ಎಚ್‌ಡಿಕೆ, ಡಿಕೆಶಿ, ಅಶೋಕ್‌ ಯಾರಾದ್ರೂ ಸಿಎಂ ಆಗಿ


Team Udayavani, Sep 3, 2017, 6:15 AM IST

2BNP-(2).jpg

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌,ಆರ್‌.ಅಶೋಕ್‌ ಯಾರಾ ದರೂ ಮುಖ್ಯ ಮಂತ್ರಿ ಆಗಲಿ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಈ ಮೂಲಕ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಪರೋಕ್ಷ ಸಂದೇಶ ರವಾನಿ ಸಿದ್ದಾರೆ.

ಜತೆಗೆ,ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ನಿಮ್ಮನ್ನೆಲ್ಲ ಬಿಡುತ್ತಾರೆಂದು ತಿಳಿದುಕೊಳ್ಳಬೇಡಿ. ನಾನು ಅನುಭವಿಸಿದ್ದನ್ನು ಹೇಳುತ್ತಿದ್ದೇನೆ.ನಾವು ಎರಡನೇ ದರ್ಜೆಯಲ್ಲಿದ್ದೇವೆ.ಮೊದಲ ದರ್ಜೆಗೆ ಹೋಗೋಕೆ ನಮ್ಮನ್ನು ಬಿಡುವುದಿಲ್ಲ,ಆದರೆ, ಪ್ರಯತ್ನ ಬಿಡಬಾರದು ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಕೃಷಿಕ್‌ ಸರ್ವೋದಯ ಫೌಂಡೇಶನ್‌ ನಗರದ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌, ಆರ್‌.ಅಶೋಕ್‌ ಯಾರಾದರೂ ಮುಖ್ಯಮಂತ್ರಿಯಾಗಲಿ. ಅವರವರ ಹಣೆಬರಹ ಹೇಗಿದೆಯೋ ಹಾಗೆ ಆಗಲಿ ಎಂದರು. ಆಗ ವೇದಿಕೆಯಲ್ಲಿದ್ದ ಸಚಿವ ಶಿವಕುಮಾರ್‌ ಕೈ ಜೋಡಿಸಿ ನಮಸ್ಕರಿಸುತ್ತಾ ಮುಗುಳ್ನಕ್ಕರು.
ಇದೇ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ಸನ್ಮಾನಿ ಸುವಾಗಹಾರ ಹಾಕಿದ ಶಿವಕುಮಾರ್‌ ಅವರು ಗೌಡರ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷ.

ನಂತರ ತಮ್ಮ ಭಾಷಣದಲ್ಲಿ ದೇವೇಗೌಡರನ್ನು ಹೊಗಳಿದ ಡಿ.ಕೆ.ಶಿವಕುಮಾರ್‌,ದೇವೇಗೌಡರು ಸಾಧನೆ ಮಾಡಿ ಪ್ರಧಾನಿ ಸ್ಥಾನ ಪಡೆದರು. ಇದು ಅಷ್ಟು ಸುಲಭದ ಅಲ್ಲ.ಅವರು ಅಷ್ಟು ದೊಡ್ಡ ಸ್ಥಾನ ಅಲಂಕರಿಸಲು ಎಷ್ಟು ಉಳಿ ಏಟು ತಿಂದಿರ ಬಹುದು, ಎಷ್ಟೆಲ್ಲಾ ತೊಂದರೆ ಎದುರಿಸಿದ್ದಾರೋ ಅವರಿಗೇ ಗೊತ್ತು, 50 ವರ್ಷದ ರಾಜ ಕಾರಣದಲ್ಲಿ ಎಷ್ಟೆಲ್ಲಾ ಸಮಸ್ಯೆ ಅನುಭವಿಸಿರಬೇಕು ಎಂದು ಹೇಳಿದರು.

ನಾನು ಮೂವತ್ತು ವರ್ಷಗಳಿಂದ ರಾಜ ಕಾರಣ ಮಾಡುತ್ತಿದ್ದೇನೆ. ನನಗೂ ಎಲ್ಲ ರೀತಿ ಪೆಟ್ಟು ಬಿದ್ದಿವೆ. ಉಳಿ ಏಟು, ಅಗರಿ ಏಟು ಬಿದ್ದಿವೆ. ನಾನಾಗಿರೋದಕ್ಕೆ ಏಟು ತಿಂದ್ರೂ ಇಲ್ಲಿ ನಿಂತಿದ್ದೇನೆ. ಬೇರೆ ಯವರಾಗಿದ್ದರೆ ಏನಾಗುತ್ತಿತ್ತು. ದೇವೇ ಗೌಡರು ಮಾರ್ಮಿಕವಾಗಿ ಮಾತನಾಡಿದರು, ಇದರ ಬಗ್ಗೆ ನಾನು ಮಾತಾಡಿದ್ರೆ ಬೆಳಗ್ಗೆಯೇ ದೊಡ್ಡ ಸುದ್ದಿ ಆಗುತ್ತದೆ. ನನ್ನ ಕಷ್ಟದಲ್ಲಿ ಎಲ್ಲರೂ ನಿಂತಿದ್ದೀರಿ ಎಲ್ಲರಿಗೂ ಧನ್ಯವಾದಗಳು ಎಂದು ದೇವೇಗೌಡರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಸತಿ ಎಂ.ಕೃಷ್ಣಪ್ಪ , ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ,  ನಿವೃತ್ತ ಉಪಲೋಕಾಯುಕ್ತ ನ್ಯಾ. ಚಂದ್ರಶೇಖರಯ್ಯ, ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ಫೌಂಡೇಷನ್‌ ಅಧ್ಯಕ್ಷ ಡಾ.ವೈ.ಕೆ.ಪುಟ್ಟಸೋಮೇಗೌಡ, ಕಾರ್ಯದರ್ಶಿ ಎನ್‌.ಸಂಪಂಗಿ ಇತರರು ಉಪಸ್ಥಿತರಿದ್ದರು.

ಜೀವನದ ಕೊನೆಯ ದಿನಗಳಲ್ಲಿ ಒಕ್ಕಲಿಗ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸುತ್ತಿದ್ದೇನೆ. ಕಾವೇರಿ ಕಣಿವೆ ವ್ಯಾಪ್ತಿಯ ಪ್ರದೇಶದಲ್ಲಿನ ಎರಡೂವರೆ ಕೋಟಿ ಜನರ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.
-ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಟಾಪ್ ನ್ಯೂಸ್

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ

1-aree

Deepavali; ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

DK SHI NEW

Bengaluru; ಅನಧಿಕೃತ ಕಟ್ಟಡಗಳೆಲ್ಲ ನೆಲಸಮ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

1-a-rohit-bg

Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ

Adulltrate-Milk

Adulterate: ಕಲಬೆರಕೆ ಹಾಲು ಮಾರಾಟಗಾರರ ಬಂಧಿಸಿದ ಪೊಲೀಸರು

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aree

Deepavali; ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

DK SHI NEW

Bengaluru; ಅನಧಿಕೃತ ಕಟ್ಟಡಗಳೆಲ್ಲ ನೆಲಸಮ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

Belekeri Port Scam: ಏನಿದು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ; ಶಾಸಕ ಸೈಲ್‌ ಪಾತ್ರವೇನು?

Belekeri port scam:

Belekeri scam: ಶಾಸಕ ಸತೀಶ್‌ ಸೈಲ್‌ ಗೆ ಭಾರಿ ಜೈಲು ಶಿಕ್ಷೆ ಪ್ರಕಟ; ಶಾಸಕ ಸ್ಥಾನ ರದ್ದು?

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Ajekar: ಗೂಡ್ಸ್ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar: ಗೂಡ್ಸ್ ವಾಹನ ಢಿಕ್ಕಿ; ಪಾದಚಾರಿ ಸಾವು

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ

1-aree

Deepavali; ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

Mangaluru: ಮಿನಿ ಬಸ್‌ ಪಲ್ಟಿ; 10ಕ್ಕೂ ಅಧಿಕ ಮಂದಿಗೆ ಗಾಯ

Mangaluru: ಮಿನಿ ಬಸ್‌ ಪಲ್ಟಿ; 10ಕ್ಕೂ ಅಧಿಕ ಮಂದಿಗೆ ಗಾಯ

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.