ಡೇರಾ ಒಳಗೆ ತಾಜ್ಮಹಲ್, ಡಿಸ್ನಿ ಲ್ಯಾಂಡ್, ಐಫೆಲ್ ಟವರ್
Team Udayavani, Sep 6, 2017, 4:01 PM IST
ಸಿರ್ಸಾ : ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ತನ್ನ ವೈಭವೋಪೇತ ಜೀವನಕ್ಕೆ ಎಷ್ಟು ಹೆಸರುವಾಸಿಯಾಗಿದ್ದ ಎನ್ನುವುದಕ್ಕೆ 700 ಎಕರೆ ವಿಸ್ತೀರ್ಣದ ಆತನ ಡೇರಾ ಸಂಕೀರ್ಣದೊಳಗೆ ಆತನ ತಾಜ್ ಮಹಲ್, ಐಫೆಲ್ ಟವರ್, ಡಿಸ್ನಿ ಲ್ಯಾಂಡ್ಗಳನ್ನೇ ನಿರ್ಮಿಸಿರುವುದೇ ಸಾಕ್ಷಿಯಾಗಿದೆ.
ಗುರ್ಮಿತ್ ಸಿಂಗ್ ತನ್ನ ಡೇರಾ ಸಂಕೀರ್ಣದೊಳಗೆ ತನ್ನದೇ ಸಂಸ್ಥಾನವನ್ನು ನಿರ್ಮಿಸಿಕೊಂಡಿದ್ದ; ಅಲ್ಲಿ ತನ್ನದೇ ಕಾನೂನು, ತನ್ನದೇ ಕರೆನ್ಸಿಗಳನ್ನು ಚಾಲ್ತಿಗೆ ತಂದಿದ್ದ; ಜಗತ್ತಿನ ಏಳು ಮಹಾ ಅದ್ಭುತಗಳನ್ನು ತನ್ನ ಡೇರಾ ಸಂಕೀರ್ಣದೊಳಗೆ ನಿರ್ಮಿಸಲು ಯತ್ನಿಸಿದ್ದ.
ಮೊಘಲರ ಆಸ್ಥಾನವನ್ನು ನಾಚಿಸುವ ರೀತಿಯಲ್ಲಿ ಗುರ್ಮಿತ್ ತನ್ನ ವೈಭವದ ಆಸ್ಥಾನವನ್ನು ನಿರ್ಮಿಸಿಕೊಂಡಿದ್ದ. ಸುಂದರವಾದ ಐಷಾರಾಮಿ ಅರಮನೆಗಳನ್ನು ನಿರ್ಮಿಸುವ ಹುಚ್ಚು ಆತನಿಗಿತ್ತು. ಆತನ ಡೇರಾ ಸಂಕೀರ್ಣದೊಳಗೆ ಬೃಹತ್ ಗಾತ್ರದ ಹಡಗಿನ ಪ್ರತಿಕೃತಿಯೊಂದು ಕೂಡ ಎಲ್ಲರ ಆಕರ್ಷಣೆ ಪಾತ್ರವಾಗಿತ್ತು.
ಗುರ್ಮಿತ್ ಸಿಂಗ್ನ ಡೇರಾ ಸಂಕೀರ್ಣದ ಪ್ರಧಾನ ಪ್ರವೇಶ ದ್ವಾರವು ಹಲವಾರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಕಾಣಿಸುವ ದೊಡ್ಡ ಗೋಡೆಯೊಂದನ್ನು ಹೊಂದಿದೆ. ಇದು ಡೇರಾ ಸಂಕೀರ್ಣಕ್ಕೆ ಭೇಟಿಕೊಡುವವರನ್ನು ಅದ್ದೂರಿಯಾಗಿ ಸ್ವಾಗತಿಸುವಂತಿತ್ತು.
ಡೇರಾ ಸಂಕೀರ್ಣದೊಳಗೆ ಫಿಲ್ಮ್ ಸಿಟಿ ಕೂಡ ಇದೆ. ಆದರೆ ಅದು ಪೂರ್ಣಗೊಂಡಿಲ್ಲ. ಗುರ್ಮಿತ್ ತನ್ನ ಚಿತ್ರಗಳನ್ನು ಇಲ್ಲೇ ಶೂಟ್ ಮಾಡಿರುವುದು ಗಮನಾರ್ಹವಾಗಿದೆ. ಈ ಫಿಲ್ಮ್ ಸಿಟಿಯ ಗೇಟ್ಗಳಿಗೆ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಜೋಡಿಸಲಾಗಿದೆ. ಅನುಮತಿ ಇಲ್ಲದೆ ಯಾರಾದರೂ ಫಿಲ್ಮ್ ಸಿಟಿ ಪ್ರವೇಶಿಸಿದರೆ ಅವರು ವಿದ್ಯುದಾಘಾತಕ್ಕೆ ಗುರಿಯಾಗುವಂತಿತ್ತು.
ಡೇರಾ ಮುಖಸ್ಥನ ಸಿರ್ಸಾ ಡೇರಾ ಸಂಕೀರ್ಣದ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಸೋಜಿಗದ, ಚೋದ್ಯದ ಸಂಗತಿಗಳು ಹೊರ ಬೀಳುವ ಸೂಚನೆ ಇದೆ ಎಂದು ಪೊಲೀಸು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Punjab; ಆಮ್ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ..
Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್ ಸ್ಪೋರ್ಟ್ಸ್ ಮತ್ತೆ ಆರಂಭ
Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ
Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.