![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 13, 2017, 7:15 AM IST
ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರ ಎಟಿಎಂ ಕಾರ್ಡ್ ದುರುಪಯೋಗಪಡಿಸಿಕೊಂಡ ಹ್ಯಾಕರ್ಗಳು ದೋಚಿದ್ದ ಲಕ್ಷಾಂತರ ರೂ.ಗಳನ್ನು ಕರ್ನಾಟಕ ಬ್ಯಾಂಕ್ ಜೋಶಿ ಅವರ ಖಾತೆಗೆ ಹಣ ಜಮಾ ಮಾಡಿದೆ.
ಕಳೆದ ತಿಂಗಳು ಡಾ| ಭೀಮೇಶ್ವರ ಜೋಶಿ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ಶಾಪಿಂಗ್ ಮಾಡಿ ತಮ್ಮ ಎಟಿಎಂ ಕಾರ್ಡ್ ಬಳಸಿದ್ದರು. ಆ ನಂತರ ಹಲವು ಬಾರಿ ಅವರ ಮೊಬೈಲ್ಗೆ ಖಾತೆಯಿಂದ ಹಣ ತೆಗೆದಿರುವ ಸಂದೇಶ ಬಂದಿತ್ತು. ಹ್ಯಾಕರ್ಗಳು ಒಟ್ಟು 20,89,558 ರೂ.ಗಳನ್ನು ಜೋಶಿ ಖಾತೆಯಿಂದ ಲಪಟಾಯಿಸಿದ್ದರು.
ಈ ಕುರಿತು ಜೋಶಿ ಸೆ.15 ರಂದು ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಂತರ ಖಾತೆಯ ವಿಮಾ ಮತ್ತು ಆರ್ಬಿಐನ ರೆಗ್ಯುಲೇಷನ್ ಆಕ್ಟ್ ಹಾಗೂ ಬೋರ್ಡ್ ಆಫ್ ಡೈರೆಕ್ಟರ್ ಸಭೆಯಲ್ಲಿ ಜೋಶಿ ಖಾತೆಗೆ ಹಣ ಜಮಾ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಅನ್ವಯ ಅ.11ರಂದು ಕರ್ನಾಟಕ ಬ್ಯಾಂಕ್ ಜೋಶಿ ಅವರ ಖಾತೆಗೆ 20,89,558 ರೂ. ಜಮಾ ಮಾಡಿದೆ.
You seem to have an Ad Blocker on.
To continue reading, please turn it off or whitelist Udayavani.