ಜನಮನ ತಣಿಸಿದ “ಜುಗಲ್‌ಬಂದಿ’…


Team Udayavani, Sep 26, 2017, 12:09 PM IST

mmys1.jpg

ಮೈಸೂರು: ದಾಂಪತ್ಯ, ಪ್ರೀತಿಯ ಜತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಒಳಗೊಂಡ ಕಾವ್ಯದ ಜುಗಲ್‌ಬಂದಿ ನಡೆಸಿದ ಸಾಹಿತಿಗಳು ಸಭಿಕರಿಗೆ ಮನರಂಜನೆ ಉಣಬಡಿಸಿದರು. ನಾಡಹಬ್ಬ ದಸರಾ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿರುವ ದಸರಾ ಕವಿಗೋಷ್ಠಿ 2ನೇ ದಿನವಾದ ಸೋಮವಾರ ಆಯೋಜಿ ಸಿದ್ದ ವಿನೋದ ಕವಿಗೋಷ್ಠಿಯಲ್ಲಿ ಅನೇಕ ಹಿರಿಯ ಕವಿಗಳು ಕಾವ್ಯದ ಮೂಲಕ ಕೇಳುಗರ ಗಮನ ಸೆಳೆದರು. 

ಕಾವ್ಯದ ಜುಗಲ್‌ಬಂದಿ: ಗೋಷ್ಠಿ ಆರಂಭದಲ್ಲಿ ಕಾವ್ಯವಾಚನ ಮಾಡಿದ ಕವಿ ಬಿ.ಆರ್‌.ಲಕ್ಷ್ಮಣ್‌ರಾವ್‌, ತನ್ನ ಮನೆಯಲ್ಲಿ ಕಾಮಧೇನು ಇಲ್ಲ, ಕಲ್ಪವೃಕ್ಷವಿಲ್ಲ, ರಂಬೆ, ಊರ್ವಶಿಯರಿಲ್ಲ, ಕೆಣಕಿ ಕಾಡುವ ಶತ್ರುವಿಲ್ಲ, ಅಂತರಂಗದ ಮಿತ್ರನಿಲ್ಲ, ದೆವ್ವವಿಲ್ಲ, ದೇವರಿಲ್ಲ, ಪೀಡೆ ಇಲ್ಲ, ಎಂದೆನಿಸಿಯೇ ಇಲ್ಲ.

ತನಗೆ ಹೆಂಡತಿ ಇದ್ದಾಳೆ ಎಂದು ಹೇಳಿದರೆ. ಇದಕ್ಕೆ ಪ್ರತಿಕ್ರಿಯಿಸಿದ ಡುಂಡಿರಾಜ್‌ ಅವರು ನಮ್ಮ ಮನೆಯಲ್ಲಿ ಮಿಕ್ಸಿ ಇಲ್ಲ, ಗ್ರೈಂಡರ್‌ ಇಲ್ಲ, ವಾಷಿಂಗ್‌ಮೆಷಿನ್‌ ಇಲ್ಲ ಎಂದು ಹೆಂಡತಿ ಗೊಣಗುವುದೇ ಇಲ್ಲ, ಏಕೆಂದರೆ ನಾನಿದ್ದೇನೆಲ್ಲಾ ಎಂದು ಹಾಸ್ಯದ ಜುಗಲ್‌ಬಂದಿ ನಡೆಸಿದರು. ತಮ್ಮ ಕಾವ್ಯವಾಚನ ಮುಂದುವರಿಸಿದ ಡುಂಡಿರಾಜ್‌, ವಿಘ್ನ ನಿವಾರಕ ವಿನಾಯಕನನ್ನು ನೆನಪಿಸಿಕೊಂಡು, ಗಣನಾಯಕ ನಿನಗೆ ಪಂಚಕಜಾjಯ, ಜನನಾಯಕ ನಿನಗೆ ಲಂಚಕಜಾಯ ಎಂದು ವ್ಯಂಗ್ಯವಾಡಿದರು. 

ಬಳಿಕ ಜರಗನಹಳ್ಳಿ ಶಿವಶಂಕರ್‌ ಅವರು, ಪ್ರಸ್ತುತ ಮನೆ ಹೆಂಗಳೆಯರ ದೇವರ ಕುರಿತಾದ ಅತಿಯಾದ ನಂಬಿಕೆ  ಕುರಿತಾಗಿ, ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮಾಡಿ, ಮುಡಿಕೊಡಬೇಕೆಂದು ಹರಕೆ ಹೊತ್ತಿದ್ದೆ. ಆದರೆ ದೇವರೆ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ. ಬೇಕೆಂದರೆ ನೋಡಿ ತನ್ನ ತಲೆಯನ್ನು ಎಂದು ನಗೆಯಲ್ಲಿ ತೇಲಿಸಿದರು.

ಮತ್ತೆ ನೋಟ್‌ಬ್ಯಾನ್‌ ಸದ್ದು: ದಸರೆ ವಿನೋದ ಕವಿಗೋಷ್ಠಿಯಲ್ಲಿ ನೋಟು ರದ್ಧತಿಯೂ ಸದ್ದು ಮಾಡಿತು. ಕಾವ್ಯವಾಚನ ಮಾಡಿದ ಡುಂಡಿರಾಜ್‌ ಸ್ವಲ್ಪವೂ ಸುಳಿವು ನೀಡದೇ, 500-1000 ರೂ. ನೋಟು ರದ್ದು ಮಾಡಿದರು ಮೋದಿ, ಗುಟ್ಟು ರಟ್ಟಾಗದಿರಲೂ ಕಾರಣ ಅವರ ಮನೆಯಲ್ಲಿಲ್ಲ ಮಡದಿ ಎಂದು ಹಾಸ್ಯದ ಮೂಲಕ ರಂಜಿಸಿದರು. ಒಟ್ಟು 3 ಸುತ್ತಿನ ಕಾವ್ಯ ವಾಚನ ನಡೆಯಿತು. ಭುವನೇ ಶ್ವರಿ ಹೆಗಡೆ, ಅಸಾಧುಲ್ಲಾ ಬೇಗ್‌, ಎಂ.ಡಿ.ಗೋಗೇರಿ,ಸುಕನ್ಯಾ ಕಳಸ ಕವನ ವಾಚನ ಮಾಡಿದರು.

ಘಟಾನುಘಟಿ ಕವಿಗಳ ನಡುವೆ ಪುಟ್ಟ ಕಲಾವಿದೆಯಾದ ತಾನು ಕವಿಗೋಷ್ಠಿ ಉದ್ಘಾಟಿಸಿದ್ದು ಸಂತಸ ತಂದಿದೆ. ಮೈಸೂರು ತನಗೆ ಬಹಳ ಇಷ್ಟ. ಪವಿತ್ರ ಪ್ರೀತಿಯನ್ನು ಇಲ್ಲಿನ ಜನ ತೋರಿಸುತ್ತಾರೆ. ಇಲ್ಲಿನ ಜನರಿಂದ ಸಂಸ್ಕೃತಿಯನ್ನು ಕಲಿತಿದ್ದೇನೆ.
-ಮಯೂರಿ, ನಟಿ

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.