5 ತಿಂಗಳೊಳಗೆ ಮತ್ತೆ ದರ ಏರಿಕೆ: ದಿಲ್ಲಿ ಮೆಟ್ರೋ ಪ್ರಯಾಣ ದುಬಾರಿ


Team Udayavani, Oct 10, 2017, 12:14 PM IST

Delhi Metro-700.jpg

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ಜನಸಂಚಾರದ ಜೀವನಾಡಿಯಾಗಿರುವ ದಿಲ್ಲಿ ಮಟ್ರೋ ಪ್ರಯಾಣ ದರ ಇಂದು ಮಂಗಳವಾರದಿಂದ ದುಬಾರಿಯಾಗಿದೆ.

ಐದು ತಿಂಗಳ ಹಿಂದಷ್ಟೇ ಮೆಟ್ರೋ ಪ್ರಯಾಣ ದರವನ್ನು ಏರಿಸಲಾಗಿತ್ತು. ಇದೀಗ ಪುನಃ ದರ ಏರಿಸಲಾಗಿರುವುದು ಜನಸಾಮಾನ್ಯರ ಮೇಲಿನ ಪ್ರಯಾಣ ದರ ಏರಿಕೆಯ ಗಾಯಕ್ಕೆ ಉಪ್ಪು ಸವರಿದಂತಾಗಿದೆ.

ದಿಲ್ಲಿ ಮಟ್ರೋದಲ್ಲಿ 2 ರಿಂದ 5 ಕಿ.ಮೀ. ವರೆಗಿನ ಪ್ರಯಾಣ ದರ ಇಂದಿನಿಂದ 5 ರೂ. ಹೆಚ್ಚಿದೆ. ಐದು ಕಿ.ಮೀ. ಗಿಂತ ಹೆಚ್ಚಿನ ಪ್ರಯಾಣ ಕೈಗೊಳ್ಳುವವರಿಗೆ ಹೆಚ್ಚುವರಿ 10 ರೂ. ದರವನ್ನು ಹೇರಲಾಗಿದೆ. 

ಪರಿಷ್ಕೃತ ದರ ಪಟ್ಟಿ ಈ ರೀತಿ ಇದೆ : 2 ಕಿ.ಮೀ. ವರೆಗೆ : ರೂ.10; 2ರಿಂದ 5 ಕಿ.ಮೀ:  20 ರೂ; 5ರಿಂದ 12 ಕಿ.ಮೀ.: 30 ರೂ; 12ರಿಂದ 21 ಕಿ.ಮೀ : 40 ರೂ; 21ರಿಂದ 32 ಕಿ.ಮೀ: 50 ರೂ; 32 ಕಿ.ಮೀ. ಮೀರುವ ಪ್ರಯಾಣಕ್ಕೆ 60 ರೂ. 

ದಿಲ್ಲಿ ಮೆಟ್ರೋ ಪ್ರಯಾಣಿಕರಲ್ಲಿ ಶೇ.70ರಷ್ಟು ಮಂದಿ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರು; ಇವರಿಗೆ ಪ್ರತಿಯೊಂದು ಪ್ರಯಾಣಕ್ಕೆ ಶೇ.10ರ ರಿಯಾಯಿತಿ ಇದೆ. ಜನ ದಟ್ಟನೆ ಇರದ ಅವಧಿಯಲ್ಲಿ ಪ್ರಯಾಣಿಸಿದರೆ ಅವರಿಗೆ ಹೆಚ್ಚುವರಿ ಶೇ.10ರ ರಿಯಾಯಿತಿ ಇದೆ; ಎಂದರೆ ದಿನದಲ್ಲಿ ಬೆಳಗ್ಗಿನ ಓಡಾಟ ಆರಂಭವಾಗುವಲ್ಲಿಂದ ಬೆಳಗ್ಗೆ 8 ಗಂಟೆಯ ತನಕ, ಮಧ್ಯಾಹ್ನ 12ರಿಂದ 5ರತನಕ ಮತ್ತು ರಾತ್ರಿ 9ರಿಂದ ದಿನದ ಸೇವಾ ಓಡಾಟ ಮುಗಿಯು ತನಕ. 

ದಿಲ್ಲಿ ಮೆಟ್ರೋ ಪ್ರಯಾಣ ದರ ಏರಿಸುವ ಪ್ರಕಟನೆ ಸೋಮವಾರ ಮಧ್ಯರಾತ್ರಿ ಹೊರಡಿಸಲಾಗಿತ್ತು. ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರಕಾರ ಈ ನಿರ್ಧಾರದ ವಿರುದ್ಧ ವಿಧಾನಸಭೆಯಲ್ಲಿ ಠರಾವು ಪಾಸು ಮಾಡಿತ್ತು. 

ದರ ಏರಿಕೆ ಪ್ರಸ್ತಾವವನ್ನು ಸದ್ಯಕ್ಕೆ ತಡೆಹಿಡಿಯಬೇಕೆಂಬ ಕೇಜ್ರಿವಾಲ್‌ ಕೋರಿಕೆಯನ್ನು ಅನುಸರಿಸಿ ನಿರ್ಮಾಣ ಭವನದಲ್ಲಿ ರಾತ್ರಿ 8 ಗಂಟೆಗೆ ಮಂಡಳಿಯು ಸಭೆ ನಡೆಸಿತ್ತು.  

ಟಾಪ್ ನ್ಯೂಸ್

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-delay

Hoax calls; ವಿಮಾನ ಬಳಿಕ, ತಿರುಪತಿ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-delay

Hoax calls; ವಿಮಾನ ಬಳಿಕ, ತಿರುಪತಿ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ!

arrested

7 sharpshooters ಬಂಧನ; ಬಾಬಾ ಸಿದ್ಧಿಕಿ ಹ*ತ್ಯೆ, ಸಲ್ಮಾನ್‌ ಮನೆಗೆ ಫೈರಿಂಗ್‌ ಆರೋಪ

1-adaa

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

2-hospete

Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.