ಆಧಾರ್ನಿಂದ ಸರಕಾರಕ್ಕೆ 900 ಕೋಟಿ ಡಾಲರ್ ಉಳಿತಾಯ: ನಿಲೇಕಣಿ
Team Udayavani, Oct 13, 2017, 3:25 PM IST
ವಾಷಿಂಗ್ಟನ್ : ”ನೂರು ಕೋಟಿಗೂ ಅಧಿಕ ಜನರನ್ನು ನೋಂದಾಯಿಸಲಾಗಿರುವ ಆಧಾರ್ ಕಾರ್ಡ್ ಯೋಜನೆಯಿಂದ ಭಾರತ ಸರಕಾರಕ್ಕೆ 900 ಕೋಟಿ ಡಾಲರ್ ಉಳಿತಾಯವಾಗಿದೆ” ಎಂದು ಆಧಾರ್ ರೂವಾರಿ ನಂದನ್ ನಿಲೇಕಣಿ ಹೇಳಿದ್ದಾರೆ.
ಹಿಂದಿನ ಯುಪಿಎ ಸರಕಾರದಿಂದ ಆರಂಭಿಸಲ್ಪಟ್ಟು , ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇತ್ಲಿ ನೇತೃತ್ವದ ಈಗಿನ ಎನ್ಡಿಎ ಸರಕಾರದಿಂದ ಭಾರೀ ಉತ್ಸಾಹದ ಬೆಂಬಲ ಪಡೆದಿರುವ ಆಧಾರ್ ದೇಶದ ಅತ್ಯಂತ ಮಹತ್ವಾಕಾಂಕ್ಷೀ ಯೋಜನೆಯಾಗಿದೆ ಎಂದು ದೇಶದ ಎರಡನೇ ಬೃಹತ್ ಐಟಿ ಉದ್ಯಮ ಸಂಸ್ಥೆಯ ಕಾರ್ಯ ನಿರ್ವಾಹಕೇತರ ಅಧ್ಯಕ್ಷರಾಗಿರುವ, 62ರ ಹರೆಯದ, ನಿಲೇಕಣಿ ಹೇಳಿದರು.
ಅಭಿವೃದ್ದಿಗಾಗಿ ಡಿಜಿಟಲ್ ಇಕಾನಮಿ ಕುರಿತ ವಿಶ್ವ ಬ್ಯಾಂಕ್ ಮಂಡಳಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನಿಲೇಕಣಿ ಅವರು, ಆಧಾರ ಯೋಜನೆ ನಿಜಕ್ಕೂ ದ್ವಿಪಕ್ಷೀಯ ವಿಷಯವಾಗಿತ್ತು ಎಂದು ಹೇಳಿದರು.
ಅಭಿವೃದ್ದಿಶೀಲ ದೇಶಗಳಿಗೆ ಮಹತ್ತರ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದಕ್ಕೆ ಡಿಜಿಟಲ್ ಮೂಲ ಸೌಕರ್ಯವನ್ನು ರೂಪಿಸುವುದೇ ಹೆಚ್ಚು ಸೂಕ್ತ ಮತ್ತು ಸುಲಭ ಎಂದು ನಿಲೇಕಣಿ ಹೇಳಿದರು.
ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಿಲೇಕಣಿ ಅವರು, “ವಿಶ್ವ ಬ್ಯಾಂಕ್ ಡಿಜಿಟಲ್ ಐಡಿ ಪರಿಕಲ್ಪನೆಯನ್ನು ಆಂತರೀಕರಿಸುವ ಮೂಲಕ ನಿಜಕ್ಕೂ ದೊಡ್ಡ ಕೆಲಸವನ್ನು ಮಾಡಿದೆ’ ಎಂದು ಹೇಳಿದರು.
ಸುಮಾರು 15 – 20 ದೇಶಗಳ ಪ್ರತಿನಿಧಿಗಳು ಡಿಜಿಟಲ್ ಆರ್ಥಿಕಾಭಿವೃದ್ದಿ ಚರ್ಚೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.