ಸರಕಾರಿ ಅಂಗನವಾಡಿ ಶಾಲೆಯ ನವೀಕರಣ


Team Udayavani, Oct 8, 2017, 9:47 AM IST

8-Mng-1.jpg

ಮಹಾನಗರ: ಅಂಗನವಾಡಿ ಮಕ್ಕಳಿಗೆ ಪೂರಕ ವಾತಾವರಣವಿದ್ದರೆ ಕಲಿಕೆಯೂ ಸಾಂಗವಾಗುತ್ತದೆ. ಇದೇ ಉದ್ದೇಶವನ್ನಿಟ್ಟುಕೊಂಡು ಇಎಲ್‌ಸಿ/ ಸಿಎಫ್‌ಎಎಲ್‌ ಸಂಸ್ಥೆಯು ಸರಕಾರಿ ಅಂಗನವಾಡಿ ಶಾಲೆಯೊಂದನ್ನು ನವೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಗಾಂಧಿ ಜಯಂತಿ ಅಂಗವಾಗಿ ಅರ್ಲಿ ಲರ್ನಿಂಗ್‌ ಸೆಂಟರ್‌ (ಇಎಲ್‌ಸಿ ಕಿಂಡರ್‌ ಗಾರ್ಟನ್‌) ಮತ್ತು ಸೆಂಟರ್‌ ಫಾರ್‌ ಎಡ್ವಾನ್ಸ್‌ಡ್‌ ಲರ್ನಿಂಗ್‌ (ಸಿಎಫ್‌ಎಎಲ್‌) ಕೊಟ್ಟಾರ ಕ್ರಾಸ್‌ನಲ್ಲಿರುವ ಅಂಗನವಾಡಿಯನ್ನು ನವೀಕರಿಸಿ, ಪೂರಕ ಸೌಲಭ್ಯ ಒದಗಿಸಿಕೊಡುವ ಕೆಲಸಕ್ಕೆ ಮುಂದಾಗಿದೆ.ಇದಕ್ಕಾಗಿ ಅ. 8ರಂದು ಬೆಳಗ್ಗೆ 10ರಿಂದ 12. 30ರ ತನಕ ಬಿಜೈ-ಕಾಪಿಕಾಡ್‌ನ‌ಲ್ಲಿರುವ ತನ್ನ ಕ್ಯಾಂಪಸ್‌ನಲ್ಲಿ ಸಂಗ್ರಹಣ ಅಭಿಯಾನ ಆಯೋಜಿಸಿದ್ದು, ಆಸಕ್ತ ಸಾರ್ವಜನಿಕರು ದೇಣಿಗೆ ಸಹಿತ ಅಂಗನವಾಡಿ ಮಕ್ಕಳಿಗೆ ಉಪಯೋಗವಾಗುವಂತಹ ಯಾವುದೇ ವಸ್ತುಗಳನ್ನು ನೀಡಬಹುದು ಎಂದು ಸಂಸ್ಥೆಯ ಸಿಬಂದಿ ತಿಳಿಸಿದ್ದಾರೆ.

ಸ್ವಯಂ ಶಿಕ್ಷಣ ಸೇವೆಗೆ ಅವಕಾಶ
ನವೀಕರಣದ ಅನಂತರ ಅಲ್ಲಿ ಕಲಿಯುವ ಮಕ್ಕಳಿಗೆ ಸಂಸ್ಥೆಯ ಶಿಕ್ಷಕರಿಂದ ಕಲಿಕಾ ಸೌಲಭ್ಯ ಒದಗಿಸುವ ಕಾರ್ಯಕ್ಕೂ ಸಂಸ್ಥೆ ಮುಂದಾಗಿದೆ. ಅಲ್ಲದೆ, ಕಲಿಕೆಯ ಆಸಕ್ತಿ ಹೊಂದಿದವರು ವಾರದಲ್ಲಿ ಒಂದು ಗಂಟೆ ಸ್ವಯಂ ಶಿಕ್ಷಣ ಸೇವೆ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಕಲಿಕಾ ಸಾಮಗ್ರಿ, ಆಟದ ಸಾಮಗ್ರಿ, ಪುಸ್ತಕ, ಮಕ್ಕಳು ಉಪಯೋಗಿಸಬಹುದಾದ ಬಟ್ಟೆ ಬರೆ ಅಥವಾ ಸಣ್ಣ ರೂಪದ ವಂತಿಗೆಯನ್ನು ಸಹ ನೀಡಬಹುದು ಎಂದು ಸಂಸ್ಥೆಯ ಪ್ರಾಂಶುಪಾಲೆ ಸೆವೆರಿನ್‌ ರೊಜಾರಿಯೋ ತಿಳಿಸಿದ್ದಾರೆ.

ಬೆಂಗಳೂರಿನ ಇಂಡಿಯನ್‌ ಮೊಂಟೆನ್ಸರಿ ಸೆಂಟರ್‌ನ ಅಧ್ಯಯನ ಮಂಡಳಿಯ ನಿರ್ದೇಶಕಿ ಗೀತಾ ನಿತ್ಯಾನಂದ ಅವರಿಂದ ಈ ವೇಳೆ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, 150 ರೂ. ಪ್ರವೇಶ ಶುಲ್ಕ ಪಾವತಿಸಬೇಕು. ಈ ಚಂದಾ ಹಣವನ್ನು ಅಂಗನವಾಡಿ ನವೀಕರಣ ಯೋಜನೆಗೆ ಉಪಯೋಗಿಸಲಾಗುವುದು. ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿಯುಳ್ಳ ಹೆತ್ತವರು, ಶಿಕ್ಷಕರು ಮತ್ತು ಸಾರ್ವಜನಿಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಸರಕಾರಿ ಶಾಲೆಗೆ ಉಚಿತ ಎವಿ ಕೊಠಡಿ
ಪ್ರಸ್ತುತ ವರ್ಷ ಸ.ಪ.ಪೂ. ಕಾಲೇಜಿನ 11 ಮಂದಿ ವಿದ್ಯಾರ್ಥಿಗಳು ಇಲ್ಲಿ ಉಚಿತ ಜೆಇಇ / ಸಿಇಟಿ ಪ್ರವೇಶಾತಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಕೊಟ್ಟಾರದಲ್ಲಿರುವ ಜಿ.ಪಂ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ / ಆಡಿಯೋ-ವೀಡಿಯೊ ಕೊಠಡಿ, ಕಂಪ್ಯೂಟರ್‌, ಪ್ರಿಂಟರ್‌, ಪ್ರೊಜೆಕ್ಟರ್‌ ಮತ್ತು ಹೈಸ್ಪೀಡ್‌ ಇಂಟರ್‌ನೆಟ್‌ ಸೇವೆ, ಜತೆಗೆ ಓದುವ, ಕುತೂಹಲಕಾರಿ  ವಿಚಾರಾತ್ಮಕ ಆಲೋಚನೆ ಬೆಳೆಸುವ ನಿಟ್ಟಿನಲ್ಲಿ ನೂರಾರು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಒದಗಿಸಲಾಗಿದೆ. ಡಾ| ಸುಗತಮಿತ್ರ ಅಭಿವೃದ್ಧಿಪಡಿಸಿದ ಸ್ವ ಆಯೋಜಿತ ಕಲಿಕಾ ಪರಿಸರದೊಂದಿಗೆ ಕಂಪ್ಯೂಟರ್‌ ಅಳವಡಿಸಲಾಗಿದೆ. ಓದುವ ಕೊಠಡಿ ಮತ್ತು ಕಂಪ್ಯೂಟರ್‌ ಕೊಠಡಿ ‘ಮಕ್ಕಳು ನಿರ್ದೇಶಿತ ಕಲಿಕೆ’ ಆಧಾರದಲ್ಲಿ ಆರಂಭಿಸಲಾಗಿದ್ದು, ಮಕ್ಕಳು ಪ್ರಾಜೆಕ್ಟ್ ಅಥವಾ ಕಾರ್ಯ ಚಟುವಟಿಕೆಗಳನ್ನು ಸ್ವ ಸಹಾಯದಿಂದಲೇ ನಡೆಸಲು ಶಕ್ತರಾಗಬಹುದು ಎನ್ನುತ್ತಾರೆ ಸೆವೆರಿನ್‌ ರೊಸಾರಿಯೊ. 

ಟಾಪ್ ನ್ಯೂಸ್

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.