ವೀಕೆಂಡ್‌ ವಿತ್‌ ಲಾಲ್‌ಬಾಗ್‌ ಭೋಜನ!


Team Udayavani, Sep 2, 2017, 3:12 PM IST

7.jpg

ಲಾಲ್‌ಬಾಗ್‌ ಎಂದರೆ ದುಂಬಿಗಳಿಗೆ ಭರ್ಜರಿ ಭೋಜನ ತಾಣ. ಅಲ್ಲಿ ಅರಳಿದ ಸಹಸ್ರಾರು ಬಗೆಯ ಹೂವುಗಳ ಮೇಲೆ ಕುಳಿತು, ಅವು ಮಕರಂದ ಹೀರುತ್ತಾ, ನಮಗ್ಯಾರಿಗೂ ಕೇಳದ ಸದ್ದಿನಲ್ಲಿ ತೇಗುತ್ತಾ ಇರುವುದನ್ನು ನೋಡುವುದೇ ಒಂದು ಚೆಂದ. ಆದರೆ, “ಅವನ್ನು ನೋಡಿ ನಮಗೇಕೆ ಹೊಟ್ಟೆಕಿಚ್ಚು? ನಾವೂ ಆ ಲಾಲ್‌ಬಾಗ್‌ಗೆ ಹೋಗಿ, ಆ ಮರಗಳ ಕೆಳಗೆ ಕುಳಿತು, ಭರ್ಜರಿ ಉಂಡು ಬರೋಣ’ ಎನ್ನುವ ಧ್ವನಿಯೊಂದು ಈಗೀಗ ಜೋರಾಗಿದೆ. ಅದು “ಉದ್ಯಾನ ಭೋಜನಪ್ರಿಯ’ರ ಉತ್ಸಾಹದ ಸ್ವರ.

ಹೌದು, ವೀಕೆಂಡಿನಲ್ಲಿ ಲಾಲ್‌ಬಾಗ್‌ ಕೇವಲ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿ ಮಾತ್ರವೇ ಉಳಿದಿಲ್ಲ. ಅದೀಗ ಭೋಜನಶಾಲೆ. ಅಲ್ಲಿ ಹೂವುಗಳ ಪರಿಮಳ ಮಾತ್ರ ಮೂಗಿಗೆ ತಾಕುವುದಿಲ್ಲ. ಬಗೆ ಬಗೆಯ ಖಾದ್ಯ, ಒಗ್ಗರಣೆಯ ಪರಿಮಳವೂ ಪ್ರವಾಸಿಗರ ಮೂಗನ್ನು ಅರಳಿಸುತ್ತದೆ. ಬೆಂಗಳೂರಿನ ಯಾವುದೇ ಫೈವ್‌ಸ್ಟಾರ್‌ ಹೋಟೆಲ್‌ ಕೊಡದ ಭೋಜನ ಸಂತೃಪ್ತಿ, ಲಾಲ್‌ಬಾಗ್‌ನ ವೀಕೆಂಡ್‌ ಭೋಜನದಲ್ಲಿ ಸಿಗುತ್ತದೆ!

ಅರೆ, ಇದೇನು ಅಂತೀರಾ? ಇಲ್ಲಿ ಕೇಳಿ… ವಾರಾಂತ್ಯದಲ್ಲಿ ಜನ ಇಲ್ಲಿಗೆ ಬಂದು, ಇಲ್ಲಿನ ಶಾಂತ ವಾತಾವರಣದಲ್ಲಿ ಕಾಲ ಕಳೆಯುತ್ತಾರೆ. ಮನೆಯಿಂದ ಕಟ್ಟಿಕೊಂಡ ಬಗೆಬಗೆಯ ಭಕ್ಷ್ಯಗಳ ಡಬ್ಬಿಗಳನ್ನು ತೆರೆದು, ಸ್ನೇಹಿತರೊಂದಿಗೆ, ಕುಟುಂಬದವರ ಜೊತೆ ಇಲ್ಲಿಯೇ ಊಟ ಸವಿಯುತ್ತಾರೆ. ಮಹಾನಗರದಲ್ಲಿ ಈ ಟ್ರೆಂಡ್‌ ಪ್ರತಿವಾರ ಹೆಚ್ಚಾಗುತ್ತಿದ್ದು, “ಉದ್ಯಾನ ಭೋಜನ’ ಅಂತಲೇ ಫೇಮಸ್ಸಾಗಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಇರುವ ವನಭೋಜನದಂತೆ ಇದು ಕೂಡ ಸಿಟಿಯಲ್ಲಿ ನಡೆಯುವ ವನಭೋಜನ! ಇಲ್ಲಿ ವನ ಕಾಣಸಿಗುವುದು ಅಪರೂಪವಾದರೂ, ಇರುವಂಥ ಮರಗಳ ಕೆಳಗೆ, ಅದೇ ಕಾಡೆಂದು ತಿಳಿದು, ಧ್ಯಾನಸ್ಥರಾಗುವ ಗುಣ ಮಹಾನಗರದ ಮಹಾಜನಕ್ಕೆ ದಕ್ಕಿದೆ.

ಏನಿದು ಉದ್ಯಾನ ಭೋಜನ?
ಉದ್ಯಾನ ಭೋಜನ ಎಂದರೆ, ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ಅಲ್ಲಿನ ಆ ವಾತಾವರಣದಲ್ಲಿ ಎಲ್ಲರೂ ಒಂದಾಗಿ ಆಹಾರವನ್ನು ಸವಿಯುವುದೇ ಆಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ವನಭೋಜನ ನಡೆಸುತ್ತಾರೆ. ಆದರೆ, ಇಲ್ಲಿ ಯಾರೂ ಅಂಥ ವಿಶೇಷ ಸಂದರ್ಭಗಳಿಗೆ ಕಾಯುವುದಿಲ್ಲ. ಶನಿವಾರ, ಭಾನುವಾರ ಬಂತೆಂದರೆ, ಬುತ್ತಿಗಳನ್ನು ಕೊಂಡೊಯ್ದು, ಅಲ್ಲಿ ಊಟ ಸವಿಯುತ್ತಾರೆ.

ಮುಖ ದರ್ಶನ ಭಾಗ್ಯ!
ಬೆಂಗಳೂರಿನ ಈ ಒತ್ತಡದ ಬದುಕಿನಲ್ಲಿ ಕುಟುಂಬದವರ ಮುಖ ನೋಡುತ್ತಾ, ಊಟ ಮಾಡುವುದೇ ಕಡಿಮೆಯಾಗಿದೆ. ಅಂಥದ್ದರಲ್ಲಿ ಉದ್ಯಾನ ಭೋಜನ ಈ ಮುಖದರ್ಶನ ಭಾಗ್ಯವನ್ನೂ ಕಲ್ಪಿಸುತ್ತಿದೆ. ಅಲ್ಲದೇ, ಇಲ್ಲಿ ಮನೆಯ ಹಿರಿಯರು ಕೈತುತ್ತು ಕೊಡುವ ದೃಶ್ಯಗಳನ್ನೂ ಕಾಣಬಹುದಾಗಿದೆ. ಗಿಡಮರಗಳ ಆ ತಂಪುಗಾಳಿ, ಹಕ್ಕಿಗಳ ಚಿಲಿಪಿಲಿ ಸದ್ದುಗಳು, ಉದ್ಯಾನ ಭೋಜನಕ್ಕಾಗಿಯೇ ಹಾಕಿದ ನಿಸರ್ಗದ ಸಂಗೀತ ಎಂಬಂತಿದೆ

ಲಾಲ್‌ಬಾಗ್‌ ಮಾತ್ರವಲ್ಲ!
ಅಂದಹಾಗೆ, ಉದ್ಯಾನ ಭೋಜನದ ಈ ಟ್ರೆಂಡ್‌ ಕೇವಲ ಲಾಲ್‌ಬಾಗ್‌ನಲ್ಲಿ ಮಾತ್ರವೇ ಕಾಣಸಿಗುವುದಿಲ್ಲ. ಕಬ್ಬನ್‌ ಪಾರ್ಕ್‌, ಜೆ.ಪಿ. ಪಾರ್ಕ್‌, ಜಿಂಕೆ ಪಾರ್ಕ್‌ಗಳಲ್ಲೂ ಇಂಥ ದೃಶ್ಯಗಳು ಸಾಮಾನ್ಯವಾಗಿರುತ್ತವೆ. ಕೆಲಸದೊತ್ತಡವನ್ನು ಮರೆಯುತ್ತಾ, “ನಗುವೇ ಈ ನಗರಿಯ ನಗದು ಬಹುಮಾನ’ ಎಂಬಂಥ ಖುಷಿಯಲ್ಲಿ ಎಲ್ಲರೂ ತೇಲುತ್ತಿರುತ್ತಾರೆ. ಅನೇಕ ಸಲ ಮಳೆಗೂ ಅಂಜದೇ, ಈ ಉದ್ಯಾನ ಭೋಜನ ಭರ್ಜರಿಯಾಗಿ ಸಾಗುವುದನ್ನು ನೀವು ನೋಡಬಹುದು.

ವಾರಾಂತ್ಯದಲ್ಲಿ ಲಾಲ್‌ಬಾಗ್‌ ವಿಶೇಷವಾಗಿ ಕಳೆಗಟ್ಟುತ್ತದೆ. ಆ ಎರಡು ದಿನ ಸುಮಾರು ಆರೇಳು ಸಾವಿರ ಜನರು ಬರುತ್ತಾರೆ. ಆದರೆ, ಈಗೀಗ ಅನೇಕ ಕುಟುಂಬಗಳು ಊಟದ ಡಬ್ಬಿಗಳನ್ನು ಮನೆಯಿಂದ ತಂದು, ಇಲ್ಲಿಯೇ ಸವಿಯುತ್ತಾರೆ.
– ಚಂದ್ರಶೇಖರ್‌, ಉಪನಿರ್ದೇಶಕರು, ಲಾಲ್‌ಬಾಗ್‌

ನಾವು ಲಾಲ್‌ಬಾಗ್‌ಗೆ ತಿಂಗಳಲ್ಲಿ ಒಮ್ಮೆಯಾದರೂ ಊಟ ಕಟ್ಟಿಕೊಂಡು ಬರುತ್ತೇವೆ. ಕುಟುಂಬದೊಡನೆ, ಈ ಹಸಿರ ನಿಸರ್ಗದ ನಡುವೆ, ಶಾಂತ ವಾತಾವರಣದಲ್ಲಿ ಊಟ ಸವಿಯುವ ಖುಷಿಯೇ ಬೇರೆ.
– ಪ್ರಭಾಕರ್‌, ಮಲ್ಲೇಶ್ವರಂ ನಿವಾಸಿ

ಸೌಮ್ಯಶ್ರೀ ಎನ್‌.

ಟಾಪ್ ನ್ಯೂಸ್

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.