ಕ್ರೀಡೆಯಿಂದ ಮಾನಸಿಕ ಸ್ಥೈರ್ಯ: ನಾಗೇಶ್ ಬೊಳ್ಳೂರು
Team Udayavani, Oct 7, 2017, 2:40 PM IST
ಪಕ್ಷಿಕೆರೆ : ಕ್ರೀಡೆಯು ದೈಹಿಕ ಮಾನಸಿಕ ಸ್ಥೆರ್ಯ ಹಾಗೂ ಆರೋಗ್ಯ ರಕ್ಷಣೆಗೂ ಸಹಕಾರಿ ಎಂದು ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಬೊಳ್ಳೂರು ಹೇಳಿದರು.
ಅವರು ಕಲಾತರಂಗ್ ಹಾಗೂ ಕೆಮ್ರಾಲ್ ಗ್ರಾಮ ಪಂಚಾಯತ್ ಜಂಟಿ ಆಶ್ರಯದೊಂದಿಗೆ ಭಟ್ಟಕೋಡಿ ದ್ವಾರದಿಂದ ಪಕ್ಷಿಕೆರೆ ದ್ವಾರದ ತನಕ ಆಯೋಜಿಸಿದ ಮ್ಯಾರಥಾನ್ ಓಟದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮೂಲ್ಕಿ ಪೊಲೀಸ್ ನಿರೀಕ್ಷಕ ಶಾಂತಪ್ಪ ಅವರು ಭಾಗವಹಿಸಿ ಬಹುಮಾನ ವಿತರಿಸಿದರು.
ಉದ್ಯಮಿ ಧನಂಜಯ ಶೆಟ್ಟಿಗಾರ್, ಪಂಚಾಯತ್ ಕಾರ್ಯದರ್ಶಿ ಕೇಶವ್ ದೇವಾಡಿಗ, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಗೀತಾ ಆರ್.ಶೆಟ್ಟಿ, ವಿನಾಯಕ ಮಿತ್ರ ಮಂಡಳಿಯ ಉಮೇಶ್ ಹಾಗೂ ಅನೇಕ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಕಲಾ ತರಂಗ್ನ ಸಂಘಟಕ ನಿತಿನ್ವಾಸ್ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರೂಪಿಸಿದರು.
ಫಲಿತಾಂಶ
ಸ್ಪರ್ಧೆಯಲ್ಲಿ 13ರಿಂದ 16ವರ್ಷದ ವಿಭಾಗದಲ್ಲಿ ಪ್ರಥಮ ಪ್ರಣಾಮ್ ಶೆಟ್ಟಿ ,ದ್ವಿತೀಯ -ಹರ್ಷಿತ್, 17ರಿಂದ 20ವರ್ಷದ ವಿಭಾಗದಲ್ಲಿ ಪ್ರಥಮ -ನಿಖೇಶ್ ಪೂಜಾರಿ, ದ್ವಿತೀಯ -ಮನೋಹರ್, ಹಾಗೂ 21 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ -ಸಚಿನ್ ಪೂಜಾರಿ, ದ್ವಿತೀಯ ಸುನೀಲ್ ಡಿ’ಸಿಲ್ವಾ ವಿಜೇತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Mangaluru: ಮುಮ್ತಾಜ್ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.