ಐ ಸೇವರ್ನಲ್ಲಿ ರೆಟಿನೋಪತಿ ತಪಾಸಣೆ ಯಂತ್ರ
Team Udayavani, Sep 20, 2017, 12:29 PM IST
ಹುಬ್ಬಳ್ಳಿ: ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಣ್ಣಿನ ಒಳಪೊರೆ (ರೆಟಿನೋಪತಿ)ಪತ್ತೆ ಮಾಡುವ ಅತ್ಯಾಧುನಿಕ ಯಂತ್ರವನ್ನು ನಗರದ ಐ ಸೇವರ್ ನೇತ್ರ ತಪಾಸಣೆ ಹಾಗೂ ಕನ್ನಡಕ ಮಾರಾಟ ಮಳಿಗೆ ತರಿಸಿದ್ದು, ದಕ್ಷಿಣ ಭಾರತದಲ್ಲೇ ಈ ಸೌಲಭ್ಯ ಹೊಂದಿದ ಮೊದಲ ಸಂಸ್ಥೆಯಾಗಿದೆ.
ಜರ್ಮನ್ನ ಕಾರ್ಲ್ ಝೈಸ್ ಕಂಪನಿ ವಿಸೌಸ್ಕೌಟ್ ಎಂಬ ನೂತನ ಯಂತ್ರ ಆವಿಷ್ಕಾರಗೊಳಿಸಿದ್ದು, ಇಲ್ಲಿನ ದೇಶಪಾಂಡೆ ನಗರದ ಐ ಸೇವರ್ ಸಂಸ್ಥೆ ಈ ಯಂತ್ರವನ್ನು ಜನರ ಬಳಕೆಗಾಗಿ ಖರೀದಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಲ್ ಝೈಸ್ ಕಂಪೆನಿ ಅಧಿಕಾರಿ ಶ್ರೀನಿವಾಸನ್ ಪಾರ್ಥಸಾರಥಿ ಮಾತನಾಡಿ, ಕಾರ್ಲ್ ಝೈಸ್ ಕಂಪೆನಿ ಒಟ್ಟು ಆರು ವಿಭಾಗಗಳನ್ನು ಹೊಂದಿದೆ.
ಕ್ಯಾಮೆರಾಗಳಿಗೆ ಬಳಸುವ ಲೆನ್ಸ್, ಮೊಬೈಲ್, ಲ್ಯಾಪ್ಟಾಪ್ಗ್ಳಿಗೆ ಬಳಸುವ ಚಿಪ್ಗ್ಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಭಾರಿ ಯಶಸ್ಸು ಕಂಡ ಬಾಹುಬಲಿ ಸಿನಿಮಾದ ಚಿತ್ರೀಕರಣಕ್ಕೆ ನಮ್ಮ ಕಂಪೆನಿಯ ಲೆನ್ಸ್ಗಳನ್ನು ಬಳಸಲಾಗಿದೆ. ಅದೇ ರೀತಿ ನೇತ್ರ ತಪಾಸಣೆ ಸಲಕರಣೆಗಳನ್ನು ಕಂಪೆನಿ ತಯಾರಿಸುತ್ತಿದೆ ಎಂದು ತಿಳಿಸಿದರು.
ರೆಟಿನೋಪತಿ ತಪಾಸಣೆ ಯಂತ್ರ ಈಗಾಗಲೇ ಉತ್ತರ ಭಾರತದಲ್ಲಿ ನಾಲ್ಕು, ಪಶ್ಚಿಮದ ಭಾಗದಲ್ಲಿ ಎರಡು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಗೆ ನೀಡಿದ್ದೇವೆ. ಯಂತ್ರ 4.50ಲಕ್ಷ ರೂ. ವೆಚ್ಚದ್ದಾಗಿದ್ದು, ವಿವಿಧ ಪ್ಯಾಕೇಜ್ಗಳೊಂದಿಗೆ ಇದನ್ನು ನೀಡಲಾಗಿದೆ ಎಂದರು. ಐ ಸೇವರ್ನ ಸಿಇಒ ಕುನಾಲ್ ಶಾಹ ಮಾತನಾಡಿ, ದೇಶದಲ್ಲಿ ಸುಮಾರು 126 ಮಿಲಿಯನ್ನಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.
ಇದರಲ್ಲಿ ಸುಮಾರು 37 ಮಿಲಿಯನ್ನಷ್ಟು ಜನರು ದೃಷ್ಟಿ ನಷ್ಟದ ಅಪಾಯದಲ್ಲಿದ್ದಾರೆ. ರೆಟಿನೋಪತಿ ಗೊತ್ತಿಲ್ಲದ ರೀತಿಯಲ್ಲಿ ಅಪಾಯ ತಂದೊಡ್ಡುವುದಾಗಿದೆ. ನಿಯಮಿತ ನೇತ್ರ ತಪಾಸಣೆಯಿಂದ ಸಮಸ್ಯೆ ನಿವಾರಣೆ ಸಾಧ್ಯ. ದೇಶದಲ್ಲಿ ಸುಮಾರು 39 ಮಿಲಿಯನ್ನಷ್ಟು ಅಂಧರಿದ್ದು, ಇವರಲ್ಲಿ ಶೇ.80ರಷ್ಟು ಜನರಿಗೆ ಚಿಕಿತ್ಸೆ ಮೂಲಕ ದೃಷ್ಟಿ ನೀಡಬಹುದಾಗಿದೆ ಎಂದು ಹೇಳಿದರು. ಪ್ರಕಾಶ ಶಾಹ, ಮಂಜು, ಪ್ರಸನ್ನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ
ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ
Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.