ನನ್ನ ನಗುವಿಗೆ ಚಂದಾದಾರ ನೀನು


Team Udayavani, Oct 3, 2017, 1:11 PM IST

jo11.jpg

ಇರದ ಪ್ರೀತಿಗಿಂತಲೂ ಜೊತೆಗಿರುವ ಸ್ನೇಹವೇ ಚಂದ. ಆಹಾ! ಎಷ್ಟು ಚಂದ ಅಲ್ವಾ ಈ ಮಾತು? ನಮ್ಮಲ್ಲಿ ಇಲ್ಲದಿರುವ ವಸ್ತು ಅಥವಾ ವಿಷಯದ ಬಗ್ಗೆಯೇ ನಾವು ಸದಾ ಯೋಚಿಸುತ್ತಾ ನಮ್ಮೆದುರಿಗಿರುವ ಖುಷಿಯನ್ನು ಮರೆತುಬಿಡುತ್ತೇವೆ. ಗೊತ್ತಾ ನಿಂಗೆ? ನೀನು ನನ್ನ ಜೀವನಕ್ಕೆ ಕಾಲಿಡುವ ಮುನ್ನ ನಾನು ಕೇವಲ ಹೂವಾಗಿದ್ದೆ. ಅದಕ್ಕೆ ಪರಿಮಳ ತಂದು, ಆ ಹೂವು ದೇವರ ಗುಡಿ ಸೇರುವಂತೆ ಮಾಡಿದವನು ನೀನು.

ಮಾಯಾವಿಯಂತೆ ಬಂದು ನನ್ನ ಜೀವನವನ್ನು ಸ್ನೇಹದಿಂದ ತುಂಬಿದೆ. ನಿನ್ನ ಜೊತೆ ಕಳೆದ ಕೆಲವು ಘಳಿಗೆಗಳಿಗಿಂತಲೂ, ಜೊತೆಗಿದ್ದ ಸಮಯದಲ್ಲಿ ನೀನು ಆಡಿದ್ದ ಮುದ್ದು ಮಾತುಗಳೇ ಚಂದ.  “ನಿನ್ನನ್ನು ಪ್ರೀತಿಸಿ, ಕಳೆದುಕೊಳ್ಳುವುದಕ್ಕಿಂತ ಲೈಫ್ ಲಾಂಗ್‌ ಹೀಗೆ ನನ್ನ ಬೆಸ್ಟ್‌ ಫ್ರೆಂಡ್‌ ಆಗಿರು’ ಎಂದು ಈಗ ತಾನೇ ನೀನು ನನ್ನ ಕಿವಿಯಲ್ಲಿ ಹೇಳಿದಂತೆ ಭಾಸವಾಗುತ್ತಿದೆ. ಪ್ರತಿಯೊಬ್ಬ ಪುರುಷನ ಪ್ರಗತಿಯ ಹಿಂದೆ ಒಬ್ಬ ಮಹಿಳೆಯಿರುತ್ತಾಳೆಂಬ ಮಾತಿದೆ.

ಸ್ನೇಹಿತೆಯಾದ ನನಗೆ ನೀನು ಈ ಸ್ಥಾನ ನೀಡಿದ್ದು ತುಂಬಾ ಸಂತೋಷದ ವಿಷಯ. ಪಕ್ಕದಲ್ಲಿ ಅಮೃತವಿರುವಾಗ ದೂರದಲ್ಲಿರುವ ಸಕ್ಕರೆಯ ಮೇಲೆ ಆಸೆ ಪಡಬಾರದು ಎಂಬುದರ ಅರಿವು ಮಾಡಿಸಿದೆ ನೀನು. ಖಾಲಿಯಾಗಿದ್ದ ಬಿಳಿ ಹಾಳೆಗೆ ಕಾಮನಬಿಲ್ಲಿನಂತೆ ರಂಗನ್ನು ತುಂಬಿಸಿದ ನಿನ್ನ ಸ್ನೇಹಕ್ಕೆ ಹೇಗೆ ಧನ್ಯವಾದ ಹೇಳುವುದೋ ಗೊತ್ತಾಗುತ್ತಿಲ್ಲ.

ನನ್ನ ಬಗ್ಗೆ ನನಗೆ ಅರಿವಿಲ್ಲದ್ದನ್ನು ನೀನು ಗಮನಿಸಿ, ನನ್ನನ್ನು ಮೇಲಕ್ಕೆತ್ತಿದೆ. ನಾನು ತಪ್ಪು ಹೆಜ್ಜೆ ಇಟ್ಟಾಗ, ಸರಿಯಾದ ದಾರಿ ತೋರಿಸಿದೆ. ನನಗೆ ಭಯವಾದಾಗ “ಜೊತೆಯಲ್ಲಿ ನಾನಿಲ್ಲವೇ?’ ಎಂದು ಸಮಾಧಾನಿಸಿದೆ. ಜೀವನದ ಸುಖ- ದುಃಖದಲ್ಲಿ ಕೈ ಜೋಡಿಸಿದೆ. ನಾ ಎಡವಿ ಬೀಳುತ್ತಿದ್ದಾಗ ನೀ ಸಹಾಯ ಹಸ್ತ ಚಾಚಿದೆ.

ಈ ಜೀವನದಲ್ಲಿ ನಾ ಕಂಡ ಮುದ್ದು/ ಪೆದ್ದು ಗೆಳೆ‌ಯ ನೀನು. ನನ್ನ ಒಂದು ಮುಗುಳು ನಗೆಗೆ ನೀ ಎಷ್ಟು ಕಸರತ್ತು ಮಾಡುತ್ತಿದ್ದೆ ಅಂತ ನನಗೆ ಗೊತ್ತು. ನಿನ್ನ ಮನಸ್ಸಿನಲ್ಲಿ ಎಷ್ಟೇ ದುಃಖ, ನೋವಿದ್ದರೂ ಅದನ್ನು ಬದಿಗಿಟ್ಟು ನನ್ನೊಂದಿಗೆ ಸಂತೋಷವಾಗಿ ಇರುತ್ತಿದ್ದೆ ಎಂಬುದೂ ನನಗೆ ಗೊತ್ತು. ಕೆಲವೇ ದಿನಗಳಲ್ಲಿ ನಾವಿಬ್ಬರೂ ದೂರವಾಗಬಹುದು. ಆದರೆ, ಈ ನಮ್ಮ ಗೆಳೆತನ ನಾನಿರುವವರೆಗೂ ಹೀಗೇ ಇರಲಿ ಎಂಬುದಷ್ಟೇ ಆ ದೇವರಲ್ಲಿ ನನ್ನ ಪ್ರಾರ್ಥನೆ…

ಇಂತಿ… ರುಬಿನಾ ಅಂಜುಮ್‌

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.