ಗಾಟಾ ಲೂಪ್ಸ್‌  ಸುಳಿದು ಸುತ್ತುವ ಹಾದಿ


Team Udayavani, Sep 3, 2017, 6:30 AM IST

Gatta-Loops-Ladakh-Bike-Tour.jpg

ಹಿಮಾಚಲ ಪ್ರದೇಶದ ಲೇಹ್‌-ಮನಾಲಿಯ ದುರ್ಗಮ ಹಾದಿಯಲ್ಲಿ ಜೀವದ ಮೂಲವನ್ನೇ ಹಿಡಿದು ಗಲಗಲ ಅಲುಗಿಸಿ ನಡುಗಿಸುತ್ತ ಪಾತಾಳಕ್ಕೆ ಇಳಿಸುವ ದಾರಿಯಲ್ಲಿ ಎಂಬತ್ತು ಕಿ.ಮೀ. ಇಳಿದು ಸಾರ್ಚು ಎಂಬಲ್ಲಿ ಕಾರು ನಿಲ್ಲಿಸುವಾಗ ನಮ್ಮ ದೇಹದ ಕೀಲುಗಳೆಲ್ಲ ತಪ್ಪಿ ಹೋದಂತೆ ಅನಿಸಿತ್ತು. ಒಂದು ಟೆಂಟಿನೊಳಗೆ ನುಗ್ಗಿ ಕುಸಿದಾಗ ಅದೇ ಪರಿಚಿತ ತರುಣಿಯ ದನಿ ಕೇಳಿಸಿತು : ಮಮ್ಮಿà… ವೋ ಲೋಗ್‌ ಆಯಾ…

ಹಿನ್ನೆಲೆ ಇದು… ಮೂರು ದಿನಗಳ ಹಿಂದೆ ನಾನು, ನಂದಳಿಕೆಯ ವೀಕೆ, ಸಚ್ಚರಿಪೇಟೆಯ ಸತ್ಯಶಂಕರ, ಮತ್ತು ಸೊರಬದ ದಿನಕರ ಅದೇ ದಾರಿಯಲ್ಲಿ ಲಡಾಖ್‌, ಲೇಹ್‌, ಝಂಸ್ಕರ್‌ ಕಣಿವೆಗೆ ಹೋಗುವಾಗ ಅÇÉೇ ವಿಶ್ರಾಂತಿ ಪಡೆದಿ¨ªೆವು. ಇಬ್ಬರೇ  ಮಹಿಳೆಯರು… ಅಮ್ಮ, ಮಗಳು ! ಹೊರಡುವಾಗ “ಥ್ಯಾಂಕ್ಸ್‌ ಆಂಟೀ…’ ಅಂತ ಮಗಳ ಬಳಿ ಹೇಳಿದ್ದು ಅವಳನ್ನು ಕೆರಳಿಸಿತ್ತು. “ಕ್ಯಾ? ಮೈ ಆಂಟೀ?’ ಅಂತ ಕೆರಳಿದ್ದಳು! ನಗುತ್ತ ಹೊರಟಾಗ ಸತ್ಯಶಂಕರರ ಶಾಲನ್ನು ಮರೆತು ಅÇÉೇ ಬಿಟ್ಟಿ¨ªೆವು. ಅದೇ ದಾರಿಯಲ್ಲಿ ಮರಳುವಾಗ  ಬಂದೇ ಬರುತ್ತಾರೆ ಎಂದು ಅವರು ನಿರೀಕ್ಷಿಸಿರಬೇಕು. 
ಗಂಟೆ ಆರೂವರೆಯಾಗಿತ್ತು. ಅಸಾಧ್ಯ ಚಳಿ. ಸಾಲದೆಂಬಂತೆ ವೀಕೆಗೆ ಜ್ವರ. ಅಲ್ಲಿಂದ ಮುಂದಿನ ಕ್ಯಾಂಪ್‌ ಭರತಪುರಕ್ಕೆ ನಲುವತ್ತು ಕಿ.ಮೀ. ಸಾಗಬೇಕು. ಕಷ್ಟ ಅನಿಸಿ ಅÇÉೇ ಉಳಿದುಕೊಂಡೆವು. ಟೆಂಟು ಅಂದರೆ ಸಾಲಾಗಿ ದಪ್ಪದಪ್ಪನೆಯ ಹಾಸಿಗೆಗಳು. ಒಬ್ಬರಿಗೆ ಒಂದು ರಾತ್ರಿ ಮಲಗಲು ಇನ್ನೂರೈವತ್ತು ರೂಪಾಯಿ. ಹೊದೆಯಲು ಐದಾರು ಹಾಸುಗಳು.

ರಾತ್ರಿಯ ಸಣ್ಣ ಊಟ ಮುಗಿಸಿ ಮಲಗಲು ಅಣಿಯಾದಂತೆ ಇಬ್ಬರು ಬೈಕಿನಲ್ಲಿ ಬಂದು ಚಹಾ ಕೇಳಿದರು. ನಾವು ಬಂದಿದ್ದ ದಾರಿಯÇÉೇ ಅವರೂ ಬಂದಿದ್ದರು. ಅವರು ಹೇಳಿದ ಸುದ್ದಿ ಕೇಳಿ ನಡುಕ ಉಂಟಾಯಿತು… ತಗ್ಲಂಗ್ಲಾ ಟಾಪ್‌ನಿಂದ ಪಾಂಗ್‌ಗೆ ಇಳಿಯುವ 69 ಕಿ.ಮೀ. ಉದ್ದದ ತಿರುವುಗಳಲ್ಲಿ ಅವರ ಕಣ್ಣೆದುರೇ ಒಂದು ಟಾಟಾ ಸುಮೋ ಕಣಿವೆಗೆ ಉರುಳಿತಂತೆ! ಅದರಲ್ಲಿದ್ದ ಇಬ್ಬರು ಕೆಳಗೆ ಹಾರುವುದನ್ನು ಇವರು ನೋಡಿದ್ದರು. ಉಳಿದವರ ಬಗ್ಗೆ ಗೊತ್ತಿಲ್ಲ, ಬದುಕಿ ಉಳಿಯಲಿಕ್ಕಿಲ್ಲ ಎಂದರು. ನಾವು ಅದೇ ದಾರಿಯಲ್ಲಿ ಸ್ವಲ್ಪ ಮೊದಲು ಬಂದವರು !

ಮಲಗುವ ಮುಂಚೆ ಟೆಂಟಿನ ಒಡತಿ ನಮ್ಮ ಸಾರಥಿ ಟೀಕಾ ಶರ್ಮನೊಡನೆ ಹೇಳಿದ್ದು ಕೇಳಿಸಿತು, “”ಗಾಟಾ ಲೂಪ್ಸ್‌  ಕೈಸಾ ಹೈ? ವೋ ಮಿಲಾ?”

ಈ ಘಟನೆ ನಮಗೆ ತಿಳಿದದ್ದು ಹಾಗೆ. ತಗ್ಲಂಗ್ಲಾ ಟಾಪ್‌ 17,500 ಅಡಿಯಿಂದ ಪಾಂಗ್‌ವರೆಗಿನ 69 ಕಿ.ಮೀ. ದುರ್ಗಮ ಹಾದಿಯಲ್ಲಿ ನಕೀಲಾ ಪಾಸ್‌, ಲೇ ಚುಂಗ್‌ ಪಾಸ್‌ ಮತ್ತು ಗಾಟಾ ಲೂಪ್ಸ್‌ ಎಂಬ ಗಂಟು ದಾರಿಗಳಿವೆ. ಪಾಂಗ್‌ನಿಂದ ನೇರ ಮೇಲೆ ನೋಡಿದರೆ ಕಾಣುವುದು ಪರ್ವತಗಳ ಮೈಗಳಲ್ಲಿ ಅಡ್ಡಡ್ಡ ಗೀರುಗಳು ಮಾತ್ರ. ಅದೇ ಮನಾಲಿ-ಲೇಹ್‌ ದಾರಿ ಅಂತ ನಮಗೆ ಮತ್ತೆ ತಿಳಿಯಿತು. 22 ಕಡಿದಾದ ತಿರುವುಗಳಿರುವ ಗಾಟಾ ಕಗ್ಗಂಟು ಆ ದಾರಿಯನ್ನು ಹಿಡಿದು ಹುಚ್ಚುಹುಚ್ಚಾಗಿ ತಿರುವಿ ಗಂಟು ಹಾಕಿದಂತಿದೆ. ಹಾಗಾಗಿ ಇದಕ್ಕೆ ಲೂಪ್ಸ್‌ ಅಂತ ಹೆಸರು. ಕಾರಿನಲ್ಲಿ ಬರುವಾಗ ಕೆಳಗೆ ನೋಡಿದರೆ ಕಣ್ಣು ಕತ್ತಲೆ ಬರುತ್ತದೆ. ಈ ಕಗ್ಗಂಟಿನ ದಾರಿಯಲ್ಲಿ ಒಂದು ಕಡೆ ಮೂರು ಸುತ್ತ ಕಲ್ಲುಗಳನ್ನು ಒಟ್ಟಿ ಅದರ ಸುತ್ತ ನೂರಾರು ನೀರಿನ ಬಾಟಿÉಗಳನ್ನು ಎಸೆದಿದ್ದನ್ನು ನಾವು ಕಂಡಿ¨ªೆವು. ಅದು ಪ್ಲಾಸ್ಟಿಕ್‌ ಬಾಟಿÉ ಎಸೆಯುವ ಜಾಗ ಎಂದುಕೊಂಡಿ¨ªೆ.

ಆಗ ಆಕೆ ಹೇಳಿದ ಗಾಟಾ ಲೂಪ್ಸಿನ ಘಟನೆ ಇದು. ಹಲವು ವರ್ಷಗಳ ಹಿಂದೆ ಅಕ್ಟೋಬರ್‌ನ ಕೊನೆಯಲ್ಲಿ ಒಂದು ಟ್ರಕ್‌ ರೊಹrಂಗ್‌ ಪಾಸ್‌ ದಾಟಿ ಲೇಹ್‌ ಕಡೆಗೆ ಹೊರಟಿತ್ತು. ಸಾಮಾನ್ಯವಾಗಿ ಮನಾಲಿ-ಲೇಹ್‌ ದಾರಿ ಅಕ್ಟೋಬರ್‌ನಿಂದ ಮಾರ್ಚ್‌ ವರೆಗೆ ಹಿಮದಿಂದ ಮುಚ್ಚಿರುತ್ತದೆ. ಆದರೆ, ಆ ದಿನ ಅವರು ಲೇಹ್‌ ಸೇರಲೇಬೇಕಾಗಿತ್ತು. ಡ್ರೈವರ್‌ ಮತ್ತು ಕ್ಲೀನರ್‌ ಇಬ್ಬರೇ. ಹಿಮಪಾತ ಶುರುವಾಗಿತ್ತು. ಸಾರ್ಚು ದಾಟಿ ಪಾಂಗ್‌ಗೆ ಬರುವಾಗ ಗಾಟಾಲೂಪ್ಸ್‌ನಲ್ಲಿ ಟ್ರಕ್‌ ಕೆಟ್ಟು ನಿಂತಿತು. ಕ್ಲೀನರ್‌ ಹಿಂದಿನ ಚಕ್ರಗಳಿಗೆ ಕಲ್ಲಿಡಲು ಹೋದಾಗ ಟ್ರಕ್‌ ಹಿಂದೆ ಜಾರಿ ಅವನ ಕಾಲುಗಳ ಮೇಲೆ ಚಲಿಸಿತು.

ಅವನನ್ನು ಕ್ಯಾಬಿನ್‌ನಲ್ಲಿ ಕೂರಿಸಿ ಹತ್ತಿರದ ಹಳ್ಳಿಯಿಂದ ಸಹಾಯ ಪಡೆಯಲು ಹೋದ ಡ್ರೈವರ್‌ ನಲುವತ್ತು ಕಿ.ಮೀ. ನಡೆದ ನಂತರ ಅವನಿಗೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ನೀರು ಆಹಾರ ಪಡೆದು ವಾಪಸ್‌ ಹೊರಟಾಗ ಭಯಂಕರ ಹಿಮಪಾತ ಶುರುವಾಯಿತು. ಏಳು ದಿನ ಅಲ್ಲಿಂದ ಹೊರಡಲಾಗಲಿಲ್ಲ. ಎಂಟನೆಯ ದಿನ ಹಳ್ಳಿಗರೊಂದಿಗೆ ಅಲ್ಲಿಗೆ ಮರಳಿದಾಗ ಆ ಬಡಪಾಯಿ ಕ್ಲೀನರ್‌ ಅನ್ನ-ನೀರಿಲ್ಲದೆ ಚಳಿಯಲ್ಲಿ ನಡುಗುತ್ತ ಸತ್ತೇಹೋಗಿದ್ದ. ಅÇÉೇ ಅವನ ಹೆಣವನ್ನು ಸುಟ್ಟುಹಾಕಿದರು.

ಕತೆ ಇಲ್ಲಿಗೆ ಮುಗಿಯಲಿಲ್ಲ. ಕೆಲವು ಸಮಯದ ನಂತರ ಗಾಟಾ ಲೂಪ್ಸ್‌ನಲ್ಲಿ ಸಾಗುವ ವಾಹನಗಳನ್ನು ಅದೇ ಜಾಗದಲ್ಲಿ ಒಬ್ಬ ನಿಲ್ಲಿಸಿ ನೀರು ಮತ್ತು ಸಿಗರೇಟ್‌ ಕೇಳತೊಡಗಿದನಂತೆ. ಕೈಗೆ ನೀರು ಹಾಕಿದಾಗ ಅದು ಬೊಗಸೆಯಿಂದ ಇಳಿದು ಹೋಗುತ್ತಿತ್ತಂತೆ. ಅದು ಅವನ ದೆವ್ವ ಅಂತ ವದಂತಿ ಹಬ್ಬಿತು. ಈಗ ನೀರಿನ ಬಾಟಿÉಗಳನ್ನು ನಾವು ಕಂಡಲ್ಲಿ ಯಾರೂ ವಾಹನ ನಿಲ್ಲಿಸುವುದಿಲ್ಲ. ನೀರ ಬಾಟಲಿ ಎಸೆದು ಹೋಗ್ತಾರೆ.

ಘಟಸರ್ಪದಂತಹ ಈ ದೆವ್ವಪೀಡಿತ ಗಾಟಾಲೂಪ್ಸ್‌ನ ಕತೆ ಮೊದಲೇ ನಮಗೆ ಗೊತ್ತಿದ್ದರೆ ಅಲ್ಲಿ ಇಳಿದು ನೋಡಬಹುದಾಗಿತ್ತು. ಆದರೂ ಸಾವು ಬಾಯ್ದೆರೆದು ಆಕಳಿಸುತ್ತಿರುವಂತಹ ಪ್ರಪಾತ, ಸುತ್ತ ಹೆಪ್ಪುಗಟ್ಟಿರುವ ಹಿಮರಾಶಿ, ಜನವಿಹೀನ ಕಣಿವೆಗಳಲ್ಲಿ ಸಿಂಧೂ ಝಂಸ್ಕರ್‌ ನದಿಗಳ ಮೊರೆತ… ಇವೆಲ್ಲವನ್ನು ಬದುಕಿನಲ್ಲಿ ಒಮ್ಮೆಯಾದರೂ ಅನುಭವಿಸಬೇಕು!

– ಬಿ. ಸೀತಾರಾಮ ಭಟ್‌

ಟಾಪ್ ನ್ಯೂಸ್

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

Shobha Gasti: ಬೆಂಕಿಯಲ್ಲಿ ಅರಳಿದ ಹೂವು; ದೇವದಾಸಿಯರ ಹಾಡು ಪಾಡು

River: ನದಿಯೇ ಜೀವನ ಸಾಕ್ಷಾತ್ಕಾರ!

River: ನದಿಯೇ ಜೀವನ ಸಾಕ್ಷಾತ್ಕಾರ!

20

J. B. Shruti Sagar: ಏಕಾಗ್ರತೆಗೆ ಭಂಗ ತರುವ ಏನನ್ನೂ  ಬಳಸಿದರೂ ಸಾಧನೆಗೆ ತೊಡಕೇ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.