ನೂತನ ಸಂಸ್ಥೆ ಯಕ್ಷಗಾನದ ಗರಿಮೆ ಬೆಳಗುವಂತಾಗಲಿ:ಸಂತೋಷ್‌ ಶೆಟ್ಟಿ


Team Udayavani, Sep 13, 2017, 2:25 PM IST

12-Mum07a.jpg

ಪುಣೆ: ಯಕ್ಷಗಾನ ಕಲೆಯೆಂಬುದು ನಾವು  ಹುಟ್ಟಿ ಬೆಳೆದ ತುಳುನಾಡಿನ ಮಣ್ಣಿನ ಸಮೃದ್ಧ ಕಲೆಯಾಗಿದ್ದು ನಮ್ಮ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂತಹ ಪರಿಪೂರ್ಣವಾದ ನವರಸವಭರಿತ ಸುಂದರ ಕಲೆಯ ಬಗ್ಗೆ ಆಸ್ಥೆವಹಿಸಿ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿಯೊಂದಿಗೆ ಸದುದ್ದೇಶದ ಧರ್ಮ ಕಾರ್ಯವೆಂಬಂತೆ ಕಲಿಯುಗವರದ ಅಪ್ಪ ಸ್ವಾಮಿಯ ಹೆಸರಿನಲ್ಲಿ ಉದ್ಘಾಟನೆಗೊಂಡಿರುವ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯು ನಿಜವಾದ ಉದ್ದೇಶವನ್ನು ಈಡೇರಿಸಿಕೊಂಡು ಭವಿಷ್ಯದಲ್ಲಿ ಆದರ್ಶ ಸಂಸ್ಥೆಯಾಗಿ ರೂಪುಗೊಳ್ಳಲಿ. ನಿಜವಾದ ಕಾರ್ಯೋದ್ದೇಶದ ಹುಮ್ಮಸ್ಸಿನೊಂದಿಗೆ ಆರಂಭಗೊಂಡ ಈ ಸಂಸ್ಥೆ ಪುಣೆಯಲ್ಲಿ ಯಕ್ಷಗಾನದ ಕಂಪನ್ನು ಹರಡುತ್ತಾ ಹೊಸ ಹೊಸ ಕಲಾವಿದರುಗಳನ್ನು ತಯಾರುಗೊಳಿಸಿ ಕಲಾರಂಗವನ್ನು ಸಮೃದ್ಧಗೊಳಿಸುವಂತಾಗಲಿ. ಇಂತಹ ಉತ್ತಮವಾದ ಸಾಂಸ್ಕೃತಿಕ ಕಲಾವಂತಿಕೆಯ ಸೇವೆಗೆ ನಮ್ಮೆಲ್ಲರ ಹೃದಯಾಳಂತರಾಳದ ಸಹಕಾರವಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌  ಶೆಟ್ಟಿ ಇನ್ನ ಕುರ್ಕಿಲಬೆಟ್ಟು ಬಾಳಿಕೆ ಅವರು ನುಡಿದರು.

ಅವರು ಸೆ. 10  ರಂದು ಪುಣೆ ಕನ್ನಡ ಸಂಘದ ಡಾ| ಶಾಮರಾವ್‌  ಕಲ್ಮಾಡಿ ಕನ್ನಡ ಮಾಧ್ಯಮ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ಶ್ರೀ  ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಯಕ್ಷಗಾನ ರಂಗದ ಬೆಳವಣಿಗೆಗೆ, ಉಳಿವಿಗೆ ಕೊಡುಗೆ ನೀಡುವ ಯಾವುದೇ ಸಂಸ್ಥೆಗೆ ಪುಣೆ ಬಂಟರ ಸಂಘದಿಂದ ನಿರ್ಮಾಣಗೊಂಡ ಸಾಂಸ್ಕೃಕ ಬಂಟರ ಭವನವನ್ನು ಕಾರ್ಯಕ್ರಮ ಆಯೋಜಿಸಲು ಉಚಿತವಾಗಿ ನೀಡಲಾಗುವುದು. ನಮ್ಮ ನಾಡಿನ ಕಲಾ ಪ್ರಕಾರಗಳಿಗೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವೆ. ಇಂದು  ಆರಂಭಗೊಂಡ ಈ ಸಂಸ್ಥೆ ಭವಿಷ್ಯದಲ್ಲಿ ಪುಣೆಯಲ್ಲಿ ಆದರ್ಶ ಸಂಸ್ಥೆಯಾಗಿ ರೂಪುಗೊಳ್ಳಲಿ  ಎಂದು ನುಡಿದು ಶುಭ ಹಾರೈಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯನ್ನು ತನ್ನ ಅಮೃತ ಹಸ್ತದಿಂದ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಪುಣ್ಯಭೂಷಣ ಓಣಿಮಜಲು ಜಗನ್ನಾಥ ಬಿ. ಶೆಟ್ಟಿ ಅವರು ಮಾತನಾಡಿ, ಪುಣೆಯಲ್ಲಿರುವ ಯಕ್ಷಗಾನದ ಕಲಾವಿದರು ಒಗ್ಗಟ್ಟಿನಿಂದ ತಮ್ಮ ನಾಡಿನ ಸಾಂಸ್ಕೃತಿಕವಾದ ಪರಂಪರೆಯ ಪವಿತ್ರವಾದ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ, ಪೋಷಿಸುವ ಸತ್ಕರ್ಮದೊಂದಿಗೆ ಬಹಳ ಪ್ರಾಮಾಣಿಕವಾಗಿ ಚಿಂತನ ಮಂಥನ ನಡೆಸಿ ಆರಂಭಿಸಿರುವುದು ಬಹಳಷ್ಟು ಆನಂದದ ವಿಚಾರವಾಗಿದೆ. ಈ ಕಾರ್ಯಕ್ಕೆ ಮನಪೂರ್ವಕವಾಗಿ ಸ್ಪಂದಿಸಿ ಆಶೀರ್ವದಿಸುವ ಕರ್ತವ್ಯ ನನ್ನದೆಂದು ಭಾವಿಸಿ ಕಾರ್ಯಕ್ರಮಕ್ಕೆ ಆಗಮಿಸಿ ಹೃದಯತುಂಬಿ ಶುಭವನ್ನು ಹಾರೈಸಿ, ಈ ಸಂಸ್ಥೆ ಮುಂದಿನ ದಿನಗಳಲ್ಲಿ ತನ್ನ ಉದ್ದೇಶವನ್ನು ಈಡೇರಿಸುತ್ತ ಯಶೋಭಿವೃದ್ಧಿಯನ್ನು ಕಾಣುವಂತಾಗಲಿ ಎಂದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಕನ್ನಡ ಸಂಘದ  ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌ ಮಾತನಾಡಿ, ಪುಣೆಯಲ್ಲಿ ನಮ್ಮ ಸಂಸ್ಕೃತಿಯ ಹಿರಿಮೆ ಯಕ್ಷಗಾನದಂತಹ ಮನಮೋಹಕ ಕಲೆಯ ಬಗ್ಗೆ ಪ್ರೀತ್ಯಾಭಿಮಾನ ಬೆಳೆಸಿಕೊಂಡು ಅದನ್ನು ಪ್ರಚುರಪಡಿಸಿ ಬೆಳೆಸುವ ಕಾರ್ಯದ  ಸಂಕಲ್ಪವನ್ನು ವಹಿಸಿ ಇಂದು ಶುಭಾರಂಭಗೊಂಡಿರುವ ಈ ಸಂಸ್ಥೆ ತನ್ನ ಪ್ರಾಥಮಿಕ ಹಾದಿಯಲ್ಲೇ ಕಲಾಭಿಮಾನಿಗಳ ಹೃದಯವನ್ನು ಗೆದ್ದಿದೆ. ಯಾಕೆಂದರೆ ಇಂದು ಪ್ರಥಮ ಪ್ರದರ್ಶನದಲ್ಲೇ ಮಹಿಳಾ ಭಾಗವತೆ, ಮಹಿಳಾ ಚೆಂಡೆವಾದಕಿ ಸೇರಿದಂತೆ, ಸ್ತ್ರೀ ಪಾತ್ರಧಾರಿಗಳಿಗೊ ಶ್ರೇಷ್ಠ ಮಹಿಳಾ ಕಲಾವಿರದರನ್ನೂ ಸೇರಿಸಿಕೊಂಡು ಪುಣೆಯಲ್ಲಿ ಪ್ರಥಮ ಬಾರಿ ಇತಿಹಾಸ ನಿರ್ಮಿಸಿ ಉತ್ತಮ ಕಲಾಪ್ರದರ್ಶನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಸಂಘದ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಪುಣೆಯಲ್ಲಿ ಯಕÏಗಾನಕ್ಕೊಂದು ಅನ್ಯ ಸಂಸ್ಥೆ  ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿರುವ ಸಂಸ್ಥೆಯೇ ನಮ್ಮ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆ ಯಾವುದೇ ರಾಜಕೀಯ ವಿಚಾರಗಳಿಗೆ ಅಥವಾ ಪೈಪೋಟಿಯ ಆದ್ಯತೆಯ ಸಂಸ್ಥೆಯಾಗಿರದೆ ಯಕ್ಷಗಾನ ಕಲೆ  ನಿಂತ ನೀರಾಗಬಾರದು ಸದಾ ಪ್ರವಹಿಸುತ್ತಿದ್ದರೆ ಕಲೆಯ ಪಾವಿತ್ರÂತೆಯೊಂದಿಗೆ ಶುದ್ಧ ಭೂಮಿಕೆಯಲ್ಲಿ ಕಂಪನ್ನು ಸೂಸುತ್ತಿರಬಹುದಾಗಿದೆ. ನಾಲ್ಕಾರು ಹೆಸರಾಂತ ಕಲಾವಿದರನ್ನು  ಆಹ್ವಾನಿಸಿ ಯಕ್ಷಗಾನ ಪ್ರದರ್ಶಿಸಿ ಕಲಾಸೇವೆ ಮಾತುತ್ತೇವೆ ಎಂಬ ಅಹಂ ಭಾವವನ್ನು ಬಿಟ್ಟು ಕಲಾಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡ ಕಲಾವಿದರಿಗೆ ಯೋಗ್ಯ  ಗೌರವ, ಪ್ರೋತ್ಸಾಹ ಹಾಗೂ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಕೇವಲ ಪ್ರದರ್ಶನದಿಂದ ಯಕ್ಷಗಾನ ಉಳಿಯುವುದು ಅಸಾಧ್ಯವೆಂದು ಮನಗಂಡ ನಾವು ಹೊಸ ಹೊಸ ಕಲಾವಿದರುಗಳನ್ನು ತಯಾರುಗೊಳಿಸಿ ಯುವ ಪೀಳಿಗೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯ ನಮ್ಮದಾಗಿದೆ. ಇದು ಕಲಾಭಿಮಾನಿಗಳೆಲ್ಲರ ಆಶೋತ್ತರದಂತೆ ಉದ್ಘಾಟನೆಗೊಂಡಿದ್ದು ಭವಿಷ್ಯದಲ್ಲಿ ನಿಮ್ಮೆಲ್ಲರ ಸಂಸ್ಥೆ ಎಂಬ ನೆಲೆಯಲ್ಲಿ ಸಂಘವನ್ನು ಪ್ರೋತ್ಸಾಹಿಸಿ  ಬೆಳೆಸಿ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ  ಆನಂದ ಭಟ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಸಂಘ ಸ್ಥಾಪನೆಯಾಗಿಸಿದ  ಉದ್ದೇಶ, ಆಶಯ ಹಾಗೂ ಭವಿಷ್ಯದ ರೂಪರೇಷೆಗಳನ್ನು ವಿವರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್‌ ಹೆಗ್ಡೆ ಮಟ್ಟಾರ್‌ ಉಪಸ್ಥಿತರಿದ್ದರು. ಯಕ್ಷಗಾನ ರಂಗದ ಸಾಧಕ, ಹಿರಿಯ ಭಾಗವತ, ಸಾಹಿತಿ ಹಾಗೂ ಯಕ್ಷಗುರುಗಳಾದ ವಿಶ್ವವಿನೋದ ಬನಾರಿ ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ವಾಸು ಕುಲಾಲ್‌ ವಿಟ್ಲ, ಮದಂಗಲ್ಲು ಅಶೋಕ್‌ ಭಟ್‌, ನಯನಾ ಶೆಟ್ಟಿ, ಕಲ್ಲಾಡಿ ಶ್ರೀಧರ ಶೆಟ್ಟಿ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ವಿಕೇಶ್‌ ರೈ ಶೇಣಿ, ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ಚೇತನ್‌ ಶೆಟ್ಟಿ ಎಲಿಯಾಳ,  ಸುದರ್ಶನ್‌, ಯಾದವ ಬಂಗೇರ, ಸುಭಾಷ್‌  ರೈ ಕಾಟುಕುಕ್ಕೆ, ಯೋಗೀಶ್‌  ಗೌಡ ಬಂಟ್ವಾಳ ಅವರು ಅತಿಥಿಗಳನ್ನು ಸತ್ಕರಿಸಿದರು. ಊರಿನ ಹೆಸರಾಂತ ಕಲಾವಿದರು ಹಾಗೂ ಮಂಡಳಿಯ ಕಲಾವಿದರ ಸಮ್ಮಿಲನದೊಂದಿಗೆ ಕಾವ್ಯಶ್ರೀ ಅಜೇರು ಭಾವತಿಕೆಯಲ್ಲಿ ರತಿ ಮನ್ಮಥ ಪರಿಣಯ  ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಪ್ರಕಾಶ್‌  ಹೆಗ್ಡೆ ಮಟ್ಟಾರ್‌ ಸ್ವಾಗತಿಸಿದರು. ಸಂಘದ ಸದಸ್ಯೆ ವರ್ಷಾ ಯೋಗೇಶ್‌ ಗೌಡ ಸಮ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಇಂದಿನ ಈ ಕಾರ್ಯಕ್ರಮದ ಅಂಗವಾಗಿರಲು ಅಭಿಮಾನವೆನಿಸುತ್ತಿದೆ. ನಮ್ಮ ನಾಡಿನ ಗಂಡು ಕಲೆಯಾದ ಯಕ್ಷಗಾನದಂತಹ ಶ್ರೇಷ್ಠ ಕಲೆ ನಾಶವಾಗದಂತೆ ಕಾಳಜಿವಹಿಸಿ ಅದರ ಬೆಳವಣಿಗೆಯ ಹಿತದೃಷ್ಟಿಯ ಉದ್ದೇಶದಿಂದ ಕಲಾರಂಗವನ್ನು ಸ್ಥಾಪಿಸುವಲ್ಲಿ ಉತ್ಸಾಹ ತೋರಿದ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಾರ್ಯತತ್ಪರತೆ ಪ್ರಶಂಸನೀಯ. ಈ ಸಂಘಟನೆ ಕಲಾಪೋಷಕರ ಸಹಕಾರದೊಂದಿಗೆ ಭವಿಷ್ಯದಲ್ಲಿ ಉತ್ತಮವಾದ ಯಶಸ್ಸನ್ನು ಗಳಿಸಲಿ 
– ವಿಶ್ವನಾಥ ಡಿ. ಶೆಟ್ಟಿ (ಮಾಜಿ ಅಧ್ಯಕ್ಷರು : ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘ).

ನಮ್ಮ ಬಾಲ್ಯದಿಂದಲೇ ನಮ್ಮ ನಾಡಿನ ಹೆಮ್ಮೆಯ ಕಲೆಯನ್ನು ಸಾಂಸ್ಕೃತಿಕ ಶ್ರೀಮಂತಿಕೆ ಎಂಬಂತೆ ಆಸ್ವಾದಿಸಿಕೊಂಡು ಬಂದವರು ನಾವು. ಎಷ್ಟೋ ವರ್ಷಗಳ ಕಲಾವಿದರುಗಳ ತಪಸ್ಸಿನ ಫಲವೆಂಬಂತೆ ಇಂದಿಗೂ ಯಕ್ಷಗಾನ ಕಲೆಯು ಬೆಳೆದು ಬಂದದ್ದಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿಯನ್ನು ಗಳಿಸಿದೆ. ಇಂತಹ ಕಲೆಯ ಬಗ್ಗೆ ಒಲವುಳ್ಳ ಪುಣೆಯಲ್ಲಿರುವ ಕಲಾವಿದರ ಗಡಣ ಸಂಘಟನೆ ಸ್ಥಾಪಿಸುವುದರ ಮೂಲಕ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ 
– ನಾರಾಯಣ ಕೆ. ಶೆಟ್ಟಿ (ಅಧ್ಯಕ್ಷರು : ಬಂಟ್ಸ್‌ ಅಸೋಸಿಯೇಶನ್‌ ಪುಣೆ).

ನಾಡಿನ ಕಲಾಸೇವೆಯ ಹೆಸರಿನ ಈ ಸಂಸ್ಥೆ ಇಂದು ಉತ್ತಮವಾದ ಉದ್ದೇಶದಿಂದ ಇಂದಿನ ದಿನ  ಆರಂಭಗೊಂಡಿರುವುದು ಕಲಾರಂಗಕ್ಕೆ ಸಂದ ಕೊಡುಗೆಯಾಗಿದೆ. ಯಕ್ಷಗಾನದ ಅಳಿವು ಉಳಿವಿನ ಸಂದಿಗª ಪರಿಸ್ಥಿತಿಯಲ್ಲಿ ನಮ್ಮ ಸಂಸ್ಕೃತಿಯ ಜೀವಾಳದಂತಿರುವ ಯಕ್ಷಗಾನದ ಕಂಪನ್ನು ಹರಡುವ ಕಾರ್ಯ ಆಗುತ್ತಿರುವುದು ಹೆಮ್ಮೆಯೆನಿಸುತ್ತಿದೆ. ಈ ಸಂಸ್ಥೆ ಭವಿಷ್ಯದಲ್ಲಿ ಪುಣೆಯಲ್ಲಿ ಯಕ್ಷಗಾನದ ಭದ್ರ ಬುನಾದಿಯನ್ನು ನಿರ್ಮಿಸುತ್ತಾ ಸಾಂಸ್ಕೃತಿಕ ಕಲಾಸೇವೆಯ ರಾಯಭಾರಿಯಾಗಿ ಮುನ್ನಡೆಯಲಿ.  ಪುಣೆ ತುಳುಕೂಟದ ಸಹಕಾರ ಕಲೆಯ ಉಳಿವಿಗೆ ಸದಾ ಇದೆ 
– ತಾರಾನಾಥ ಕೆ. ರೈ ಮೇಗಿನಗುತ್ತು (ಅಧ್ಯಕ್ಷರು : ತುಳುಕೂಟ ಪುಣೆ).

ನಾನು ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ನೀಡಿರುವ ಈ ಗೌರವವನ್ನು ಹೊಣೆಗಾರಿಕೆಯ ಪ್ರಜ್ಞೆಯಿಂದ ಎಚ್ಚರದಿಂದ, ಪುಣೆಯ ಕಲಾಭಿಮಾನಿಗಳ ಮೇಲಿನ ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ಯಕ್ಷಗಾನ ಎನ್ನುವ ಮಹಾನ್‌  ವೃಕ್ಷಕ್ಕೆ ಯಕ್ಷಗಾನ ಕಲಾಸಂಘಗಳು ತಾಯಿ ಬೇರು ಇದ್ದಂತೆ. ಕಲಾಸೆಳೆತ, ಪ್ರೀತಿ, ಬದ್ಧತೆ ಎಲ್ಲವೂ ಒಟ್ಟಾಗಿ ಉದ್ಘಾಟನೆಗೊಂಡಿರುವ ಈ ಸಂಘ ಚಿರಕಾಲ ಬಾಳಲಿ      ವಿಶ್ವ ವಿನೋದ ಬನಾರಿ (ಸಮ್ಮಾನಿತರು).

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಮಸ್ಕತ್‌- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.