ಅಭಿವೃದ್ದಿಗೆ ಶ್ರಮಿಸದ ಪುರಸಭೆ ಅಧಿಕಾರಿಗಳು


Team Udayavani, Sep 27, 2017, 1:01 PM IST

myss4.jpg

ಎಚ್‌.ಡಿ.ಕೋಟೆ: ಅಧ್ಯಕ್ಷರೇ ವಾರ್ಡ್‌ಗಳು ಸ್ವಚ್ಚತೆಯಿಲ್ಲದೆ ಆನೈರ್ಮಲ್ಯ ತಾಣಗಳಾಗಿವೆ, ಸಾವಿರಾರು ರೂ ಖರ್ಚು ಮಾಡಿ ಬೋರ್‌ ಕೊರಿಸಿದ್ದರೂ ಇನ್ನು ವಿದ್ಯುತ್‌ ಸಂಪರ್ಕ ಕೋಡಿಸಿಲ್ಲ, ಇದರಿಂದಾಗಿ ಮನೆ ನಲ್ಲಿಗಳಿಗೆ ನೀರು ಸರಬರಾಜಾಗುತ್ತಿಲ್ಲ, ವಾರ್ಡ್‌ ಬೀದಿ ದೀಪ ಅಳವಡಿಸಿಲ್ಲ ಓಟು ಹಾಕಿದ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ ಎಂದು ಸದಸ್ಯರು ಕೆಂಡಾಮಂಡಲವಾದರು.

ಅಭಿವೃದ್ಧಿಗೆ ಶ್ರಮಿಸದ ಅಧಿಕಾರಿಗಳು ನಮಗೆ ಬೇಡವೇ ಬೇಡ ಎಂದು ಸದಸ್ಯರು ಸಭೆ ಬಹಿಷ್ಕರಿಸಲು ಮುಂದಾದ ಘಟನೆ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ವಾರ್ಡ್‌ ಸದಸ್ಯರ ಸಮಸ್ಯೆ ಆಲಿಸಿದ ಅಧ್ಯಕ್ಷೆ ಮಂಜುಳಾ ಮುಖ್ಯಾಧಿಕಾರಿ ಸೇರಿದಂತೆ ಪುರಸಭೆಯ ಎಲ್ಲ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಟೆ ತಗೆದುಕೊಂಡರು.

ಅಭಿವೃದ್ದಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಾನು ಸುಮ್ಮನಿರಲ್ಲ. ತಾತ್ಕಾಲಿಕ ಪುಟ್‌ಬಾತ್‌ ನಿರ್ಮಾಣ ಎಸ್ಟಿಮೇಟ್‌ ಎಲ್ಲಿ ಎಂದು ಕೇಳಿದ್ದಕ್ಕೆ ಅಧಿಕಾರಿ ಮೇಡಂ ಅದು ಇದು ಎಂದು ತಡವಾರಿಸಿದ್ದರಿಂದ ಕೆಂಡಮಂಡಲರಾದ ಅಧ್ಯಕ್ಷೆ  ನೋಡ್ರಿ ನೀವು ಕೆಲ್ಸ ಮಾಡಿ, ಇಲ್ಲ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಗುಡುಗಿದರು.

ಗೈರು…?: ಇನ್ನು ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಪುಟ್ಟಬಸವನಾಯ್ಕ, ರಾಜಣ್ಣ, ಅನಿಲ್‌, ತಾಜ್‌ ಅವರುಗಳಂತು ಸಭೆಯ ಉದ್ದಕ್ಕೂ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಇಷ್ಟೇಲ್ಲಾ ಸಭೆಗಳಲ್ಲಿ ಅಧಿಕಾರಿಗಳಿಗೆ ಬೇವರಿಳಿಸುತ್ತಿದ್ದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಉಮಾಶಂಕರ್‌ ಮಾತ್ರ ಇಂದು ಇವರನ್ನು ಸರಿಪಡಿಸಲು ಆಗಲ್ಲ ಬೀಡಿ ಎಂದು ಮೌನ ವಹಿಸಿದರು. ಇನ್ನು ಉಪಾಧ್ಯಕ್ಷೆ ಸುಮಾ ಸಂತೋಷ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್‌.ಸಿ.ನರಸಿಂಹಮೂರ್ತಿ ಸಬೆಗೆ ಗೈರಾದರು.

ಆರೋಪ: ಸದಸ್ಯ ತಾಜ್‌ ಬರ ಪರಿಹಾರ ನಿಧಿಯಿಂದ ಕೋರೆದ ಬೋರ್‌ ಗಳಿಗೆ ಕಳಪೆ ವೈರ್‌ ಬಳಸಲಾಗಿದ್ದು, ಬೋರ್‌ಗಳು ತಿಂಗಳಲ್ಲಿ ಎರಡೂ¾ರು ಬಾರಿ ಕೇಡುತ್ತಿವೆ, ಅಧಿಕಾರಿಗಳಾದ ನೀವು ಏನ್‌ ಕೆಲ್ಸ ಮಾಡ್ತಿದ್ದೀರಿ ನೀವು ಹೋಗ್‌ ನೋಡ್‌ ಬೇಕು, ಪದೇ ಪದೇ ಬೋರ್‌ ಕೇಡುತ್ತಿರುವುದರಿಂದ ವಾರ್ಡ್‌ಗಳಲ್ಲಿ ನೀರು ಸರಬರಾಜಿಗೂ ತೊಂದರೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಕ್ರಮ: ಸದಸ್ಯ ಪುಟ್ಟಬಸವನಾಯ್ಕ ಮಾತನಾಡಿ, ಕಂದಾಯ ಅಧಿಕಾರಿಗಳೇ ಕಳೆದ ಬಾರಿ ಸಂತೆ ಹಾಗೂ ಪುಟ್‌ಬಾತ್‌ ಸುಂಕ ವಸೂಲಿ ಪಡೆದು ಸುಮಾರು 2.5 ಲಕ್ಷ ಪುರಸಭೆಗೆ ವಂಚಿಸಿರುವವರ ಮೇಲೆ ಏನ್‌ ಕ್ರಮ ಆಯ್ತು ಎಂದು ಪ್ರಶ್ನಿಸಿದರು, ಕಂದಾಯ ಅಧಿಕಾರಿ ಸುರೇಶ್‌ ಪೋಲಿಸ್‌ ಠಾಣೆಗೆ ದೂರು ನೀಡಲಾಗಿದೆ ಎಂದರು ಅದಕ್ಕೆ ಸುಮ್ಮನಾಗದ ಸದಸ್ಯರು ಮೂರು ತಿಂಗಳಾಗಿದೆ ಏಕೆ ಇನ್ನು ಕ್ರಮ ಆಗಿಲ್ಲ ಸಮಾನ್ಯ ಜನ ಏನಾದರೂ ಹೀಗೆ ಮಾಡಿದ್ದರೇ ಬಿಡ್ತಿದ್ದರಾ ಎಂದು ಸಿಟ್ಟಾದರು.

ಮಧ್ಯ ಪ್ರವೇಶಿದ ಮುಖ್ಯಾಧಿಕಾರಿ ವಿಜಯ್‌ಕುಮಾರ್‌, ಠಾಣೆಗೆ ದೂರು ನೀಡಲಾಗಿದೆ ಅವರೇ ಬಂದು ಪರಿಶೀಲುಸುವದಾಗಿ ತಿಳಿಸಿದರು. ಸಿಟ್ಟಾದ ಸದಸ್ಯರು ಪೋಲಿಸರು ಅವರನ್ನು ಕರೆದು ವಿಚಾರಣೆ ಕೂಡ ಮಾಡಿಲ್ಲ ನೀವೇ ದೂರು ಪ್ರತಿಗೆ ಪೋಲಿಸ್‌ ಠಾಣೆ ಸಿಲ್‌ ಹಾಕಿಕೊಂಡು ಬಂದಿದ್ದೀರಿ ಇದು ಕಳ್ಳ ಸಿಲೇ ಇರಬೇಕು ಎಂದರು. ಆಗ ಮುಖ್ಯಾಧಿಕಾರಿಗಳು ನಿಮ್ಮನ್ನು ಸೇರಿ 16 ಜನ ಸವಜಾಯಿಸಿ ನೀಡಿದರು.

ಅನ್ಸಾರ್‌ ಅಹಮದ್‌, ವಿವೇಕ್‌, ಉಮಾಶಂಕರ್‌, ತೋಟದ ರಾಜಣ್ಣ, ಮಹೇಶ್ವರಿ ಗುರುಮಲ್ಲು, ಪುಟ್ಟಬಸವನಾಯ್ಕ, ತಾಜ್‌, ರತ್ನಮ್ಮ ಚಲುವನಾಯ್ಕ, ಸುಹಾಸಿನಿ, ಅನಿಲ್‌, ನಾಮ ನಿರ್ದೇಶಿತ ಸದಸ್ಯರಾದ ಜಾnನೇಶ್ವರಿ ಬಾಯಿ, ಕಾರ್‌ ಮಂಜು, ಅಧಿಕಾರಿಗಳಾದ ವೀಣಾ, ಸಿದ್ದಯ್ಯ, ರಘು, ತೇಜಸ್ವಿನಿ, ಹರೀಶ್‌, ಸುರೇಶ್‌ ಇತರರು ಇದ್ದರು.

ಬಾಗಿಲ ಬಳಿ ಕೂತ ಪತಿ: ಇಂದು ಪುರಸಭೆ ಸಬಾಂಗಣದಲ್ಲಿ ಅಧ್ಯಕ್ಷೆ ಮಂಜುಳಾ ಸಮಾನ್ಯ ಸಬೆಯಲ್ಲಿ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಳ್ಳುತ್ತಿದ್ದರೇ, ಇತ್ತ ಅವರ ಪತಿ ಗೋವಿಂದಚಾರಿ ತಮ್ಮ ಪತ್ನಿ ಆಡಳಿತ ವೈಖರಿಯನ್ನು ಕಚೇರಿಯ ಬಾಗಿಲ ಬಳಿ ಕೂತು ವಿಕ್ಷಿಸುತ್ತಿದ್ದ ದೃಶ್ಯ ವಿಶೇಷವಾಗಿತ್ತು.

ವಾರ್ಡ್‌ಗಳಲ್ಲಿ ಕೆಲ್ಸ ಆಗುತ್ತಿಲ್ಲ ಜನ ನಮ್ಮನ್ನು ಕಂಡ ಕಂಡಲ್ಲಿ ಬೈಯುತ್ತಿದ್ದಾರೆ, ಅಧಿಕಾರಿಗಳಾದ ನೀವು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಪಟ್ಟಣದ ಅಭಿವೃದ್ಧಿ ಅದಾಗಿಯೇ ಆಗುತ್ತದೆ.
-ತಾಜ್‌, ಸದಸ್ಯರು.

ಟಾಪ್ ನ್ಯೂಸ್

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

1

Crime: ಯೂಟ್ಯೂಬ್‌ ನೋಡಿ ಪ್ರೇಯಸಿಯ 59 ತುಂಡು ಮಾಡಿದ್ದ ಹಂತಕ!

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

H. Vishwanath: “ಚಮಚಗಿರಿ ಭಾಷಣದಿಂದ ದಸರಾ ಪಾವಿತ್ರ್ಯತೆ ಹಾಳು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Udupi: ಎಸ್‌ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.