಾಶ್ರೀ ಒಬ್ಬೊಬ್ಬರಾಗಿ ಬಂದರು. “ಏ ಶಾಸಕರು ಬೇಗ ಬರ್ರಪ್ಪಾ’ ಎಂದು ಸಿಎಂ ಕರೆಯುತ್ತಿದ್ದರು. ಎಲ್ಲರೂ ಬಂದ ಬಳಿಕ, ಬಾಗಿನ ಅರ್ಪಿಸಲು ವ್ಯವಸ್ಥೆ ಕಲ್ಪಿಸಿದ್ದ ಸ್ಥಳಕ್ಕೆ ಸಿಎಂ ಹೋದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.