ರಾಮಮಂದಿರ ಕಟ್ಟುವವರು ರಾಮಾಯಣ ಅರಿಯಲಿ


Team Udayavani, Sep 27, 2017, 1:01 PM IST

myss1.jpg

ಮೈಸೂರು: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ರಾಮಮಂದಿರ ಕಟ್ಟಬೇಕು ಎಂದು ಹೊರಟಿರುವವರು ವಾಲ್ಮೀಕಿ ರಾಮಾಯಣ ಅರಿಯಬೇಕು ಎಂದು ವಿಚಾರವಾದಿ ಪೊ›.ಕೆ.ಎಸ್‌.ಭಗವಾನ್‌ ಹೇಳಿದರು. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪ ಸಮಿತಿ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಕವಿಗೋಷ್ಠಿ ಅಂಗವಾಗಿ ನಡೆದ ವಿಶಿಷ್ಟ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಪನೆ: ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ, ರಾಮನನ್ನು ದೇವರೆಂದು ಹೇಳಿಲ್ಲ. ತನ್ನ ಭಾವನೆ, ಕಲ್ಪನೆಗಳನ್ನು 25 ಸಾವಿರ ಶ್ಲೋಕಗಳಲ್ಲಿ ಹೇಳಿರುವ ವಾಲ್ಮೀಕಿ, ರಾಮನನ್ನು ಚಾರ್ತುವರ್ಣದ ರಕ್ಷಕ ಎಂದು ಕರೆದಿದ್ದಾನೆ. ಮನುಷ್ಯ ಜನ್ಮ ಇರುವುದೇ 100 ವರ್ಷ ಹೀಗಾಗಿ 11 ಸಾವಿರ ವರ್ಷ ರಾಮ ರಾಜ್ಯಭಾರ ಮಾಡಿದ ಎಂಬುದು ಸರಿಯಲ್ಲ. ಅದನ್ನು 11 ವರ್ಷಗಳ ಕಾಲ ಆಳಿದ ಎಂದು ಕೊಳ್ಳಬೇಕು ಎಂದರು.

ಗುಂಡಿಡಲಾಗದು: ಸಾಹಿತಿ ಕೆ.ನೀಲಾ ಮಾತನಾಡಿ, ಕಾವ್ಯಕ್ಕೆ ಸಾವಿಲ್ಲ. ಹಣೆಗೆ ಗುಂಡಿಡಬಹುದು, ಆದರೆ, ನುಡಿಗೆ ಗುಂಡಿಡಲಾಗದು ಎಂದರು. ರಾಜ-ಮಹಾರಾಜರ ಚರಿತ್ರೆಯನ್ನು ಓದಿದ್ದೇವೆ, ಆದರೆ ಮಹಲು ಕಟ್ಟಿದವನ, ರಸ್ತೆ ಮಾಡಿದವನ ಚರಿತ್ರೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಜನರಿಗೆ ಮನ್‌ ಕೀ ಬಾತ್‌ ಬೇಕಾಗಿಲ್ಲ. ಹೃದಯದ ಮಾತು ಬೇಕಾಗಿದೆ. ಜಯಮಾಲ ವರದಿಯ ಶಿಫಾರಸುಗಳನ್ನು ಸರ್ಕಾರ ಶೀಘ್ರ ಜಾರಿಮಾಡಲಿ ಎಂದು ಒತ್ತಾಯಿಸಿದರು.

ಅರಿವು: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಮಾತನಾಡಿ, ರಾಮನಿದ್ದಾಗ ರಾವಣನೂ ಇದ್ದ, ಕೌರವರಿದ್ದಾಗ ಪಾಂಡವರೂ ಇದ್ದರು, ಹಾಗೆಯೇ ಸರಿ-ತಪ್ಪು$, ಕಪ್ಪು$-ಬಿಳುಪು, ನ್ಯಾಯ-ಅನ್ಯಾಯ ಜತೆ ಜತೆಗೆ ಇದ್ದೇ ಇರುತ್ತವೆ ಅರಿತು ನಡೆಯಬೇಕು ಎಂದರು.

ಹೊಸ ಪದ್ಧತಿ: ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್‌ ಸದಸ್ಯೆ ಡಾ.ಜಯಮಾಲ ಮಾತನಾಡಿ, ಆಧುನೀಕರಣ, ನಗರೀಕರಣದ ಪರಿಣಾಮಗಳನ್ನು ಯಾರೂ ಊಹಿಸಲಾರದಂತಾಗಿದೆ. ಹಿಂದೆ ದೇವದಾಸಿ ಪದ್ಧತಿ ಇದ್ದರೂ ಅದಕ್ಕೊಂದು ಗೌರವ ಇತ್ತು. ನಗರೀಕರಣ ಹೊಸ ರೀತಿಯ ದೇವದಾಸಿ ಪದ್ಧತಿಯನ್ನು ಹುಟ್ಟುಹಾಕಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯುಪಿಎಸ್‌ಸಿ ರ್‍ಯಾಂಕ್‌ ವಿಜೇತ ಕೆಂಪ ಹೊನ್ನಯ್ಯ ಕವಿಗೋಷ್ಠಿ ಉದ್ಘಾಟಿಸಿದರು. ದಸರಾ ವಿಶೇಷಾಧಿಕಾರಿ ಡಿ. ರಂದೀಪ್‌, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್‌.ವರ್ಧನ್‌, ಸಮಿತಿ ಉಪಾಧ್ಯಕ್ಷರಾದ ರತ್ನ ಅರಸ್‌, ಕಾರ್ಯಾಧ್ಯಕ್ಷೆ ಡಾ.ಎನ್‌.ಕೆ.ಲೋಲಾಕ್ಷಿ, ಕಾರ್ಯದರ್ಶಿ ಮಂಜುನಾಥ್‌ ಇತರರಿದ್ದರು.

ಕವನ ವಾಚನ: ಶಕ್ತಿಧಾನ, ಒಡನಾಡಿ, ಆಶೋದಯ, ಆರ್‌ಎಲ್‌ಎಚ್‌ಪಿಯ ವತಿಯಿಂದ ಬಂದಿದ್ದ ಪ್ರತಿನಿಧಿಗಳು ಕವನ ವಾಚನ ಮಾಡಿದರು. ಸರ್ಕಾರಿ ಅಂಧ ಮತ್ತು ಕಿವುಡರ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಯೇಸು, ಅಪ್ಪ-ಅಮ್ಮ ಕವನವನ್ನು ಮೂಕಾಭಿನಯದ ಮೂಲಕ ತೋರ್ಪಡಿಸಿದರೆ, ಅದೇ ಶಾಲೆಯ ಶರಶ್ಚಂದ್ರನ ಅನಂತ ನಗು ಕವನದ ಮೂಕಾಭಿನಯ ವಿಶೇಷವಾಗಿತ್ತು. ಶಕ್ತಿಧಾಮದ ವಯೋವೃದ್ಧೆ ಇಂದಿರಮ್ಮ ಅವರ ಅಮ್ಮ ಎನ್ನುವ ಶಬ್ದ ಎಷ್ಟು ಚೆನ್ನ ಕವನ ವಾಚನ ಗಮನಸೆಳೆಯಿತು.

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

ಲೋಕಾಯುಕ್ತ ಪೊಲೀಸರಿಂದ 14 ನಿವೇಶನಗಳ ಸ್ಥಳ ಮಹಜರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.